ಆ್ಯಪ್ನಗರ

ಶಿಕ್ಷಣ ಅನುದಾನ: ರಾಹುಲ್‌ ಆರೋಪ ತಳ್ಳಿಹಾಕಿದ ಯೋಗಿ ಸರಕಾರ

ಶಿಕ್ಷಣಕ್ಕೆ ಬಜೆಟ್‌ ಅನುದಾನ ಕಡಿತಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಗಳು ಹಾಗೂ ರಾಹುಲ್‌ ಗಾಂಧಿ ಆರೋಪವನ್ನು ಯೋಗಿ ಆದಿತ್ಯನಾಥ್ ಸರಕಾರ ತಿರಸ್ಕರಿಸಿದೆ. ವಾಸ್ತವದಲ್ಲಿ ಶಿಕ್ಷಣಕ್ಕೆ ಬಜೆಟ್‌ ಅನುದಾನವನ್ನು ಶೇ 25ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 16 Jul 2017, 11:00 pm
ಹೊಸದಿಲ್ಲಿ/ಲಖನೌ: ಶಿಕ್ಷಣಕ್ಕೆ ಬಜೆಟ್‌ ಅನುದಾನ ಕಡಿತಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಗಳು ಹಾಗೂ ರಾಹುಲ್‌ ಗಾಂಧಿ ಆರೋಪವನ್ನು ಯೋಗಿ ಆದಿತ್ಯನಾಥ್ ಸರಕಾರ ತಿರಸ್ಕರಿಸಿದೆ. ವಾಸ್ತವದಲ್ಲಿ ಶಿಕ್ಷಣಕ್ಕೆ ಬಜೆಟ್‌ ಅನುದಾನವನ್ನು ಶೇ 25ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Vijaya Karnataka Web total budget for education in up is 25 4 higher adityanath government refutes rahul gandhis claim
ಶಿಕ್ಷಣ ಅನುದಾನ: ರಾಹುಲ್‌ ಆರೋಪ ತಳ್ಳಿಹಾಕಿದ ಯೋಗಿ ಸರಕಾರ


ಉತ್ತರ ಪ್ರದೇಶ ಸರಕಾರ ಶಿಕ್ಷಣಕ್ಕೆ ನೀಡುವ ಬಜೆಟ್‌ ಅನುದಾನವನ್ನು ಕಡಿತಗೊಳಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಅಂತಹ ಒಂದು ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಯೋಗಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಹಣ ಉಳಿಸುವುದಕ್ಕಾಗಿ ಆಸ್ಪತ್ರೆಗಳನ್ನೂ ಮುಚ್ಚಿಬಿಡಿ' ಎಂದು ಅವರು ವ್ಯಂಗ್ಯವಾಡಿದ್ದರು.

ಇಂತಹ ಮಾಧ್ಯಮ ವರದಿಗಳು ಹಾಗೂ ರಾಹುಲ್‌ ಆರೋಪವನ್ನು ತಿರಸ್ಕರಿಸಿದ ಉ.ಪ್ರ ಸರಕಾರದ ಅಧಿಕೃತ ವಕ್ತಾರರು, 'ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ 2017-18ನೇ ಸಾಲಿನ ಉ.ಪ್ರ ಬಜೆಟ್‌ನಲ್ಲಿ 62,185.25 ಕೋಟಿ ಮೀಸಲಿಡಲಾಗಿದೆ. ಹಿಂದಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 49,607.93 ಕೋಟಿ ರೂ ನೀಡಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 25.4ರಷ್ಟುಹೆಚ್ಚುವರಿ ಅನುದಾನ ನೀಡಲಾಗಿದೆ' ಎಂದು ಸ್ಪಷ್ಟಪಡಿಸಿದರು.

ಹಿಂದಿನ ಬಜೆಟ್‌ನಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 38,066.06 ಕೋಟಿ ನೀಡಿದ್ದರೆ, ಈ ಬಾರಿ 50,142 ಕೋಟಿ (ಶೇ 31.7ರಷ್ಟು ಹೆಚ್ಚು) ಹಣ ಮೀಸಲಿಡಲಾಗಿದೆ.

ಅದೇ ರೀತಿ ಮಾಧ್ಯಮಿಕ ಶಿಕ್ಷಣಕ್ಕೆ 4.8 ಶೇ ಹೆಚ್ಚುವರಿ ಹಣ ಒದಗಿಸಲಾಗಿದೆ. ಈ ವರ್ಷ 9,387.44 ಕೋಟಿ ಒದಗಿಸಿದ್ದರೆ, ಹಿಂದಿನ ಬಾರಿ 8,956.86 ಕೋಟಿ ನೀಡಲಾಗಿತ್ತು.

ಉನ್ನತ ಶಿಕ್ಷಣಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 2.7ರಷ್ಟು ಹೆಚ್ಚು ಹಣ ಒದಗಿಸಲಾಗಿದೆ. 2017-18ರ ಸಾಲಿಗೆ 2,655.81 ಕೋಟಿ ಒದಗಿಸಿದ್ದರೆ, ಹಿಂದಿನ ವರ್ಷ 2,585.01 ಕೋಟಿ ಒದಗಿಸಲಾಗಿತ್ತು ಎಂದು ಉ.ಪ್ರ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ದಿನೇಶ್‌ ಶರ್ಮಾ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್ ಸರಕಾರ ತನ್ನ ಮೊದಲ ಬಜೆಟ್‌ ಅನ್ನು ಜುಲೈ 11ರಂದು ಮಂಡಿಸಿತ್ತು.

'Total budget for education in UP is 25.4% higher': Adityanath government refutes Rahul Gandhi's claim

NEW DELHI/LUCKNOW: The Yogi Adityanath government on Sunday dismissed media reports and Rahul Gandhi's charge of cut in budgetary allocation for education and said that money allocated for the sector has in fact been increased by over 25 per cent.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ