ಆ್ಯಪ್ನಗರ

ಟೂಲ್‌ಕಿಟ್‌ನಲ್ಲಿ ಹಿಂಸೆ, ಪ್ರಚೋದನೆ, ದೇಶದ್ರೋಹದ ಅಂಶ ನನಗೆ ಕಾಣಿಸುತ್ತಿಲ್ಲ: ದೀಪಕ್‌ ಗುಪ್ತಾ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ ಕೂಡ, ದಿಶಾ ಹಂಚಿಕೊಂಡಿರುವ ಟೂಲ್‌ಕಿಟ್‌ನಲ್ಲಿ ಯಾವುದೇ ದೇಶದ್ರೋಹದ ಅಂಶ ತನಗೆ ಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ದಿಶಾ ಬಂಧನದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೀಪಕ್‌ ಗುಪ್ತಾ, ಪ್ರತಿಭಟನೆ ನಡೆಸುವವರು ಶಾಂತಿಯುತವಾಗಿರುವವರೆಗೂ, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಕನಿಗೂ ಸರ್ಕಾರವನ್ನು ವಿರೋಧಿಸುವ ಹಾಗೂ ಪ್ರತಿಭಟಿಸುವ ಹಕ್ಕಿದೆ ಎಂದು ತಿಳಿಸಿದ್ದಾರೆ.

Vijaya Karnataka Web 16 Feb 2021, 1:38 pm
ಹೊಸದಿಲ್ಲಿ: ಭಾರೀ ವಿವಾದಕ್ಕೆ ಕಾರಣವಾಗಿರುವ ಟೂಲ್‌ಕಿಟ್‌ನ್ನು‌ ತಯಾರು ಮಾಡಿಕೊಟ್ಟಿರುವ ಆರೋಪ ಹೊತ್ತಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಈಗ ದಿಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಇವರ ಬಂಧನಕ್ಕೆ ಹಲವು ಪುರಾವೆಗಳನ್ನು ದಿಲ್ಲಿ ಪೊಲೀಸರು ನೀಡಿದ್ದಾರೆ.
Vijaya Karnataka Web deepak gupta


ಇನ್ನೊಂದೆಡೆ ಅನೇಕ ಪ್ರಮುಖರು ದಿಶಾ ರವಿ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ ಕೂಡ, ದಿಶಾ ಹಂಚಿಕೊಂಡಿರುವ ಟೂಲ್‌ಕಿಟ್‌ನಲ್ಲಿ ಯಾವುದೇ ದೇಶದ್ರೋಹದ ಅಂಶ ತನಗೆ ಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ದಿಶಾ ಬಂಧನದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೀಪಕ್‌ ಗುಪ್ತಾ, ಪ್ರತಿಭಟನೆ ನಡೆಸುವವರು ಶಾಂತಿಯುತವಾಗಿರುವವರೆಗೆ, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರವನ್ನು ವಿರೋಧಿಸುವ ಹಾಗೂ ಪ್ರತಿಭಟಿಸುವ ಹಕ್ಕಿದೆ.

ಅದನ್ನೇ ದಿಶಾ ಮಾಡಿದ್ದಾರೆ. ಹೀಗಾಗಿ ಅವರ ಬಂಧನ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯ ಎಂದು ದೀಪಕ್‌ ಆಕ್ರೋಶ ವ್ಯಕ್ತಪಡಿಸಿದರು. ಹಿಂಸಾಚಾರ ಅಥವಾ ಜನರನ್ನು ಪ್ರಚೋದಿಸುವ ವಿಷಯವೇ ಈ ಟೂಲ್‌ಕಿಟ್‌ನಲ್ಲಿ ಇಲ್ಲ, ಅಲ್ಲದೆ ಶೇರ್‌ ಮಾಡಿರುವ ಡಾಕ್ಯುಮೆಂಟ್‌ನಲ್ಲಿ ದೇಶದ್ರೋಹದ ಅಂಶವು ತನಗೆ ಕಾಣಿಸುತ್ತಿಲ್ಲ.

ಕೃಷಿಯಲ್ಲಿ ಅಜ್ಜಿ-ತಾತ ಅನುಭವಿಸಿದ ಕಷ್ಟ ನೋಡಿ ಹೋರಾಟಕ್ಕಿಳಿದಿದ್ದ ಬೆಂಗಳೂರಿನ ದಿಶಾ!

ಪ್ರತಿಭಟನಾನಿರತರನ್ನು ಕೆಲವರು ಒಪ್ಪಬಹುದು, ಇನ್ನು ಕೆಲವರು ಒಪ್ಪದೆ ಇರಬಹುದು. ಆದರೆ ಇದನ್ನು ದೇಶದ್ರೋಹಕ್ಕೆ ತಳಕು ಹಾಕಿರುವುದು ಕಾನೂನಿನ ಅರಿವೇ ಇಲ್ಲದವರಂತೆ ತೋರುತ್ತಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಸಂಪೂರ್ಣವಾಗಿ ದೇಶದ್ರೋಹದ ಕಾನೂನನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೂಲ್‌ಕಿಟ್‌ ತಯಾರಿಸಿದ ಆರೋಪದಲ್ಲಿ ಎರಡು ದಿನಗಳ ಹಿಂದೆ ಪರಿಸರವಾದಿ ಬೆಂಗಳೂರು ಮೂಲದ ದಿಶಾ ರವಿಯನ್ನುಅರೆಸ್ಟ್‌ ಮಾಡಲಾಗಿತ್ತು. ಇದೀಗ ಅವರನ್ನು ಐದು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ. ಇನ್ನೊಂದೆಡೆ ಇವರ ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ