ಆ್ಯಪ್ನಗರ

ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಲೇಸು: ಕಾಂಗ್ರೆಸ್ ಮುಖಂಡ ಸಿಧು

ಭಾಷೆ ಹಾಗೂ ಆಹಾರದ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಉತ್ತಮ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಪಾಕ್‌ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.

Vijaya Karnataka 14 Oct 2018, 7:44 am
ಹೊಸದಿಲ್ಲಿ: ಭಾಷೆ ಹಾಗೂ ಆಹಾರದ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಉತ್ತಮ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಪಾಕ್‌ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
Vijaya Karnataka Web navjot_singh_sidhu


ಇತ್ತೀಚೆಗಷ್ಟೇ ಪಾಕ್‌ ಸೇನಾ ಮುಖ್ಯಸ್ಥರ ಆಲಿಂಗನದ ಮೂಲಕ ವಿವಾದಕ್ಕೆ ಸಿಲುಕಿದ್ದ ಸಿಧು ಈಗ ಅಸಂಬದ್ಧ ಹೇಳಿಕೆ ಮೂಲಕ ಹೊಸ ವಿವಾದ ಮೈಮೇಲೆಳೆದುಕೊಂಡಿದ್ದಾರೆ.

ಕಸೌಲಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ''ನಾನು ದಕ್ಷಿಣ ಭಾರತಕ್ಕೆ ಹೋದಾಗ ಅಲ್ಲಿನ ಭಾಷೆಯೇ ಅರ್ಥವಾಗುವುದಿಲ್ಲ. ಅಲ್ಲಿನ ತಿಂಡಿ-ತಿನಿಸು ಮೊದಲೇ ಇಷ್ಟವಾಗುವುದಿಲ್ಲ. ಅವುಗಳನ್ನು ಹೆಚ್ಚು ಕಾಲ ಸೇವಿಸುವುದೂ ಕಷ್ಟ. ಅಲ್ಲಿನ ಸಂಸ್ಕೃತಿಯೇ ಸಂಪೂರ್ಣ ಭಿನ್ನ. ಆದರೆ ಪಾಕಿಸ್ತಾನಕ್ಕೆ ಹೋದಾಗ ಇಂತಹ ಸಮಸ್ಯೆಯಿಲ್ಲ. ಇಲ್ಲೂ ಅಲ್ಲೂ ಒಂದೇ. ಅಷ್ಟೇ ಅಲ್ಲ, ಅಲ್ಲಿ ಎಲ್ಲವೂ ಅದ್ಭುತ,'' ಎಂದು ಸಿಧು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ