ಆ್ಯಪ್ನಗರ

ಕಾವೇರಿ ಪ್ರಾಧಿಕಾರ: ತ.ನಾಡು ಹರ್ಷ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ತಮಿಳುನಾಡು, ''ಇದು ಅಮ್ಮ (ಜಯಲಲಿತಾ) ಸರಕಾರಕ್ಕೆ ಸಂದ ಮಹತ್ವದ ವಿಜಯ,'' ಎಂದು ಬಣ್ಣಿಸಿದೆ...

Vijaya Karnataka 3 Jun 2018, 10:56 am
ಚೆನ್ನೈ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ತಮಿಳುನಾಡು, ''ಇದು ಅಮ್ಮ (ಜಯಲಲಿತಾ) ಸರಕಾರಕ್ಕೆ ಸಂದ ಮಹತ್ವದ ವಿಜಯ,'' ಎಂದು ಬಣ್ಣಿಸಿದೆ. ''ಕಾವೇರಿ ವಿವಾದ ಇತ್ಯರ್ಥಗೊಳಿಸುವ ದಿಸೆಯಲ್ಲಿ ಎಐಎಡಿಎಂಕೆ ರಾಜ್ಯದ ರೈತರ ಹಿತ ಗಮನದಲ್ಲಿ ಇಟ್ಟುಕೊಂಡು ಶ್ರಮಿಸುತ್ತ ಬಂದಿದೆ. 90ರ ದಶಕದಲ್ಲಿ ಅಂದಿನ ಪಕ್ಷದ ವರಿಷ್ಠೆ ಜಯಲಲಿತಾ ಅವರು ದಿಟ್ಟ ಉಪಕ್ರಮಗಳನ್ನು ಆರಂಭಿಸಿದ್ದರು.
Vijaya Karnataka Web Palani Swamy


ನಮ್ಮ ಸರಕಾರವೂ ಅದೇ ನಿಟ್ಟಿನಲ್ಲಿ ಹೋರಾಟ ನಡೆಸಿತು. ಹೀಗಾಗಿ ಪ್ರಾಧಿಕಾರ ರಚನೆ ಅಮ್ಮ ಸರಕಾರಕ್ಕೆ ಸಂದ ಜಯ,'' ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶನಿವಾರ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಕೇಂದ್ರ ಸರಕಾರವು ಕಾವೇರಿ ನದಿ ನೀರು ನಿರ್ವಾಹಣಾ ಪ್ರಾಧಿಕಾರ ರಚಿಸುವ ಮೂಲಕ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದೆ. ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪಾಂಡಿಚೇರಿ ನಡುವೆ ಹಂಚಿಕೆಯಾಗುವ ನೀರಿನ ಪ್ರಮಾಣವನ್ನು ನಿರ್ಧರಿಸಿ ನಿರ್ವಹಣೆ ಮಾಡುವ ಹೊಣೆಗಾರಿಕೆ ಈಗ ಪ್ರಾಧಿಕಾರದ ಹೆಗಲಿಗೆ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ