ಆ್ಯಪ್ನಗರ

ಮಧ್ಯಪ್ರದೇಶ: ತಂದೆಯಿಂದಲೇ ಕಿಡ್ನಾಪ್‌ ಆದ ಬಾಲಕಿಯ ರಕ್ಷಿಸಲು ಎಲ್ಲೂ ಸ್ಟಾಪ್‌ ನೀಡದೆ 210 ಕಿ.ಮೀ ಓಡಿದ ರೈಲು!

ಮಧ್ಯಪ್ರದೇಶದಲ್ಲಿ ಅಪಹರಣಕ್ಕೊಳಗಾದ ಮೂರು ವರ್ಷದ ಬಾಲಕಿಯನ್ನು ಸಿನಿಮೀಯ ಹಾಗೂ ಅತ್ಯಂತ ಅಚ್ಚರಿಯ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಆದರೆ, ರಕ್ಷಣಾ ಕಾರ್ಯದ ಬಳಿಕ ಅಪಹರಣ ಮಾಡಿದ್ದು ಹುಡುಗಿಯ ತಂದೆಯೇ ಎಂದು ತಿಳಿದು ಅಧಿಕಾರಿಗಳು ಶಾಕ್‌ ಆಗಿದ್ದಾರೆ.

Vijaya Karnataka Web 27 Oct 2020, 7:03 am
ಭೋಪಾಲ್‌: ಅಪಹರಣಕ್ಕೆ ಒಳಗಾದವರನ್ನು ರಕ್ಷಿಸಲು ಅಪಹರಣಕಾರರ ಬೆನ್ನಟ್ಟುವುದು, ಸೀಕ್ರೆಟ್‌ ಕಾರ್ಯಾಚರಣೆ ನಡೆಸುವುದು ಮುಂತಾದ ಸಾಹಸಗಳು ಹೊಸತೇನಲ್ಲ. ಆದರೆ, ಮಧ್ಯಪ್ರದೇಶದಲ್ಲಿ ಅಪಹರಣಕ್ಕೊಳಗಾದ ಮೂರು ವರ್ಷದ ಬಾಲಕಿಯನ್ನು ಸಿನಿಮೀಯ ಹಾಗೂ ಅತ್ಯಂತ ಅಚ್ಚರಿಯ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ.
Vijaya Karnataka Web train
Representative image


ಆದರೆ, ರಕ್ಷಣಾ ಕಾರ್ಯದ ಬಳಿಕ ಅಪಹರಣ ಮಾಡಿದ್ದು ಹುಡುಗಿಯ ತಂದೆಯೇ ಎಂದು ತಿಳಿದು ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಬಾಲಕಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಎಕ್ಸ್‌ಪ್ರೆಸ್‌ ರೈಲೊಂದನ್ನು ಸುಮಾರು 210 ಕಿ.ಮೀ. ಎಲ್ಲಿಯೂ ನಿಲ್ಲಿಸದೆ ನಿರಂತರವಾಗಿ ಚಾಲನೆ ಮಾಡಿ, ಅಪಹರಣಕಾರನ ಪರಾರಿ ತಪ್ಪಿಸಲಾಗಿದೆ. ಉತ್ತರ ಪ್ರದೇಶದ ಲಲಿತಪುರದಿಂದ ಮಧ್ಯಪ್ರದೇಶದ ಭೋಪಾಲ್‌ವರೆಗೆ ರೈಲು ಒಂದೂ ತಡೆಯಿಲ್ಲದೆ ಸಾಗಿದೆ.

ಘಟನೆಯ ವಿವರ: ಕಳೆದ ಶನಿವಾರ ಲಲಿತಪುರ ರೈಲು ನಿಲ್ದಾಣದಲ್ಲಿ ದುಷ್ಕರ್ಮಿಯೊಬ್ಬ ಮೂರು ವರ್ಷದ ಮಗುವನ್ನು ಅಪಹರಿಸಿದ್ದ. ಬಾಲಕಿ ಕಾಣೆಯಾದ ಕೂಡಲೇ ಆಕೆಯ ತಾಯಿ ಈ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅಪಹರಣಕಾರನು ಮಗುವಿನೊಂದಿಗೆ ಭೋಪಾಲಕ್ಕೆ ಹೊರಟಿದ್ದ ರಪ್ತಿಸಾಗರ್‌ ಎಕ್ಸ್‌ಪ್ರೆಸ್‌ ರೈಲನ್ನು ಏರಿದ್ದು ಬಯಲಾಯಿತು.

ಚೀನಾದಿಂದ ಗಡಿಯಲ್ಲಿ ಸೇನೆ ನಿಯೋಜನೆ ಹೆಚ್ಚಳ, ಲಡಾಖ್‌‌ ಒಂದೇ ಅದರ ಗುರಿಯಲ್ಲ!

ಆದರೆ ಆ ವೇಳೆಗಾಗಲೇ ರೈಲು ನಿಲ್ದಾಣದಿಂದ ಹೊರಟು ಹೋಗಿತ್ತು. ರೈಲ್ವೆ ಪೊಲೀಸರು ರೈಲಿನ ಮುಂದಿನ ನಿಲುಗಡೆಯಾದ ಭೋಪಾಲ್‌ ನಿಲ್ದಾಣದ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ, ಅಲರ್ಟ್‌ ಮಾಡಿದರು. ರೈಲಿನ ಮುಂದಿನ ನಿಲ್ದಾಣ ಭೋಪಾಲ್‌ ಆಗಿದ್ದರೂ, ಮಾರ್ಗಮಧ್ಯೆ ಕ್ರಾಸಿಂಗ್‌ ಮತ್ತು ಮುಂತಾದ ತಾಂತ್ರಿಕ ಕಾರಣಗಳಿಂದ ನಿಲುಗಡೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ರೈಲು ಯಾವುದೇ ಕಾರಣಕ್ಕೆ ನಿಂತರೆ ಆರೋಪಿ ಇಳಿದು ಪರಾರಿಯಾಗುವ ಸಾಧ್ಯತೆಯಿತ್ತು.

ಹೀಗಾಗಿ ಮಾರ್ಗಮಧ್ಯೆ ಯಾವ ಕಾರಣಕ್ಕೂ ರೈಲನ್ನು ಎಲ್ಲಿಯೂ ನಿಲ್ಲಿಸದಂತೆ 'ಗ್ರೀನ್‌ ಸಿಗ್ನಲ್‌' ನೀಡಲು ಸೂಚನೆ ನೀಡಲಾಯಿತು. ರೈಲು ಭೋಪಾಲ ತಲುಪುತ್ತಿದ್ದಂತೆಯೇ ಆ ವೇಳೆಗಾಗಲೇ ಅಗತ್ಯ ಸಿದ್ಧತೆಯಲ್ಲಿದ್ದ ರೈಲ್ವೆ ಪೊಲೀಸರು ಶೋಧಕಾರ್ಯ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ನಂತರ ಬಾಲಕಿಯನ್ನು ಸುರಕ್ಷಿತವಾಗಿ ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ