ಆ್ಯಪ್ನಗರ

ಟೋಲ್ ಫೀ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ನಾಯಕರು

ಉಚಿತ ಪ್ರವೇಶ ನೀಡಲು ನಿರಾಕರಿಸಿದ ಟೋಲ್‌ ಸಿಬ್ಬಂದಿ ಮೇಲೆ ಬಿಜೆಪಿ ನಾಯಕರು ಹಲ್ಲೆ ನಡೆಸಿದ್ದಾರೆ.

TIMESOFINDIA.COM 25 Jul 2019, 11:43 am
ನೋಯಿಡಾ: ಉಚಿತ ಪ್ರವೇಶ ನೀಡಲು ನಿರಾಕರಿಸಿದ ಟೋಲ್‌ ಸಿಬ್ಬಂದಿ ಮೇಲೆ ಬಿಜೆಪಿ ನಾಯಕರಿಬ್ಬರು ಹಲ್ಲೆ ನಡೆಸಿರುವ ಘಟನೆ ನೋಯಿಡಾದ ಯಮುನಾ ಎಕ್ಸ್‌ಪ್ರೆಸ್‌ವೇನ ಜೇವಾರ್ ಟೋಲ್ ಗೇಟ್‌ನಲ್ಲಿ ನಡೆದಿದೆ.

ನೋಯಿಡಾ ಬಿಜೆಪಿ ಘಟಕದ ಜಿಲ್ಲಾ ಮಟ್ಟದ ನಾಯಕರಾದ ವಿಜಯ್ ಭಾಟಿ ಮತ್ತು ಸಂಜೀವ್ ಶರ್ಮಾ ಎಂಬವರು ಟೋಲ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.

ಯಮುನಾ ಎಕ್ಸ್‌ಪ್ರೆಸ್‌ವೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಜೆಪಿ ನಾಯಕರಿಬ್ಬರು, ಜೇವಾರ್ ಟೋಲ್ ಗೇಟ್‌ ತಲುಪಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ಹಣ ಕೊಟ್ಟು ರಶೀದಿ ಪಡೆಯುವಂತೆ ಸೂಚಿಸಿದ್ದಾರೆ. ಇಷ್ಟಕ್ಕೆ ಕೆಂಡಾಮಂಡಲರಾದ ನಾಯಕರಿಬ್ಬರು, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಟೋಲ್ ಬೂತ್ ಅಧಿಕಾರಿಗಳು ನೋಯಿಡಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ