ಆ್ಯಪ್ನಗರ

ಮೆಕ್ಯಾನಿಕ್ ಗಣೇಶ ಬರೆಯುತ್ತಿದ್ದಾನೆ ನೋಡಿ: ಆಫ್ಟರ್ ವಿಸ್ಕಿ, ಡ್ರೈವಿಂಗ್ ರಿಸ್ಕಿ

ವೇದವ್ಯಾಸರ ನಿರೂಪಣೆಯಲ್ಲಿ ಗಣೇಶ ಮಹಾಭಾರತವನ್ನು ಬರೆದ ಕಥೆ ಪುರಾಣಗಳಲ್ಲಿದೆ. ಸದ್ಯಕ್ಕೆ ನಮ್ಮ ಗಣಪ ಅದರಿಂದ ಬ್ರೇಕ್ ತೆಗೆದುಕೊಂಡಂತಿದೆ. ಪಣಜಿಯ ಮಾಲಾದಲ್ಲಾತ ರಸ್ತೆ ಸುರಕ್ಷತೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಬರೆಯುತ್ತಿದ್ದಾನೆ.

TIMESOFINDIA.COM 16 Sep 2018, 3:44 pm
ಪಣಜಿ: ವೇದವ್ಯಾಸರ ನಿರೂಪಣೆಯಲ್ಲಿ ಗಣೇಶ ಮಹಾಭಾರತವನ್ನು ಬರೆದ ಕಥೆ ಪುರಾಣಗಳಲ್ಲಿದೆ. ಸದ್ಯಕ್ಕೆ ನಮ್ಮ ಗಣಪ ಅದರಿಂದ ಬ್ರೇಕ್ ತೆಗೆದುಕೊಂಡಂತಿದೆ. ಪಣಜಿಯ ಮಾಲಾದಲ್ಲಾತ ರಸ್ತೆ ಸುರಕ್ಷತೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಬರೆಯುತ್ತಿದ್ದಾನೆ.
Vijaya Karnataka Web Ganesh


ಹೌದು, ಮಾಲಾದ ಪಾರಂಪರಿಕ ತಾಣ ಫಾಂಟೆ ಫೀನಿಕ್ಸ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಮೆಕ್ಯಾನಿಕ್ ಗಣೇಶ್ ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದಾನೆ. ಇಲ್ಲಿ ವಿಘ್ನ ವಿನಾಶಕ ವಕ್ರತುಂಡ ತನ್ನ ಭಕ್ತರಿಗೆ ಸಾಮಾಜಿಕ ಸಂದೇಶ ನೀಡುತ್ತಿದ್ದಾನೆ.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಯುವ ಎಂಬ ಸಂಸ್ಥೆ ಈ ವಿಭಿನ್ನ ಗಣೇಶ ಮೂರ್ತಿಯನ್ನು ತಯಾರು ಮಾಡಿದೆ. ರಸ್ಪ್‌ಬೆರ್ರಿ ಪೈ ಸಾಧನ, ಮೋಟರ್, ಆಯಸ್ಕಾಂತೀಯ ಸಂವೇದಕಗಳು ಹಾಗೂ ಥರ್ಮಲ್ ಪ್ರಿಂಟರ್ ಅನ್ನು ಬಳಸಿ ಈ ಗಣೇಶನ ಮೂರ್ತಿಯನ್ನು ತಯಾರು ಮಾಡಲಾಗಿದೆ.

ಭಕ್ತರು ಗಂಟೆಯನ್ನು ಬಾರಿಸಿದಾಗ ಗಣೇಶನ ಮೂರ್ತಿಯ ತಲೆ ಅಲ್ಲಾಡುತ್ತದೆ ಮತ್ತು ಕೈಯಿಂದ ಬರೆಯುತ್ತಿರುವಂತೆ ಭಾಸವಾಗುತ್ತದೆ. ಬರೆಯುವುದು ಕೊನೆಗೊಂಡಾಗ ಮೂರ್ತಿಗೆ ಸಂಪರ್ಕ ಕಲ್ಪಿಸಲಾಗಿರುವ ಥರ್ಮಲ್ ಪ್ರಿಂಟರ್ ಸಾಮಾಜಿಕ ಸಂದೇಶವನ್ನು ಮುದ್ರಿಸುತ್ತದೆ. ಅದನ್ನು ಭಕ್ತಾದಿಗಳು ತೆಗೆದುಕೊಂಡು ಹೋಗಬಹುದು.

ತನ್ನ ಲೇಖನಿ ಮೂಲಕ ಕುರುಕ್ಷೇತ್ರ ಯುದ್ಧವನ್ನು ವಿವರಿದ್ದ ಗಣೇಶನಿಂದ ಯುವ ಸಂಘಟನೆ ಈಗ ರಸ್ತೆ ಸುರಕ್ಷತೆ, ಪ್ಲಾಸ್ಟಿಕ ಬಳಕೆ ನಿಯಂತ್ರಣ, ಸ್ವಚ್ಛತೆ, ಮಾಲಿನ್ಯ, ಮಹಿಳಾ ಸಬಲೀಕರಣ ಇತ್ಯಾದಿ ಸಂದೇಶಗಳನ್ನು ಬರೆಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ