ಆ್ಯಪ್ನಗರ

ಕೇರಳ ಪೊಲೀಸರ ಕಾಟದ ವಿರುದ್ಧ ಮಂಗಳಮುಖಿಯರ ಪ್ರತಿಭಟನೆ

ಮಂಗಳ ಮುಖಿಯರ ಏಳ್ಗೆಗೆ ಒತ್ತು ನೀಡುವಲ್ಲಿ ಕೇರಳ ಸರಕಾರ ಮುಂಚೂಣಿಯಲ್ಲಿದೆ

Vijaya Karnataka Web 29 Jan 2018, 9:19 pm
ತಿರುವನಂತಪುರಂ: ಮಂಗಳ ಮುಖಿಯರ ಏಳಿಗೆಗೆ ಒತ್ತು ನೀಡುವಲ್ಲಿ ಕೇರಳ ಸರಕಾರ ಮುಂಚೂಣಿಯಲ್ಲಿದ್ದರೂ, ಅಲ್ಲಿನ ಪೊಲೀಸರಿಂದಾಗಿ ಪ್ರತಿಬಾರಿ ಅವರು ಅವಮಾನಕ್ಕೊಳಗಾಗುತ್ತಿದ್ದಾರೆ.
Vijaya Karnataka Web transgenders in kerala buckling up for protest
ಕೇರಳ ಪೊಲೀಸರ ಕಾಟದ ವಿರುದ್ಧ ಮಂಗಳಮುಖಿಯರ ಪ್ರತಿಭಟನೆ


ಮಂಗಳಮುಖಿಯರನ್ನು ಕಂಡರೆ ಹೆಚ್ಚಿನ ಕೇರಳ ಪೊಲೀಸರು ಅಸಡ್ಡೆ ಹಾಗೂ ಪೂರ್ವಾಗ್ರಹದಂತೆ ವರ್ತಿಸುತ್ತಿದ್ದು, ಇದರಿಂದ ಬೇಸತ್ತ ಮಂಗಳ ಮುಖಿಯರ ಸಂಘಟನೆ ಇದೀಗ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ದವಾಗಿದೆ.

ನಾವು ಈಗಾಗಲೇ ಮುಖ್ಯಮಂತ್ರಿ, ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವರಿಗೆ ಪತ್ರಮುಖೇನ ಮನವಿ ಮಾಡಿದ್ದೇವೆ. ಆದರೆ ಯಾರೂ ಕೂಡಾ ನಮ್ಮ ಬಗ್ಗೆ ಕನಿಕರ ತೋರಿಲ್ಲ. ಹೀಗಾಗಿ ನಾವು ಫೆ.14 ಪ್ರೇಮಿಗಳ ದಿನದಂದು ರಾಜ್ಯದ್ಯಾಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಒಂದು ವೇಳೆ ಇದಕ್ಕೂ ಯಾವುದೇ ಸ್ಪಂದನೆ ಸಿಗದಿದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸುತ್ತೇವೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ