ಆ್ಯಪ್ನಗರ

ಟಿಎಂಸಿ ಕಾರ್ಯಕರ್ತರಿಗೆ ಬಾಗಿಲು ಬಂದ್‌ ಮಾಡಲು ಬಿಜೆಪಿ ನಿರ್ಧಾರ

ಪಶ್ಚಿಮ ಬಂಗಾಳ ಬಿಜೆಪಿಯು ತೃಣಮೂಲ ಕಾಂಗ್ರೆಸ್‌ನ ಬಿ ಟೀಮ್‌ ಆಗುವುದು ನಮಗೆ ಬೇಕಿಲ್ಲ. ಆದ್ದರಿಂದಲೇ ಇನ್ನುಮುಂದೆ ಟಿಎಂಸಿಯಿಂದ ಬರುವವರನ್ನು ಸ್ವಾಗತಿಸುವ ವಿಷಯದಲ್ಲಿ ಎಚ್ಚರ ವಹಿಸಲು ನಿರ್ಧರಿಸಿದ್ದೇವೆ. ಸೂಕ್ತ ಪರಿಶೀಲನೆ ಬಳಿಕವೇ ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಿದ್ದೇವೆ

Vijaya Karnataka Web 3 Feb 2021, 12:23 am
ಕೋಲ್ಕೊತಾ: ತೃಣಮೂಲ ಕಾಂಗ್ರೆಸ್‌ನಿಂದ ಸಾಮೂಹಿಕವಾಗಿ ವಲಸೆ ಬರುವವರಿಗೆ ಪಕ್ಷದ ಬಾಗಿಲು ಬಂದ್‌ ಮಾಡಲು ಬಿಜೆಪಿ ತೀರ್ಮಾನಿಸಿದೆ.
Vijaya Karnataka Web ಬಿಜೆಪಿ
ಬಿಜೆಪಿ


''ಈಗಾಗಲೇ ಪಕ್ಷದೊಳಗೆ ವಲಸಿಗರು ಹಾಗೂ ಮೂಲನಿವಾಸಿಗಳೆಂಬ 'ಸಂಘರ್ಷ' ಆರಂಭವಾಗಿದೆ. ಟಿಎಂಸಿಯ ಗುಳೆ ಪರ್ವ ಮುಂದುವರಿದರೆ ಈ ಅಸಮಾಧಾನ ಭುಗಿಲೇಳಬಹುದು,'' ಎಂಬ ಆತಂಕ ಬಿಜೆಪಿಯ ರಾಜ್ಯ ನಾಯಕರನ್ನು ಕಾಡಲಾರಂಭಿಸಿದೆ. ಹೀಗಾಗಿ ಆಯ್ದ ಮುಖಂಡರು ಮತ್ತು ಸ್ಥಳೀಯವಾಗಿ ಪ್ರಾಬಲ್ಯ ಹೊಂದಿರುವ ಧುರೀಣರನ್ನು ಮಾತ್ರವೇ ಸೇರ್ಪಡೆ ಮಾಡಿಕೊಳ್ಳಲು ಪಕ್ಷ ತೀರ್ಮಾನಿಸಿದೆ.

''ಪಶ್ಚಿಮ ಬಂಗಾಳ ಬಿಜೆಪಿಯು ತೃಣಮೂಲ ಕಾಂಗ್ರೆಸ್‌ನ ಬಿ ಟೀಮ್‌ ಆಗುವುದು ನಮಗೆ ಬೇಕಿಲ್ಲ. ಆದ್ದರಿಂದಲೇ ಇನ್ನುಮುಂದೆ ಟಿಎಂಸಿಯಿಂದ ಬರುವವರನ್ನು ಸ್ವಾಗತಿಸುವ ವಿಷಯದಲ್ಲಿ ಎಚ್ಚರ ವಹಿಸಲು ನಿರ್ಧರಿಸಿದ್ದೇವೆ. ಸೂಕ್ತ ಪರಿಶೀಲನೆ ಬಳಿಕವೇ ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಿದ್ದೇವೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ