ಆ್ಯಪ್ನಗರ

ತಿರುವನಂತಪುರದ ಯಾವ್ದೇ ಹೋಟೆಲ್‌ಗೆ ಹೋದ್ರು ಉಚಿತವಾಗಿ ಕುಡಿಯೋ ನೀರು ತುಂಬಿಸಿಕೊಳ್ಳಬಹುದು!

ಹೋಟೆಲ್‌ಗಳ ಹೊರಗೆ ಕುಡಿಯುವ ನೀರಿನ ಟ್ಯಾಂಕ್‌ ಇರಿಸಿರುತ್ತಾರೆ. ದಿನಪೂರ್ತಿ ಯಾವ ಹೊತ್ತಿಗೆ ಬೇಕಿದ್ದರು ಸಾರ್ವಜನಿಕರು ತಮ್ಮ ಬಾಟಲಿಗಳಿಗೆ ನೀರು ತುಂಬಿಸಿಕೊಳ್ಳಬಹುದು. ಇದರಿಂದ ಪ್ಲಾಸ್ಟಿಕ್‌ ಬಾಟಲಿಗಳ ಬಳಕೆ ಕ್ಷೀಣಿಸುತ್ತದೆ.

Vijaya Karnataka Web 9 Dec 2018, 12:37 pm
ತಿರುವನಂತಪುರ: ಪ್ಲಾಸ್ಟಿಟ್‌ ಬಾಟಲಿಗಳ ಬಳಕೆಯನ್ನು ನಿಯಂತ್ರಿಸಲು ಕೇರಳದ ತಿರುವನಂತಪುರ ನಗರವು ಪರಿಣಾಮಕಾರಿ ಹೆಜ್ಜೆಯಿಟ್ಟಿದೆ. ಇಲ್ಲಿನ ಎಲ್ಲಾ ಹೋಟೆಲ್‌ಗಳಿಂದ ಉಚಿತವಾಗಿ ಬಾಟಲಿಗೆ ಕುಡಿಯುವ ನೀರು ತುಂಬಿಸಿಕೊಳ್ಳಬಹುದಾಗಿದೆ.
Vijaya Karnataka Web Plastic Bottels


ಟೈಮ್ಸ್‌ ಆಫ್‌ ಇಂಡಿಯಾದ ವರದಿ ಪ್ರಕಾರ ಕೇರಳ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಅಸೋಸಿಯೇಷನ್‌ (ಕೆಎಚ್‌ಆರ್‌ಎ) ಜಿಲ್ಲಾ ಪ್ರತಿನಿಧಿಗಳು ಒಟ್ಟಾಗಿ ಸಾರ್ವಜನಿಕರಿಗೆ ಉಚಿತವಾಗಿ ನೀರು ಸರಬರಾಜು ಮಾಡಲು ನಿರ್ಧರಿಸಿದ್ದಾರೆ.

ಉಚಿತವಾಗಿ ಕುಡಿಯುವ ನೀರು ನೀಡಲು ಎಲ್ಲ ಹೋಟೆಲ್‌ ಮಾಲಿಕರು ಮುಂದೆ ಬರಬೇಕು. ಇದು ಪ್ರಕೃತಿ ಸ್ನೇಹಿ ನಡೆಯಾಗಿದೆ. ಇದರಿಂದ ಪ್ಲಾಸ್ಟಿಕ್‌ ಬಾಟಲಿಗಳ ಬಳಕೆ ಕಡಿಮೆಯಾಗಲಿವೆ ಎಂದು ಜಿಲ್ಲಾ ಕಲೆಕ್ಟರ್‌ ಕೆ ವಾಸುಕಿ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ಹೋಟೆಲ್‌ಗಳ ಹೊರಗೆ ಕುಡಿಯುವ ನೀರಿನ ಟ್ಯಾಂಕ್‌ ಇರಿಸಿರುತ್ತಾರೆ. ದಿನಪೂರ್ತಿ ಯಾವ ಹೊತ್ತಿಗೆ ಬೇಕಿದ್ದರು ಸಾರ್ವಜನಿಕರು ತಮ್ಮ ಬಾಟಲಿಗಳಿಗೆ ನೀರು ತುಂಬಿಸಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ