ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಭದ್ರತಾ ಸನ್ನಿವೇಶ ಆತಂಕಕಾರಿಯಾಗಿದೆ ಎಂಬ ಹೇಳಿಕೆ ನೀಡಿರುವ ರಾಜ್ಯಪಾಲ ಜಗದೀಪ್ ಧನಕರ್ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ರಾಜ್ಯಪಾಲರು ತಮ್ಮ ಸ್ವಯಂ ಕ್ಷಮಾಪಣೆಯನ್ನು ದಿಲ್ಲಿಗೆ ವಾಪಸ್ ತೆಗೆದುಕೊಂಡು ಹೋಗಿ ಬೇರೆ ಕೆಲಸ ಹುಡುಕಿಕೊಳ್ಳಲಿ ಎಂದು ಅವರು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಅತೀವ ಅಪಾಯಕಾರಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಉಂಟಾಗಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಅವರು ಟ್ವಿಟ್ಟರ್ನಲ್ಲಿ ಆರೋಪ ಮಾಡಿದ ಬಳಿಕ ಮೊಯಿತ್ರಾ ಈ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲ ಧನಕರ್ ಅವರನ್ನು 'ಅಂಕಲ್' ಎಂದು ವ್ಯಂಗ್ಯವಾಗಿ ಕರೆದಿರುವ ಮೊಯಿತ್ರಾ, ರಾಜ್ಯಪಾಲರಿಗೆ ಬೇರೆ ಎರಡು ಕೆಲಸಗಳ ಬಗ್ಗೆ ಸಲಹೆ ನೀಡಿ ಲೇವಡಿಮಾಡಿದ್ದಾರೆ.
'ಅಂಕಲ್ಜಿ, ಪಶ್ಚಿಮ ಬಂಗಾಳದ ಕ್ರೂರ ಸನ್ನಿವೇಶವು ನೀವು ನಿಮ್ಮ ಸ್ವ ಕ್ಷಮಾಪಣೆಯನ್ನು ದೆಹಲಿಗೆ ವರ್ಗಾಯಿಸಿದರೆ ಮತ್ತು ಬೇರೊಂದು ಕೆಲಸ ಹುಡುಕಿಕೊಂಡರೆ ಸುಧಾರಣೆಯಾಗುತ್ತದೆ.
ಕೆಲವು ಸಲಹೆಗಳು:
1. ಅಜಯ್ ಬಿಷ್ಟ್ ಯೋಗಿ ಅವರಿಗೆ (ಯೋಗಿ ಆದಿತ್ಯನಾಥ್) ವಿರೋಧಿಗಳನ್ನು ಹತ್ತಿಕ್ಕುವುದು ಹೇಗೆ ಎಂಬ ಸಲಹೆಗಾರರಾಗಿ.
2. ಸಾಂಕ್ರಾಮಿಕವೊಂದರ ಸಂದರ್ಭದಲ್ಲಿ ಹೇಗೆ ಅಡಗಿಕೊಳ್ಳುವುದು ಎಂಬ ಬಗ್ಗೆ ಗೃಹ ಸಚಿವರಿಗೆ ಸಲಹೆಗಾರರಾಗಿ' ಎಂದು ವ್ಯಂಗ್ಯವಾದ ಟ್ವೀಟ್ ಮಾಡಿದ್ದಾರೆ.
'ಹಾಗೆಯೇ ಅಂಕಲ್ಜಿ, ನೀವು ಅಲ್ಲಿಗೆ ಹೋಗುವಾಗ ಪಶ್ಚಿಮ ಬಂಗಾಳದಲ್ಲಿ ರಾಜಭವನದಲ್ಲಿ ನೀವು ನೆಲೆಯೂರಿಸಿರುವ ವಿಸ್ತೃತ ಕುಟುಂಬವನ್ನೂ ತೆಗೆದುಕೊಂಡು ಹೋಗಿ' ಎಂದು, ಬಂಗಾಳ ರಾಜಭವನದಲ್ಲಿ ನೆಲೆಸಿರುವ ಅವರ ಕುಟುಂಬದವರ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
'ಬಹಳ ಎಚ್ಚರಿಕೆಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ. ಭದ್ರತಾ ಪರಿಸರವು ಬಹು ಗಂಭೀರವಾಗಿ ದುರ್ಬಲಗೊಂಡಿದೆ. ಇಂತಹ ಕೆಟ್ಟ ಸನ್ನಿವೇಶದಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಕುರಿತು ಹಾಗೂ ಚುನಾವಣೆ ನಂತರದ ಹಿಂಸಾಚಾರವನ್ನು ನಿಯಂತ್ರಿಸಲು ತೆಗೆದುಕೊಂಡ ಎಲ್ಲ ಕ್ರಮಗಳ ಬಗ್ಗೆ ವಿವರಣೆ ಪಡೆಯಲು ಜೂನ್ 7ರಂದು ಮುಖ್ಯ ಕಾರ್ಯದರ್ಶಿ ಅವರಿಗೆ ಕರೆ ಮಾಡಿದ್ದೆ' ಎಂದು ಜಗದೀಪ್ ಧನಕರ್ ಟ್ವೀಟ್ ಮಾಡಿದ್ದರು.
ರಾಜ್ಯಪಾಲ ಧನಕರ್ ಅವರನ್ನು 'ಅಂಕಲ್' ಎಂದು ವ್ಯಂಗ್ಯವಾಗಿ ಕರೆದಿರುವ ಮೊಯಿತ್ರಾ, ರಾಜ್ಯಪಾಲರಿಗೆ ಬೇರೆ ಎರಡು ಕೆಲಸಗಳ ಬಗ್ಗೆ ಸಲಹೆ ನೀಡಿ ಲೇವಡಿಮಾಡಿದ್ದಾರೆ.
'ಅಂಕಲ್ಜಿ, ಪಶ್ಚಿಮ ಬಂಗಾಳದ ಕ್ರೂರ ಸನ್ನಿವೇಶವು ನೀವು ನಿಮ್ಮ ಸ್ವ ಕ್ಷಮಾಪಣೆಯನ್ನು ದೆಹಲಿಗೆ ವರ್ಗಾಯಿಸಿದರೆ ಮತ್ತು ಬೇರೊಂದು ಕೆಲಸ ಹುಡುಕಿಕೊಂಡರೆ ಸುಧಾರಣೆಯಾಗುತ್ತದೆ.
ಕೆಲವು ಸಲಹೆಗಳು:
1. ಅಜಯ್ ಬಿಷ್ಟ್ ಯೋಗಿ ಅವರಿಗೆ (ಯೋಗಿ ಆದಿತ್ಯನಾಥ್) ವಿರೋಧಿಗಳನ್ನು ಹತ್ತಿಕ್ಕುವುದು ಹೇಗೆ ಎಂಬ ಸಲಹೆಗಾರರಾಗಿ.
2. ಸಾಂಕ್ರಾಮಿಕವೊಂದರ ಸಂದರ್ಭದಲ್ಲಿ ಹೇಗೆ ಅಡಗಿಕೊಳ್ಳುವುದು ಎಂಬ ಬಗ್ಗೆ ಗೃಹ ಸಚಿವರಿಗೆ ಸಲಹೆಗಾರರಾಗಿ' ಎಂದು ವ್ಯಂಗ್ಯವಾದ ಟ್ವೀಟ್ ಮಾಡಿದ್ದಾರೆ.
'ಹಾಗೆಯೇ ಅಂಕಲ್ಜಿ, ನೀವು ಅಲ್ಲಿಗೆ ಹೋಗುವಾಗ ಪಶ್ಚಿಮ ಬಂಗಾಳದಲ್ಲಿ ರಾಜಭವನದಲ್ಲಿ ನೀವು ನೆಲೆಯೂರಿಸಿರುವ ವಿಸ್ತೃತ ಕುಟುಂಬವನ್ನೂ ತೆಗೆದುಕೊಂಡು ಹೋಗಿ' ಎಂದು, ಬಂಗಾಳ ರಾಜಭವನದಲ್ಲಿ ನೆಲೆಸಿರುವ ಅವರ ಕುಟುಂಬದವರ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
'ಬಹಳ ಎಚ್ಚರಿಕೆಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ. ಭದ್ರತಾ ಪರಿಸರವು ಬಹು ಗಂಭೀರವಾಗಿ ದುರ್ಬಲಗೊಂಡಿದೆ. ಇಂತಹ ಕೆಟ್ಟ ಸನ್ನಿವೇಶದಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಕುರಿತು ಹಾಗೂ ಚುನಾವಣೆ ನಂತರದ ಹಿಂಸಾಚಾರವನ್ನು ನಿಯಂತ್ರಿಸಲು ತೆಗೆದುಕೊಂಡ ಎಲ್ಲ ಕ್ರಮಗಳ ಬಗ್ಗೆ ವಿವರಣೆ ಪಡೆಯಲು ಜೂನ್ 7ರಂದು ಮುಖ್ಯ ಕಾರ್ಯದರ್ಶಿ ಅವರಿಗೆ ಕರೆ ಮಾಡಿದ್ದೆ' ಎಂದು ಜಗದೀಪ್ ಧನಕರ್ ಟ್ವೀಟ್ ಮಾಡಿದ್ದರು.