ಆ್ಯಪ್ನಗರ

ಮಂಗಳಮುಖಿ ಮೇಲೆ ಗ್ಯಾಂಗ್‌ ರೇಪ್: ಚಿಕಿತ್ಸೆ ನೀಡಲು ಮೀನ-ಮೇಷ ಎಣಿಸಿದ ವೈದ್ಯರು

ಮಂಗಳಮುಖಿ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

Pune Mirror 22 Jun 2017, 3:45 pm
ಪುಣೆ: ಮಂಗಳಮುಖಿ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.
Vijaya Karnataka Web transgender woman raped by four men three nabbed
ಮಂಗಳಮುಖಿ ಮೇಲೆ ಗ್ಯಾಂಗ್‌ ರೇಪ್: ಚಿಕಿತ್ಸೆ ನೀಡಲು ಮೀನ-ಮೇಷ ಎಣಿಸಿದ ವೈದ್ಯರು


ವಿಪರ್ಯಾಸವೆಂದರೆ ಸಂತ್ರಸ್ತೆ ಮಂಗಳಮುಖಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ.

ವಾಡ್ಗಾಂವ್‌ ಬುಡ್ರುಕ್‌ ಮೂಲದ 19 ವರ್ಷದ ಮಂಗಳಮುಖಿ ಹೊಟೇಲ್‌ನಿಂದ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದ ವೇಳೆ 15 ಜನರ ಗುಂಪು ದಾಳಿ ನಡೆಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಮುಂದಾಗಿದ್ದರು. ನಾಲ್ವರು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ ನಂತರ ಅದಾಗಲೇ ಗುಂಪಿನಲ್ಲಿ ಜಗಳ ಪ್ರಾರಂಭವಾಗಿದೆ. ಇವರಿಂದ ತಪ್ಪಿಸಿಕೊಂಡ ಸಂತ್ರಸ್ತೆ ಪಾರ್ಕಿಂಗ್‌ ಏರಿಯಾಗೆ ಬಳಿ ಬಂದು ತಮ್ಮ ಕುಟುಂಬಕ್ಕೆ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡಿದ್ದರು.

ಗಂಭೀರವಾಗಿ ಗಾಯಗೊಂಡ ಸಂತ್ರಸ್ತೆಯನ್ನು ಆಕೆಯ ಕುಟುಂಬಸ್ಥರು ಮೊದಲಿಗೆ ಸಸ್ಸೂನ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ವೈದ್ಯರು ಓರ್ವ ಮಂಗಳಮುಖಿ ಮೇಲೆ ಅತ್ಯಾಚಾರ ನಡೆಯಲು ಹೇಗೆ ಸಾಧ್ಯ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಮೊದಲು ಪೊಲೀಸರು ಬರಬೇಕು. ಪ್ರಕರಣ ದಾಖಲಿಸಿಕೊಂಡ ಬಳಿಕವಷ್ಟೇ ನಾವು ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು ಎಂದು ಸಂತ್ರಸ್ತೆಯ ಕುಟುಂಬದವರು ಪುಣೆ ಮಿರರ್‌ಗೆ ತಿಳಿಸಿದ್ದಾರೆ.

ಪ್ರಕರಣ ಕುರಿತು ಸನ್‌ ಸಿಟಿ ಪೊಲೀಸರು ದೂರು ದಾಖಲಿಸಿದ್ದು, ನಾಲ್ವರಲ್ಲಿ ಮೂವರನ್ನು ಬಂಧಿಸಿದ್ದಾರೆ. ದೂರು ದಾಖಲಿಸಿಕೊಂಡ ಒಂದೇ ತಾಸಿನಲ್ಲಿ ನಾವು ಮೂವರನ್ನು ಬಂಧಿಸಿದ್ದು, ಒಬ್ಬ ತಲೆಮರೆಸಿಕೊಂಡಿದ್ದಾನೆ. ಶೀಘ್ರದಲ್ಲೇ ಆತನನ್ನೂ ಬಂಧಿಸುವುದಾಗಿ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ದೇವೇಂದ್ರ ಶಿಂಧೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ