ಆ್ಯಪ್ನಗರ

ಬಕ್ರೀದ್: ನಿಷೇಧ‍ದ ನಡುವೆಯೂ ವಾರಣಾಸಿಯಲ್ಲಿ ಸಾಂಪ್ರದಾಯಿಕ ಒಂಟೆ ಬಲಿ

ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳನ್ನು ಬಲಿ ಹಾಗೂ ಬಲಿ ನೀಡಿದ ಪ್ರಾಣಿಗಳ ತ್ಯಾಜ್ಯವನ್ನು ಚರಂಡಿಗಳಲ್ಲಿ ಎಸೆಯುವಂತಿಲ್ಲ

TIMESOFINDIA.COM 21 Aug 2018, 2:13 pm
[ಮೂಲ ಸುದ್ದಿ: ಟೈಮ್ಸ್ ಆಫ್ ಇಂಡಿಯಾ, 21 ಆಗಸ್ಟ್ 2018]
Vijaya Karnataka Web camel


ವಾರಣಾಸಿ:
ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳನ್ನು ಬಲಿ ಹಾಗೂ ಬಲಿ ನೀಡಿದ ಪ್ರಾಣಿಗಳ ತ್ಯಾಜ್ಯವನ್ನು ಚರಂಡಿಗಳಲ್ಲಿ ಎಸೆಯುವಂತಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೆ ವಾರಾಣಸಿಯ 4 ಪ್ರದೇಶಗಳಲ್ಲಿ ಸಾರ್ವಜನಿಕವಾಗಿಯೇ ಒಂಟೆಗಳನ್ನು ಬಲಿ ನೀಡಲಾಗಿದೆ.

ಬಕ್ರೀದ್: ಸಾರ್ವಜನಿಕ ಪ್ರಾಣಿ ಬಲಿ ನಿಷೇಧಿಸಿದ ಯೋಗಿ ಸರಕಾರ

ಹಿಂದಿನಿಂದಲೂ ವಾರಣಾಸಿಯ ನಾಲ್ಕು ಪ್ರದೇಶಗಳಲ್ಲಿ ಒಂಟೆ ಬಲಿ ನೀಡುವ ಸಂಪ್ರದಾಯವಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲು ಯಾವುದೇ ಅಡ್ಡಿ ಇಲ್ಲ ಎಂದು ವಾರಾಣಸಿಯ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

'ಪ್ರಾಣಿ ಬಲಿ ನಿಷೇಧ ಸಂಬಂಧ ಮುಖ್ಯಮಂತ್ರಿಯವರು ಯಾವುದೇ ಅಧಿಕೃತ ಪ್ರಕಟನೆ ಹೊರಡಿಸಿಲ್ಲ. ಹೊಸ ಹೊಸ ಸಂಪ್ರದಾಯ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಲಷ್ಟೇ ಸಿಎಂ ಸೂಚನೆ ನೀಡಿದ್ದಾರೆ' ಎಂದು ಜಿಲ್ಲಾಧಿಕಾರಿ ಸುರೇಂದ್ರ ಸಿಂಗ್ ತಿಳಿಸಿದ್ದಾರೆ.

ಬಲಿ ನೀಡುವ ಪ್ರಾಣಿಯ ಮಾಂಸಕ್ಕಾಗಿ ನಾಲೆಂಪುರ್, ಜಲಾಲುದ್ದೀನ್‌ಪುರ್ ಹಾಗೂ ಧನ್ನಿಪುರ್ ಪ್ರಾಣಿ ಬಲಿ ಮೈದಾನದ ಬಳಿ ಸುಮಾರು 600-800 ಜನ ಸೇರಿರುತ್ತಾರೆ. ಕೆವೊಮ್ಮೆ ಜನರ ಸಂಖ್ಯೆ 2 ಸಾವಿರದ ಗಡಿ ದಾಟಿರುತ್ತೆದೆ. ಬಕ್ರೀದ ಪ್ರಯುಕ್ತ ಆಗಸ್ಟ್‌ 22, 23, 24 ರಂದು ಸಹ ಪ್ರಾಣಿ ಬಲಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ