ಆ್ಯಪ್ನಗರ

ಬೆಕ್ಕಿನಂತೆ ಕಿತ್ತಾಡಿದ ಹಿರಿಯ ಅಧಿಕಾರಿಗಳು

ಸುಪ್ರೀಂನಲ್ಲಿ ಕಡ್ಡಾಯ ರಜೆ ಕ್ರಮ ಸಮರ್ಥಿಸಿಕೊಂಡ ಕೇಂದ್ರ

Vijaya Karnataka 6 Dec 2018, 5:00 am
ಹೊಸದಿಲ್ಲಿ: ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನ ಅವರು ಪರಸ್ಪರ ಭ್ರಷ್ಟಾಚಾರ ಆರೋಪಗಳನ್ನು ಮಾಡಿಕೊಂಡು ಬೆಕ್ಕುಗಳ ರೀತಿಯಲ್ಲಿ ಕಚ್ಚಾಡಿದ್ದರಿಂದ ದೇಶದ ಉನ್ನತ ತನಿಖಾ ಸಂಸ್ಥೆಯಲ್ಲಿ ಕಳವಳಕಾರಿ ಸ್ಥಿತಿ ನಿರ್ಮಾಣವಾಗಿತ್ತು. ಸಿಬಿಐ ಗೌರವಕ್ಕೆ ಧಕ್ಕೆ ತಂದಿಟ್ಟಿದ್ದರಿಂದ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಯಿತು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ ಮುಂದೆ ಬುಧವಾರ ಹೇಳಿಕೆ ನೀಡಿದೆ.
Vijaya Karnataka Web top cbi officers fought like cats
ಬೆಕ್ಕಿನಂತೆ ಕಿತ್ತಾಡಿದ ಹಿರಿಯ ಅಧಿಕಾರಿಗಳು

ಸಿಬಿಐ ಆಂತರಿಕ ಕಲಹ ಶಮನಗೊಳಿಸುವ ಸಂಬಂಧ ಈ ಇಬ್ಬರೂ ಅಧಿಕಾರಿಗಳನ್ನು ಕೇಂದ್ರ ಸರಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ತಮ್ಮ ವಿರುದ್ಧದ ಕ್ರಮವನ್ನು ಪ್ರಶ್ನಿಸಿ ವರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯನ್‌ ನೇತೃತ್ವದ ಪೀಠದ ಮುಂದೆ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡರು.
ಸಿಬಿಐ ಗೌರವ ಎತ್ತಿ ಹಿಡಿಯಬೇಕಾದ ಅಧಿಕಾರಿಗಳೇ ಮಾಧ್ಯಮಗಳ ಮುಂದೆ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಸಂಸ್ಥೆಯಲ್ಲಿ ಮುಜುಗರದ ಹಾಗೂ ಕಿರಿಕಿರಿಯ ವಾತಾವರಣ ನಿರ್ಮಿಸಿದರು. ಬೆಕ್ಕುಗಳಂತೆ ಕಚ್ಚಾಡಿ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆ ತಂದಿಟ್ಟರು. ಹೀಗಾಗಿ ಕೇಂದ್ರ ಸರಕಾರ ಸಿಬಿಐ ಸ್ವಾಯತ್ತತೆ ಮೇಲೆ ಸವಾರಿ ಮಾಡದೇ ಇಬ್ಬರನ್ನೂ ಕಡ್ಡಾಯ ರಜೆ ಮೇಲೆ ಕಳುಹಿಸಿತೇ ಹೊರತು ವರ್ಗಾವಣೆ ಮಾಡಿಲ್ಲ ಎಂದು ಅಟಾರ್ನಿ ಜನರಲ್‌ ಸ್ಪಷ್ಟನೆ ನೀಡಿದರು. ಇದಾದ ಬಳಿಕ ಪ್ರಕರಣದ ಕುರಿತು ವರದಿ ಸಲ್ಲಿಸಿರುವ ಕೇಂದ್ರ ವಿಚಕ್ಷಣಾ ದಳದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ಬಳಿಕ ಕೋರ್ಟ್‌ ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ