ಆ್ಯಪ್ನಗರ

ವಿವಾದಕ್ಕೆ ಗುರಿಯಾಗಿದ್ದ ‘ಗೋಲಿ ಮಾರೋ’ ಘೋಷಣೆಯಿಂದ ಹಿಂದೆ ಸರಿದ ಟಿಎಂಸಿ..!

‘ಗುಂಡಿಕ್ಕುವ ಕುರಿತಾದ ಹೇಳಿಕೆ ವಾಸ್ತವತೆಯಿಂದ ದೂರ. ಆದರೂ ಇಂಥ ಘೋಷಣೆಗಳನ್ನು ಕೂಗುವುದು ತಪ್ಪಾಗುತ್ತದೆ. ಜಾಥಾಗಳಲ್ಲಿ ಮುಖ್ಯವಾಗಿ ಹಿಂಸೆಗೆ ಪ್ರಚೋದನೆ ನೀಡುವ ಅಪರಾಧ ಕೃತ್ಯದ ಪರವಾಗಿ ಘೋಷಣೆಗಳನ್ನು ಕೂಗಬಾರದು’ ಎಂದು ಹೇಳುವ ಮೂಲಕ ಕುನಾಲ್‌ ಜಾರಿಕೊಂಡಿದ್ದಾರೆ.

Vijaya Karnataka Web 21 Jan 2021, 8:24 am
ಕೋಲ್ಕೊತಾ: ಇತ್ತೀಚೆಗೆ ನಡೆದ ಪಕ್ಷದ ಜಾಥಾವೊಂದರಲ್ಲಿ ಕಾರ್ಯಕರ್ತರು ಆಕ್ರೋಶಭರಿತರಾಗಿ ‘ಬಂಗಾಳಕ್ಕೆ ದ್ರೋಹ ಬಗೆಯುವವರಿಗೆ ಗುಂಡಿಕ್ಕಿ’ ಎಂದು ಕೂಗಿರುವ ಘೋಷಣೆ ತೀವ್ರ ವಿವಾದಕ್ಕೆ ಗುರಿಯಾದ ಬೆನ್ನಿಗೇ ಆಡಳಿತಾರೂಢ ಟಿಎಂಸಿ ಮುಖಂಡರು ಇದರಿಂದ ದೂರ ಸರಿಯುತ್ತಿದ್ದಾರೆ.
Vijaya Karnataka Web Kunal Ghosh
TMC spokesperson Kunal Ghosh. (File photo)


ಬಿಸಿ ರಕ್ತದ ಯುವ ಕಾರ್ಯಕರ್ತರು ಉದ್ಧಟತನ ಎಂದು ಘೋಷಣೆಯನ್ನು ಬಣ್ಣಿಸಿರುವ ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ಅವರು ಯಾವುದೇ ಕಾರಣಕ್ಕೂ ಈ ಹೇಳಿಕೆಯನ್ನು ಪಕ್ಷ ಬೆಂಬಲಿಸಲ್ಲ ಎಂದಿದ್ದಾರೆ. ‘ಗುಂಡಿಕ್ಕುವ ಕುರಿತಾದ ಹೇಳಿಕೆ ವಾಸ್ತವತೆಯಿಂದ ದೂರ. ಆದರೂ ಇಂಥ ಘೋಷಣೆಗಳನ್ನು ಕೂಗುವುದು ತಪ್ಪಾಗುತ್ತದೆ. ಜಾಥಾಗಳಲ್ಲಿ ಮುಖ್ಯವಾಗಿ ಹಿಂಸೆಗೆ ಪ್ರಚೋದನೆ ನೀಡುವ ಅಪರಾಧ ಕೃತ್ಯದ ಪರವಾಗಿ ಘೋಷಣೆಗಳನ್ನು ಕೂಗಬಾರದು’ ಎಂದು ಕುನಾಲ್‌ ಜಾರಿಕೊಂಡಿದ್ದಾರೆ.
ಸುಗಮ ಕಲಾಪಕ್ಕೆ ಸಹಕಾರ ಕೋರಿ ಜ.30ರಂದು ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ
ವಿವಾದಿತ ಹೇಳಿಕೆ ವಿರುದ್ಧ ಕಿಡಿಕಾರಿರುವ ಬಿಜೆಪಿಯ ರಾಜ್ಯ ಘಟಕ ಅಧ್ಯಕ್ಷ ದಿಲೀಪ್‌ ಘೋಷ್‌ ಅವರು, ಗನ್‌ ಹಾಗೂ ಬಾಂಬ್‌ಗಳ ಸಂಸ್ಕೃತಿಯನ್ನು ಟಿಎಂಸಿ ರಾಜ್ಯಕ್ಕೆ ಪರಿಚಯಿಸಿ ಪೋಷಿಸುತ್ತಿದೆ. ಅದನ್ನೇ ಜಾಥಾಗಳಲ್ಲಿ ಒಪ್ಪಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಕುಟುಕಿದ್ದಾರೆ. 2020ರ ಜನವರಿಯಲ್ಲಿ ರಾಷ್ಟ್ರ ರಾಜಧಾನಿಯ ಹರಿನಗರದಲ್ಲಿ ಕೇಂದ್ರ ಸಚಿವರ ನೇತೃತ್ವದಲ್ಲಿ ನಡೆದಿದ್ದ ರೋಡ್‌ಶೋದಲ್ಲಿ ಬಿಜೆಪಿ ಬೆಂಬಲಿಗರು ಕೂಡ ಇದೇ ವಿವಾದಿತ ಘೋಷಣೆ ಕೂಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ