ಆ್ಯಪ್ನಗರ

ಉರಗ ರಕ್ಷಕಿಯಾದ ಮುಂಬಯಿ ಮಹಿಳೆ

ವಿವಿಧ ಬಗೆಯ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಮೂಲಕ ವೈಶಾಲಿ ಚೌವ್ಹಾನ್ ಮುಂಬಯಿ ನಗರದಲ್ಲಿ ಚಿರಪರಿಚಿತರಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 5 Mar 2017, 6:44 pm
ಮುಂಬಯಿ: ವಿವಿಧ ಬಗೆಯ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಮೂಲಕ ವೈಶಾಲಿ ಚೌವ್ಹಾನ್ ಮುಂಬಯಿ ನಗರದಲ್ಲಿ ಚಿರಪರಿಚಿತರಾಗಿದ್ದಾರೆ.
Vijaya Karnataka Web these women rescue snakes lost in the mumbais urban jungle
ಉರಗ ರಕ್ಷಕಿಯಾದ ಮುಂಬಯಿ ಮಹಿಳೆ


ಎರಡು ಮಕ್ಕಳ ತಾಯಿಯಾಗಿರುವ ವೈಶಾಲಿ ಚೌವ್ಹಾನ್ (40) ದೇಶಿಯ ಹೆಬ್ಬಾವು, ಕೋಬ್ರಾ ಮತ್ತು ಮಂಡಲ ಹಾವುಗಳು ಸೇರಿದಂತೆ ಹಲವು ಬಗೆಯ ಹಾವುಗಳನ್ನು ರಕ್ಷಣೆ ಮಾಡುವ ಮೂಲಕ ಉರಗ ಪ್ರೇಮ ಮೆರೆದಿದ್ದಾರೆ.

ವೈಶಾಲಿ ಚೌವ್ಹಾನ್ ಅವರ ಅನುಭವ ವಿಶೇಷವಾಗಿ ವ್ಯಂಗ್ಯಾತ್ಮಕವಾಗಿದೆ. ಚೌಹಾನ್ ಅವರ ಪುತ್ರಿಯ ಶಾಲೆಯಲ್ಲಿ ಉರಗ ರಕ್ಷಣೆಯ ಕುರಿತು ಉಪನ್ಯಾಸ ನಡೆಯುತ್ತಿತ್ತು. ಉರಗ ತಜ್ಞನೊಬ್ಬ ವೈಶಾಲಿ ಅವರ ಕೈಗೆ ಹಾವಿರುವ ಬಾಟಲ್ ನೀಡಿ, ಹೆಣ್ಣು ಮಕ್ಕಳು ಜಿರಲೆ ಕಂಡರು ಕಿರುಚ್ಚುತ್ತಾರೆ ಎಂದು ಲೇವಡಿ ಮಾಡಿದ್ದ. ಉರಗ ತಜ್ಞನ ಲೇವಡಿಯನ್ನೇ ಸವಾಲಾಗಿ ಸ್ವೀಕರಿಸಿ ವೈಶಾಲಿ ಈ ಸಾಧನೆ ಮಾಡಿದ್ದಾರೆ.

ಮುಂಬಯಿನ ಕಾಂಕ್ರೀಟ್ ಕಾಡು ಬೆಳೆಯುತ್ತಿದ್ದಂತೆ ಹಾವು ರಕ್ಷಕರ ಅವಶ್ಯಕತೆ ಉತ್ತುಂಗಕ್ಕೇರಿತು. ಹೀಗಾಗಿ ಕೆಲವು ಧೀರ ಮಹಿಳೆಯರು ಹಾವುಗಳ ರಕ್ಷಣೆಗೆ ಮುಂದಾಗುವ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ