ಆ್ಯಪ್ನಗರ

ಕಳ್ಳತನ ಮಾಡಿದ ಅಂಗಡಿಯಲ್ಲಿ ತನ್ನ ಆಧಾರ್‌ ಕಾರ್ಡ್‌ ಬಿಟ್ಟು ಬಂದ ಐನಾತಿ ಕಳ್ಳ!

ಕಳ್ಳನ ಆಧಾರ್‌ ಕಾರ್ಡ್‌ ಆಧಾರದ ಮೇಲೆ ಆತನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ.

Agencies 20 Jul 2019, 5:00 am
ಡೆಹ್ರಾಡೂನ್‌: ಕಿರಾಣಿ ಅಂಗಡಿಯೊಂದರಲ್ಲಿ ಕಳವು ಮಾಡಲು ಹೋಗಿದ್ದ ಐನಾತಿ ಕಳ್ಳನೊಬ್ಬ, ತನ್ನ ಆಧಾರ್‌ ಕಾರ್ಡ್‌ ಅನ್ನು ಅಲ್ಲೇ ಬಿಟ್ಟು ಬಂದು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆದಿದೆ. ಕಳ್ಳನ ಆಧಾರ್‌ ಕಾರ್ಡ್‌ ಆಧಾರದ ಮೇಲೆ ಆತನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ.
Vijaya Karnataka Web thief loots shop gets caught through aadhaar card left behind
ಕಳ್ಳತನ ಮಾಡಿದ ಅಂಗಡಿಯಲ್ಲಿ ತನ್ನ ಆಧಾರ್‌ ಕಾರ್ಡ್‌ ಬಿಟ್ಟು ಬಂದ ಐನಾತಿ ಕಳ್ಳ!


ಇತ್ತೀಚೆಗೆ ಅನಿಲ್‌ ಸೇಠಿ ಎಂಬುವವರ ಕಿರಾಣಿ ಅಂಗಡಿಯ ತಗಡಿನ ಮೇಲ್ಚಾವಣಿ ಮುರಿದು ಆರೋಪಿ ವಸ್ತುಗಳನ್ನೆಲ್ಲಾ ಕದ್ದೊಯ್ದಿದ್ದ. ಜತೆಗೆ ಗಲ್ಲಾಪೆಟ್ಟಿಗೆಯಲ್ಲಿದ್ದ ಅಲ್ಪಸ್ವಲ್ಪ ಚಿಲ್ಲರೆ ಹಣವನ್ನೂ ದೋಚಿದ್ದ. ಕಳ್ಳನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಆತನ ಗುರುತು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಪೊಲೀಸರು ಅಂಗಡಿಯಲ್ಲಿ ಸುಳುವುಗಳಿಗಾಗಿ ಶೋಧಿಸಿದಾಗ ಅಲ್ಲಿ ಪರ್ಸ್‌ವೊಂದು ಬಿದ್ದಿರುವುದು ಕಂಡುಬಂದಿತ್ತು. ಅದರಲ್ಲಿ ಆಧಾರ್‌ ಕಾರ್ಡ್‌ ಕೂಡಾ ಇತ್ತು. ಅದು ಕಳ್ಳನದ್ದೇ ಇರಬಹುದೆಂಬ ಪೊಲೀಸರ ಶಂಕೆ ನಿಜವಾಗಿತ್ತು. ಆರೋಪಿ ನೀರಜ್‌ ಪ್ರಸ್ತುತ ಪೊಲೀಸರ ಅತಿಥಿಯಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಉದ್ಯೋಗ ಸಿಗದ ಕಾರಣ ಕಳ್ಳತನದ ಹಾದಿ ಹಿಡಿದಿದ್ದಾಗಿ ಹೇಳಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ