ಆ್ಯಪ್ನಗರ

ರೈಲು ನಿಲ್ದಾಣದಲ್ಲಿ ತಾಯಿಯ ಸಾವು: ಅಂತ್ಯಕ್ರಿಯೆಗಾಗಿ ಬಡ ಬಾಲಕನಿಗೆ ನೆರವಾದ ಯುವಕರು

ನಲ್ಲಪೊಪರಾ ರೈಲು ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ತಾಯಿ ಕುಸಿದು ಮೃತಪಟ್ಟು ದಿಕ್ಕು ತೋಚದೆ ಕುಳಿತ ಬಾಲಕನಿಗೆ ಮೂವರು ಯುವಕರು ನೆರವು ನೀಡಿದ್ದಾರೆ.

Mumbai Mirror 27 Oct 2017, 12:06 pm
ಮುಂಬಯಿ: ನಲ್ಲಪೊಪರಾ ರೈಲು ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ತಾಯಿ ಕುಸಿದು ಮೃತಪಟ್ಟು ದಿಕ್ಕು ತೋಚದೆ ಕುಳಿತ ಬಾಲಕನಿಗೆ ಮೂವರು ಯುವಕರು ನೆರವು ನೀಡಿದ್ದಾರೆ. ಈ ಯುವಕರು ಇತರ ಪ್ರಯಾಣಿಕರಿಂದ ವಂತಿಗೆ ಸಂಗ್ರಹಿಸಿ ತಾಯಿಯ ಶವವನ್ನು ಮನೆಗೆ ಒಯ್ಯಲು ಬಾಲಕನಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
Vijaya Karnataka Web three samaritans use crowdfunding to help boy take mothers body home
ರೈಲು ನಿಲ್ದಾಣದಲ್ಲಿ ತಾಯಿಯ ಸಾವು: ಅಂತ್ಯಕ್ರಿಯೆಗಾಗಿ ಬಡ ಬಾಲಕನಿಗೆ ನೆರವಾದ ಯುವಕರು


ಬಾಲಕನ ತಂದೆಯು ಮಗ ಮತ್ತು ತಾಯಿಯನ್ನು ತ್ಯಜಿಸಿದ್ದ. ತಾಯಿ ಮೃತಪಟ್ಟಿರುವ ವಿಷಯವನ್ನು ಕರೆ ಮಾಡಿ ಬಾಲಕ ತಿಳಿಸಿದರೂ ಆತ ಬರಲಾಗುತ್ತಿಲ್ಲವೆಂದು ನೆಪ ಹೇಳಿದ್ದಾನೆ. ಮಗ ಬಿಟ್ಟು ಮೃತ ಮಹಿಳೆಯ ಜತೆ ಯಾರೂ ಸಂಬಂಧಿಕರು ಇರಲಿಲ್ಲ.

ರೈಲು ನಿಲ್ದಾಣದಲ್ಲಿ ವರ್ಷಾ ಗಾಯಕ್‌ವಾಡ್‌ ಮೃತಪಟ್ಟಿದ್ದನ್ನು ಗಮನಸಿದ ಸಂಜಯ್‌ ಯಾದವ್‌ ಸ್ನೇಹಿತರಾದ ಸುಶೀಲ್‌ ಮಿಶ್ರಾ ಮತ್ತು ವಿಜಯ್‌ ಸಿಂಗ್‌ಗೆ ಕರೆ ಮಾಡುತ್ತಾರೆ.

ನಲ್ವತ್ತು ವರ್ಷದ ವರ್ಷಾ ಗಾಯಕ್‌ವಾಡ್‌ ನಲ್ಲಸೊಪೊರಾದ ನಿವಾಸಿ, ಇವರ ಪತಿ ಅರವಿಂದ್‌ ಪಾಲ್‌ ಉತ್ತರಪ್ರದೇಶದ ನಿವಾಸಿ. ಹದಿನೈದು ವರ್ಷದ ಮಗ ಕರಣ್‌ ಪಾಲ್‌ ಜತೆ ವಾಸವಿದ್ದರು. ರೈಲು ನಿಲ್ದಾಣದಲ್ಲಿ ರಾತ್ರಿ 8.50 ಕ್ಕೆ ಇದ್ದಕ್ಕಿದ್ದಂತೆ ಕುಸಿದು ಮೃತಪಟ್ಟಿದ್ದಾರೆ.

ತಂದೆಗೆ ಕರೆ ಮಾಡಿ ವಿಷಯ ತಿಳಿಸಿದರೂ ಸ್ಪಂದಿಸದೆ ಬೈಯ್ದ ಕಾರಣ ಕರಣ್‌ಪಾಲ್‌ ನಿರಾಶನಾಗಿ ತಾನೇನು ಮಾಡಲಿ ಅಳಲಾರಂಭಿಸಿದ್ದ. ಸಹಾಯ ಮಾಡಲು ಮುಂದಾದ ಸಂಜಯ್‌ ಯಾದವ್‌, ಸುಶೀಲ್‌ ಮಿಶ್ರಾ ಮತ್ತು ವಿಜಯ್‌ ಸಿಂಗ್‌ ಅವರಲ್ಲಿ ಮಹಿಳೆಯ ಶವವನ್ನು ಆಸ್ಪತ್ರೆಯಿಂದ ಮನೆಗೆ ಒಯ್ದು ಸಂಸ್ಕಾರ ಮಾಡಸಲು ಸಾಕಾಗುವಷ್ಟು ಹಣ ಇರಲಿಲ್ಲ. ಆಗ ಅಲ್ಲಿದ್ದ ಇತರ ಪ್ರಯಾಣಿಕರಲ್ಲಿ ಹಣ ಕೇಳಲು ನಿರ್ಧರಿಸಿದರು. ಕೊನೆಗೂ ಆರು ಸಾವಿರ ರೂ. ಸಂಗ್ರಹವಾಯಿತು. ಮೃತದೇಹವನ್ನು ಮನೆಗೆ ಒಯ್ದು ಅಂತಿಮ ಸಂಸ್ಕಾರ ನಡೆಸಲಾಯಿತು. ನಾಂದೇಡ್‌ ಮತ್ತು ಔರಂಗಬಾದ್‌ನಲ್ಲಿರುವ ಸೋದರಿಯರು ಆಗಮಿಸಿ ಮಹಿಳೆಯ ಅಂತ್ಯಸಂಸ್ಕರದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ