ಆ್ಯಪ್ನಗರ

ಉತ್ತರಾಖಂಡ: ಸಚಿವರ ಖರ್ಚಿಗೆ ಇವರು ಭಿಕ್ಷೆ ಬೇಡಿದರು!

ಚಿವರ ಐಶಾರಾಮಿ ಖರ್ಚುಗಳ ವಿರುದ್ಧ ಸಿಡಿದೆದ್ದಿರುವ ಇಬ್ಬರು ವ್ಯಕ್ತಿಗಳು ಉತ್ತರಾಖಂಡದ ಬಾಗೇಶ್ವರ್‌ನಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ರವಾನಿಸಿರುವ ಘಟನೆ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 14 Jun 2017, 4:04 pm
ನೈನಿತಾಲ್‌: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾರ ಹಾಗೂ ಸಚಿವರ ಐಶಾರಾಮಿ ಖರ್ಚುಗಳ ವಿರುದ್ಧ ಸಿಡಿದೆದ್ದಿರುವ ಇಬ್ಬರು ವ್ಯಕ್ತಿಗಳು ಉತ್ತರಾಖಂಡದ ಬಾಗೇಶ್ವರ್‌ನಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ರವಾನಿಸಿರುವ ಘಟನೆ ನಡೆದಿದೆ.
Vijaya Karnataka Web to fund luxurious lifestyle of netas 2 men beg on streets
ಉತ್ತರಾಖಂಡ: ಸಚಿವರ ಖರ್ಚಿಗೆ ಇವರು ಭಿಕ್ಷೆ ಬೇಡಿದರು!


'ನಮ್ಮ ಮಂತ್ರಿಗಳಿಗೆ ಖರ್ಚು ಮಾಡಲು ಹಣವಿಲ್ಲ ಹೀಗಾಗಿ ಅವರ ಐಶಾರಾಮಿ ಜೀವನ ನಿರ್ವಹಣೆಗೆ ನಾವು ದೇಣಿಗೆ ಸಂಗ್ರಹಿಸುತ್ತಿದ್ದೇವೆ. ನೀವು ಹಣ ನೀಡಿ ಅವರನ್ನು ಉದ್ದಾರ ಮಾಡೋಣ' ಎಂದು ಪೋಸ್ಟರ್‌ ಹಾಕಿ 59 ವರ್ಷದ ರಮೇಶ್‌ ಪಾಂಡೆ ಹಾಗೂ 61 ವರ್ಷದ ಎನ್‌ಬಿ ಭಟ್‌, ಬಾಗೇಶ್ವರ್‌ ಸುತ್ತ ಭಿಕ್ಷೆ ಬೇಡಿ ಸಂಗ್ರಹಿಸಿದ 2642 ರೂ. ಗಳನ್ನು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ಗೆ ಕಳುಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಇವರು, 'ಸರಕಾರ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದೆ, ಸುಮಾರು 45 ಸಾವಿರ ಕೋಟಿಯಷ್ಟು ಹಣ ಸಾಲವನ್ನು ಸರಕಾರ ಹೊಂದಿದ್ದು, ಇದರ ಹೊರೆಯನ್ನು ನಮ್ಮ ಮೇಲೆ ಹಾಕುತ್ತಾರೆ. ಅಲ್ಲದೇ ಈಗಾಗಲೇ ಸರಕಾರ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ಹೀಗಾಗಿ ನಮ್ಮ ಸಚಿವರ ಐಶಾರಾಮಿ ಜೀವನಕ್ಕೆ ನಾವೇ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಮುಖ್ಯಮಂತ್ರಿಗೆ ನೀಡಿದ್ದೇವೆ' ಎಂದು ಪಾಂಡೆ ಹೇಳಿದ್ದಾರೆ.

1976ರಲ್ಲಿ ನಡೆದ ಚಿಪ್ಕೋ ಚಳವಳಿಯಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ಜೂನ್‌ 3ರಂದು ಮನೆ ಮನೆಗೆ ತೆರಳಿ ಎಲ್ಲರಿಂದಲೂ ಹಣ ಸಂಗ್ರಹಿಸಿದ್ದಾರೆ. 'ಮೊದಲಿಗೆ ನಮಗೆ ಶಾಕ್‌ ಆಗಿತ್ತು, ಸಚಿವರಿಗೆ ಖರ್ಚು ಮಾಡಲು ಹಣವಿಲ್ಲವೇ ಎಂದು ನಮಗೇ ಪ್ರಶ್ನೆ ಮೂಡಿತ್ತು. ಆದರೆ ಇವರ ಆಕ್ರೋಶ ನಮ್ಮ ಒಳಿತಿಗೆ ಎಂದು ಅರಿವಾಗಿ ನಾವು ದೇಣಿಗೆ ನೀಡಿದ್ದೇವೆ' ಎನ್ನುತ್ತಾರೆ ಸ್ಥಳೀಯ ನಿವಾಸಿ ಹಿಮಾನ್ಷು ಗರಿಯಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ