ಆ್ಯಪ್ನಗರ

ಕರಸೇವಕರನ್ನು ಮರೆತವರು ರಾಮದ್ರೋಹಿಗಳು - ಶಿವಸೇನೆ ಕಿಡಿ

ಕರಸೇವಕರಂಥ ತ್ಯಾಗಮಯಿಗಳನ್ನೇ ಮರೆತು ಕಾರ್ಯಕ್ರಮ ನಡೆಸಲಾಯಿತು. ಇದು ರಾಮ ದ್ರೋಹಿಗಳ ಕೃತ್ಯ ಎಂದಿರುವ ಶಿವಸೇನೆ, ಮಂದಿರ ಹೋರಾಟದಲ್ಲಿ ಪಾಲ್ಗೊಂಡಿದ್ದ ತಮಗೂ ಆಹ್ವಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

Agencies 5 Aug 2020, 8:57 pm

ಮುಂಬಯಿ: ಮಂದಿರ ಭೂಮಿ ಪೂಜೆ ಸಂದರ್ಭ ಕರಸೇವಕರ ತ್ಯಾಗ ಬಲಿದಾನ ಮರೆತವರು ‘ರಾಮ ದ್ರೋಹಿ’ಗಳು ಎಂದು ಬಿಜೆಪಿ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ಮಾಡಿದೆ.
Vijaya Karnataka Web uddhav thackeray


"‘ಭೂಮಿ ಪೂಜೆ’ ಕಾರ್ಯಕ್ರಮವು ಇಡೀ ದೇಶದ ಹಾಗೂ ಹಿಂದೂಗಳೆಲ್ಲರ ಕಾರ್ಯಕ್ರಮ. ಆದರೆ ಬುಧವಾರ ಅಯೋಧ್ಯೆಯಲ್ಲಿ ಭೂಮಿಪೂಜೆಗೆ ನಡೆಸಿರುವ ಸಿದ್ಧತೆ ನೋಡಿದರೆ ಆಘಾತ ಉಂಟಾಗುತ್ತದೆ. ಬೇರೆ ಯಾರಿಗೂ ಮಂದಿರ ನಿರ್ಮಾಣದ ಶ್ರೇಯಸ್ಸು ಸಲ್ಲಬಾರದು ಎನ್ನುವ ಉದ್ಧಟತನ ಕಾಣಿಸುತ್ತಿದೆ," ಎಂದು ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ಶಿವಸೇನೆ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಕಿಡಿಕಾರಿದೆ.

"ಎಲ್ಲಿ ರಾಮ ಮಂದಿರ ತಲೆ ಎತ್ತಲಿದೆಯೋ ಅಲ್ಲಿ ಕರಸೇವಕರ ಬಲಿದಾನದ ವಾಸನೆ ಇದೆ. ಅಂತಹ ತ್ಯಾಗಮಯಿಗಳನ್ನೇ ಮರೆತು ಕಾರ್ಯಕ್ರಮ ನಡೆಸಲಾಯಿತು. ಇದು ರಾಮ ದ್ರೋಹಿಗಳ ಕೃತ್ಯ. ಅಯೋಧ್ಯೆ ಭೂ ವ್ಯಾಜ್ಯ ಬಿಕ್ಕಟ್ಟನ್ನು ಬಗೆಹರಿಸಿ ಕಳೆದ ವರ್ಷ ಐತಿಹಾಸಿಕ ತೀರ್ಪು ನೀಡಿದ್ದ ನಿವೃತ್ತ ಸಿಜೆಐ ರಂಜನ್‌ ಗೊಗೊಯ್‌ ಅವರನ್ನು ಆಹ್ವಾನಿಸದಿರುವುದು ಕೂಡ ದ್ರೋಹದ ಕೆಲಸ. ಮಂದಿರ ಹೋರಾಟದಲ್ಲಿ ಪಾಲ್ಗೊಂಡಿದ್ದ ಶಿವಸೇನೆಗೂ ಆಹ್ವಾನ ನೀಡಿಲ್ಲ,’’ ಎಂದು ಸಾಮ್ನಾ ಬೇಸರ ವ್ಯಕ್ತಪಡಿಸಿದೆ.

ಪ್ರಜಾಪ್ರಭುತ್ವದ ಸೋಲು: ಮೋದಿ ಅಯೋಧ್ಯೆ ಭೂಮಿ ಪೂಜೆಗೆ ಅಸಾದುದ್ದೀನ್ ಒವೈಸಿ ವಿರೋಧ!

‘‘ಮೋದಿ ಅವರ ಆಡಳಿತಾವಧಿಯಲ್ಲಿ ಮಂದಿರ ಬಿಕ್ಕಟ್ಟು ಇತ್ಯರ್ಥಗೊಂಡಿದೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳಬೇಕಿದೆ. ಇಲ್ಲದೇ ಹೋಗಿದ್ದರೆ, ನಿವೃತ್ತಿಯ ನಂತರ ರಂಜನ್‌ ಗೊಗೊಯ್‌ ಅವರು ರಾಜ್ಯಸಭೆ ಸದಸ್ಯರಾಗುತ್ತಿರಲಿಲ್ಲ," ಎಂದು ಶಿವಸೇನೆ ಅಣಕವಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ