ಆ್ಯಪ್ನಗರ

ಕೊಲ್ಲಾಪುರ ಬಳಿ ಅಪಘಾತ: 13 ಪ್ರಯಾಣಿಕರು ಸಾವು

ಕೊಲ್ಲಾಪುರ ಜಿಲ್ಲೆಯ ಮಲಕಾಪುರ ಪಟ್ಟಣದ ಸಮೀಪದ ರಸ್ನಾ ಕಾರ್ಖಾನೆ ಬಳಿ ಸೋಮವಾರ ಮಧ್ಯಾಹ್ನ ಟಾಟಾ ಮಹೀಂದ್ರಾ ಜೀಪ್‌ ಹಾಗೂ ಕಂಟೇನರ್‌ ಲಾರಿ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 13 ಜನರು ...

Vijaya Karnataka 21 May 2019, 5:00 am
ಇಚಲಕರಂಜಿ: ಕೊಲ್ಲಾಪುರ ಜಿಲ್ಲೆಯ ಮಲಕಾಪುರ ಪಟ್ಟಣದ ಸಮೀಪದ ರಸ್ನಾ ಕಾರ್ಖಾನೆ ಬಳಿ ಸೋಮವಾರ ಮಧ್ಯಾಹ್ನ ಟಾಟಾ ಮಹೀಂದ್ರಾ ಜೀಪ್‌ ಹಾಗೂ ಕಂಟೇನರ್‌ ಲಾರಿ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 13 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೂವರು ತೀವ್ರ ಗಾಯಗೊಂಡಿದ್ದಾರೆ. ಮಲಕಾಪುರದಿಂದ ಅನುರಾಬಾದ್‌ಗೆ ತೆರಳುತ್ತಿದ್ದ ಟಾಟಾ ಮಹಿಂದ್ರಾ ಜೀಪ್‌ಗೆ ಲಾರಿ ಡಿಕ್ಕಿ ಹೊಡೆದಿದ್ದು, ಜೀಪ್‌ನಲ್ಲಿದ್ದ 13 ಪ್ರಯಾಣಿಕರು ಮೃತ ಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಜೀಪ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮೃತ ದೇಹಗಳನ್ನು ಹೊರ ತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸ ಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ