ಆ್ಯಪ್ನಗರ

ತ್ರಿವಳಿ ತಲಾಖ್‌: ರಾಜ್ಯಸಭೆಯಲ್ಲಿ ಗದ್ದಲ, ಮೂಡದ ಒಮ್ಮತ

ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ರಾಜ್ಯ ಸಭೆಯಲ್ಲಿ ಮುಸ್ಲಿಂ ಮಹಿಳಾ(ಪ್ರೊಟೆಕ್ಷನ್‌ ಆಫ್‌ ರೈಟ್ಸ್‌ ಆನ್‌ ಮ್ಯಾರೇಜ್) ಕಾಯ್ದೆ 2018 ಮಂಡಿಸಿದ್ದಾರೆ. ಈ ವೇಳೆಗೆ ಕಾಂಗ್ರೆಸ್‌ ಕಾಯ್ದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ನೀಡಬೇಕೆಂದು ಹಠ ಹಿಡಿದಿದೆ.

Vijaya Karnataka Web 31 Dec 2018, 8:29 pm
[This story originally published in Times of India on dec 31, 2018]

ಹೊಸದಿಲ್ಲಿ: ತ್ರಿವಳಿ ತಲಾಖ್‌ ಸಂಬಂಧಿಸಿದಂತೆ ಚರ್ಚೆ ರಾಜ್ಯಸಭೆಯಲ್ಲಿ ಇಂದೂ ಕೈಗೂಡಿಲ್ಲ. ತಿದ್ದುಪಡಿ ಕಾಯ್ದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ನೀಡಲೇ ಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿದ ಪರಿಣಾಮ ರಾಜ್ಯಸಭೆಯಲ್ಲಿ ಸಾಕಷ್ಟು ಗಲಭೆ ಉಂಟಾಗಿದೆ.

ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ರಾಜ್ಯ ಸಭೆಯಲ್ಲಿ ಮುಸ್ಲಿಂ ಮಹಿಳಾ(ಪ್ರೊಟೆಕ್ಷನ್‌ ಆಫ್‌ ರೈಟ್ಸ್‌ ಆನ್‌ ಮ್ಯಾರೇಜ್) ಕಾಯ್ದೆ 2018 ಮಂಡಿಸಿದ್ದಾರೆ. ಈ ವೇಳೆಗೆ ಕಾಂಗ್ರೆಸ್‌ ಕಾಯ್ದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ನೀಡಬೇಕೆಂದು ಹಠ ಹಿಡಿದಿದ್ದು, ದಿನವಿಡೀ, ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿಲ್ಲ.

ಬೆಳಗ್ಗಿನ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಎಐಡಿಎಂಕೆ ಸದಸ್ಯರಿಂದ ಕಾವೇರಿ ವಿಚಾರವೂ ಪ್ರಸ್ತಾಪವಾಗಿದ್ದು, ಸದಸ್ಯರು ಧರಣಿ ನಡೆಸಿದ್ದರು. ಸದನದಲ್ಲಿ ಉಂಟಾದ ಗಲಭೆಯಿಂದಾಗಿ 1 ಬಾರಿ ಸಭೆಯನ್ನು ಮುಂದೂಡಲಾಗಿದೆ.ಮಧ್ಯಾಹ್ನದ ಬಳಿಕ ನಡೆದ ಸಭೆಯಲ್ಲಿ ತ್ರಿವಳಿ ತಲಾಕ್‌ ಕಾಯ್ದೆ ಮಂಡಿಸಲಾಗಿದ್ದು, ಈ ವೇಳೆಯೂ ಗದ್ದಲ ಉಂಟಾಗಿ ಸಭೆಯನ್ನು ಮುಂದೂಡಲಾಗಿದೆ.

ಕಾಯ್ದೆ ಅತ್ಯಂತ ಗಂಭೀರವಾದ ವಿಚಾರವಾಗಿದ್ದು, ಮತ್ತೊಮ್ಮೆ ಪರಿಶೀಲನೆ ನಡೆಸುವ ಅಗತ್ಯವಿದೆ. ಸದನದಲ್ಲಿನ ಅರ್ಧಕ್ಕಿಂತಲೂ ಅಧಿಕ ಮಂದಿ ಕಾಯ್ದೆಯನ್ನು ಆಯ್ಕೆ ಸಮಿತಿಗೆ ನೀಡುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಗುಲಾಂನಬಿ ಆಜಾದ್‌ ತಿಳಿಸಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯಸಚಿವ ವಿಜಯ್‌ ಗೋಯಲ್‌, ಸರಕಾರ ಚರ್ಚೆಗೆ ಸಿದ್ಧವಾಗಿದೆ. ಕಾಂಗ್ರೆಸ್‌ ವಿನಾಕಾರಣ ಸದನದಲ್ಲಿ ಗದ್ದಲ ಎಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ವಿವಾಹಿತ ಮುಸ್ಲಿಂ ಮಹಿಳೆಯರಿಗೆ ಭದ್ರತೆ ಒದಗಿಸುವ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ ಸದನ ಸರಿಯಾಗಿ ನಡೆಯದೇ ಇರುವುದಕ್ಕೆ ಉಪ ಸಭಾಪತಿ ಹರಿವಂಶ್‌ ಬೇಸರ ವ್ಯಕ್ತಪಡಿಸಿದ್ದಾರೆ. ಸೂಕ್ತ ಚರ್ಚೆ ನಡೆಸಿ ಪರಿಸ್ಥಿತಿ ನಿಭಾಯಿಸಬೇಕಿದೆ ಎಂದಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ಕಳೆದ ಗುರುವಾರ ಕಾಯ್ದೆಗೆ ಒಪ್ಪಿಗೆ ಸೂಚಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ