ಆ್ಯಪ್ನಗರ

ಕಣಿವೆಯಲ್ಲಿ ಉಗ್ರರ ಗುಂಡಿಗೆ ಮೂವರು ಬಿಜೆಪಿ ನಾಯಕರು ಬಲಿ: ಕುಲ್ಗಾಮ್ ಸ್ತಬ್ಧ!

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಮೂವರು ಯುವ ಬಿಜೆಪಿ ನಾಯಕರು ಬಲಿಯಾಗಿದ್ದಾರೆ. ಕುಲ್ಗಾಮ್ ಜಿಲ್ಲೆಯ ವೈಕೆ ಪೊರಾ ಬಳಿ ಕಾರಿನಲ್ಲಿ ಬರುತ್ತಿದ್ದ ಬಿಜೆಪಿ ನಾಯಕರಾದ ಫಿದಾ ಹುಸೇನ್ ಯಾಟೂ, ಉಮರ್ ರಷಿದ್ ಹಾಗೂ ರಮ್ಜಾನ್ ಹಜಮ್ ಎಂಬುವವರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದಾರೆ.

Vijaya Karnataka Web 29 Oct 2020, 11:42 pm
ಕುಲ್ಗಾಮ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಮೂವರು ಯುವ ಬಿಜೆಪಿ ನಾಯಕರು ಬಲಿಯಾಗಿದ್ದಾರೆ.

ಇಲ್ಲಿನ ಕುಲ್ಗಾಮ್ ಜಿಲ್ಲೆಯ ವೈಕೆ ಪೊರಾ ಬಳಿ ಕಾರಿನಲ್ಲಿ ಬರುತ್ತಿದ್ದ ಬಿಜೆಪಿ ನಾಯಕರಾದ ಫಿದಾ ಹುಸೇನ್ ಯಾಟೂ, ಉಮರ್ ರಷಿದ್ ಹಾಗೂ ರಮ್ಜಾನ್ ಹಜಮ್ ಎಂಬುವವರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದಾರೆ.

ಈ ಮೂವರೂ ಬಿಜೆಪಿ ನಾಯಕರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು, ಮೂವರನ್ನೂ ಬಲಿ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.

ಉಗ್ರರಿಂದ ಕಣಿವೆಯ ಯುವ ಬಿಜೆಪಿ ನಾಯಕನ ಹತ್ಯೆ: ತಂದೆ, ಸಹೋದರನನ್ನೂ ಬಿಡದ ದುಷ್ಟರು!

ಕಾರಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಮೂವರೂ ನಾಯಕರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಲೋಪವೇ ಬಿಜೆಪಿ ನಾಯಕನ ಹತ್ಯೆಗೆ ಕಾರಣ, ಸಿಬ್ಬಂದಿ ಪೊಲೀಸ್‌ ವಶಕ್ಕೆ!

ಸದ್ಯ ಭೀಕರ ಭಯೋತ್ಪಾದಕ ದಾಳಿಯಿಂದ ಕುಲ್ಗಾಮ್ ಸ್ತಬ್ಧವಾಗಿದ್ದು, ದಾಳಿಕೋರ ಭಯೋತ್ಪಾದಕರಿಗೆ ಶೋಧ ಕಾರ್ಯ ಆರಂಭವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ