ಆ್ಯಪ್ನಗರ

ಅಪಘಾತ: ಮೃತರ ಕುಟುಂಬಕ್ಕೆ 1.76 ಕೋಟಿ ರೂ. ಪರಿಹಾರ

ಅಪಘಾತವೊಂದರಲ್ಲಿ ಮಡಿದ ಕಾರ್ಪೋರೇಟ್ ಎಗ್ಸಿಕ್ಯೂಟಿವ್ ಅವರ ಕುಟುಂಬಕ್ಕೆ ಎರಡು ಖಾಸಗಿ ವಿಮಾ ಕಂಪನಿಗಳು 1.76 ಕೋಟಿ ರೂ. ವಿಮಾ ಪರಿಹಾರ ನೀಡಿದ್ದು, ಇದು ರಾಜ್ಯದಲ್ಲಿ ಇಂಥ ಪ್ರಕರಣವೊಂದಕ್ಕೆ ಸಿಕ್ಕಿರುವ ಅತ್ಯಂತ ಹೆಚ್ಚಿನ ಮೊತ್ತದ ಪರಿಹಾರವಾಗಿದೆ.

ಏಜೆನ್ಸೀಸ್ 24 Mar 2016, 3:49 pm
ಚೆನ್ನೈ: ಅಪಘಾತವೊಂದರಲ್ಲಿ ಮಡಿದ ಕಾರ್ಪೋರೇಟ್ ಎಗ್ಸಿಕ್ಯೂಟಿವ್ ಅವರ ಕುಟುಂಬಕ್ಕೆ ಎರಡು ಖಾಸಗಿ ವಿಮಾ ಕಂಪನಿಗಳು 1.76 ಕೋಟಿ ರೂ. ವಿಮಾ ಪರಿಹಾರ ನೀಡಿದ್ದು, ಇದು ರಾಜ್ಯದಲ್ಲಿ ಇಂಥ ಪ್ರಕರಣವೊಂದಕ್ಕೆ ಸಿಕ್ಕಿರುವ ಅತ್ಯಂತ ಹೆಚ್ಚಿನ ಮೊತ್ತದ ಪರಿಹಾರವಾಗಿದೆ.
Vijaya Karnataka Web tn accident victims kin get record rs 1 76 crore
ಅಪಘಾತ: ಮೃತರ ಕುಟುಂಬಕ್ಕೆ 1.76 ಕೋಟಿ ರೂ. ಪರಿಹಾರ


ಮದ್ರಾಸ್ ಹೈ ಕೋರ್ಟ್ ಇತ್ತೀಚೆಗೆ ಆಯೋಜಿಸಿದ್ದ ಲೋಕ್ ಅದಾಲತ್‌ನಲ್ಲಿ ಮೃತರ ಕುಟುಂಬ ಹಾಗೂ ವಿಮಾ ಕಂಪನಿಗಳು ಈ ಒಪ್ಪಂದಕ್ಕೆ ಬಂದವು.

ತಮ್ಮ ಬಂಧವೊಬ್ಬರ ಅಂತ್ಯ ಸಂಸ್ಕಾರಕ್ಕೆಂದು ಪೆರಂಬಲೂರಿಗೆ ಹೋಗುತ್ತಿರುವಾಗ ಇಲ್ಲಿನ ಏರ್‌ಸೆಲ್‌ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತೈಗರಾಜನ್ (48) ಕಾರು ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

ವಾರ್ಷಿಕ ಸುಮಾರು 24 ಲಕ್ಷ ರೂ.ವೇತನ ಪಡೆಯುತ್ತಿದ್ದ ತೈಗರಾಜನ್‌ ಸಾವಿಗೆ ಸೂಕ್ತ ಪರಿಹಾರ ನೀಡಬೇಕೆಂದು, ಮೃತರ ಪತ್ನಿ ವಿಜಯರಾಣಿ ಹಾಗೂ ಮಗ ಟಿ.ದೀಪನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವು ಮೋಟಾರ್ ಆ್ಯಕ್ಸಿಡೆಂಟ್ಸ್ ಕ್ಲೈಮ್ ಟ್ರಿಬ್ಯೂನಲ್‌ಗೆ ವರ್ಗಾಯಿಸಲ್ಪಟ್ಟಿತ್ತು.

ಈ ಪ್ರಕರಣದ ವಿಚಾರಣೆ ಇತ್ತೀಚೆಗೆ ನಡೆದಿದ್ದು, ಲಾರಿಯ ವಿಮಾ ಕಂಪನಿ ಹಾಗೂ ಕಾರಿನ ವಿಮಾ ಕಂಪನಿ ಒಪ್ಪಂದಕ್ಕೆ ಬಂದು ಮೃತರ ಕುಟುಂಬಕ್ಕೆ ಒಟ್ಟು 1.76 ಕೋಟಿ ರೂ. ಪರಿಹಾರವನ್ನು ಕುಟುಂಬಕ್ಕೆ ಹಸ್ತಾಂತರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ