ಆ್ಯಪ್ನಗರ

ದೇವಸ್ಥಾನವಾಗಿ ಬದಲಾಯ್ತೇ ಗೋರಿ?

ಸಣ್ಣ ಗೋರಿಯೊಂದನ್ನು ದೇವಸ್ಥಾನವಾಗಿ ಪರಿವರ್ತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೊಸದೆಲ್ಲಿಯ ಸಪ್ದರ್‌ಜಂಗ್ ವ್ಯಾಪ್ತಿಯ ಹುಮಾಯುನಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ.

Times Now 5 May 2018, 3:57 pm
ಹೊಸದಿಲ್ಲಿ: ಸಣ್ಣ ಗೋರಿಯೊಂದನ್ನು ದೇವಸ್ಥಾನವಾಗಿ ಪರಿವರ್ತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೊಸದಿಲ್ಲಿಯ ಸಪ್ದರ್‌ಜಂಗ್ ವ್ಯಾಪ್ತಿಯ ಹುಮಾಯೂನ್‌ಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ.
Vijaya Karnataka Web tomb


ಈ ಕುರಿತು ವರದಿ ಪ್ರಕಟವಾಗುತ್ತಿದ್ದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತನಿಖೆಗೆ ಆದೇಶಿಸಿದ್ದು, ಶನಿವಾರದೊಳಗೆ ವರದಿ ಸಲ್ಲಿಸುವಂತೆ, ಕಲೆ, ಸಂಸ್ಕೃತಿ ಮತ್ತು ಭಾಷಾ (ACL) ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಪರಂಪರಾಗತ ಆಸ್ತಿಗೆ ಹಾನಿ ಮಾಡುವಂಥ ಈ ಕೃತ್ಯ ಕಾನೂನಿಗೆ ವಿರುದ್ಧವಾಗಿದ್ದು ಗಂಭೀರ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ತಮ್ಮ ಇಲಾಖೆ ಅಡಿಯಲ್ಲಿ ಪಟ್ಟಿ ಮಾಡಲಾಗಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ 'ರಾಜ್ಯ ಪುರಾತತ್ತ್ವ ಶಾಸ್ತ್ರ ಇಲಾಖೆ' ಕರ್ತವ್ಯ. ಈ ವಿಷಯದಲ್ಲಿ ಯಾವುದೇ ತಪ್ಪಾದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಎಂದವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಇದು ಕೇವಲ ಪರಂಪರೆಗೆ ಧಕ್ಕೆ ತಂದ ಪ್ರಕರಣವಲ್ಲ, ಶಾಂತಿ ಮತ್ತು ಸಾಮರಸ್ಯ ಕದಡುವ ಯತ್ನ ಕೂಡ. ಪ್ರಕರಣದ ಕುರಿತಾದ ವಿವರ ವರದಿಯನ್ನು ಶನಿವಾರದೊಳಗೆ ನೀಡಬೇಕು ಮತ್ತು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದವರು ಎಸಿಎಲ್ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ