ಆ್ಯಪ್ನಗರ

ತ್ರಿವಳಿ ತಲಾಖ್ ಪ್ರಕರಣ: ತ್ವರಿತ ನ್ಯಾಯದಾನಕ್ಕೆ ವಿಶೇಷ ಕೋರ್ಟ್‌ಗಳ ಸ್ಥಾಪನೆ: ರವಿಶಂಕರ ಪ್ರಸಾದ್

ದಿಢೀರ್ ವಿಚ್ಛೇದನದಿಂದ ನೊಂದ ಮುಸ್ಲಿಂ ಮಹಿಳೆಯರಿಗೆ ತ್ವರಿತ ನ್ಯಾಯ ಒದಗಿಸಲು ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ವಿಕ ಸೋದರ ಪತ್ರಿಕೆ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

THE ECONOMIC TIMES 2 Aug 2019, 3:37 pm
ಹೊಸದಿಲ್ಲಿ: ತ್ರಿವಳಿ ತಲಾಖ್‌ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ಕೋರ್ಟ್‌ಗಳನ್ನು ರಚಿಸಲು ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.
Vijaya Karnataka Web Ravi Shankar Prasad


ಎಕನಾಮಿಕ್ ಟೈಮ್ಸ್ ಜತೆ ಮಾತನಾಡುತ್ತ, 'ತ್ರಿವಳಿ ತಲಾಖ್‌ ಪ್ರಕರಣಗಳಲ್ಲಿ ನೊಂದ ಮುಸ್ಲಿಂ ಮಹಿಳೆಯರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಪ್ರತ್ಯೇಕ ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳನ್ನು ಸರಕಾರ ಸ್ಥಾಪಿಸಲಿದೆ' ಎಂದು ಅವರು ತಿಳಿಸಿದರು.

ಮುಸ್ಲಿಂ ಸಮುದಾದಯ ಕೋಮುವಾದಿ, ಸಂಪ್ರದಾಯವಾದಿ ಮತ್ತು ಮೂಲಭೂತವಾದಿ ಶಕ್ತಿಗಳ ಜತೆ ಶಾಮೀಲಾಗಿ ಕಾಂಗ್ರೆಸ್‌ ಇದುವರೆಗೂ ನೊಂದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರೆಯದಂತೆ ಮಾಡಿತ್ತು ಎಂದು ಸಚಿವರು ಟೀಕಿಸಿದರು.

ಲೋಕಸಭೆಯ ಮೊದಲ ಅಧಿವೇಶನದಲ್ಲಿ ಹೊಸ ದಾಖಲೆ ಸೃಷ್ಟಿಯಾಗುತ್ತೆ! ಏನು ಗೊತ್ತಾ?

ಕಾಂಗ್ರೆಸ್‌ 1986ರ ಮನಸ್ಥಿತಿಯಲ್ಲೇ ಈಗಲೂ ಉಳಿದುಕೊಂಡಿದೆ. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಶಾಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನೇ ರದ್ದುಗೊಳಿಸಿ ಹೊಸ ಕಾನೂನು ರಚಿಸಿದರು. ಆ ಮೂಲಕ ವಿಚ್ಛೇದಿತ ಮುಸ್ಲಿಂ ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಹಕ್ಕುಗಳನ್ನು ವಂಚಿಸಿದರು. ಕಾಂಗ್ರೆಸ್ ಪಕ್ಷ ಈಗಲೂ 'ವೋಟ್ ಬ್ಯಾಂಕ್ ರಾಜಕಾರಣವನ್ನೇ' ದೃಷ್ಟಿಯಲ್ಲಿಟ್ಟುಕೊಂಡು ತ್ರಿವಳಿ ತಲಾಖ್ ವಿಧೇಯಕವನ್ನು ವಿರೋಧಿಸುತ್ತಿದೆ ಎಂದು ರವಿಶಂಕರ್ ಪ್ರಸಾದ್ ಟೀಕಿಸಿದರು.

ಯುಎಪಿಎ ತಿದ್ದುಪಡಿ ವಿಧೇಯಕಕ್ಕೆ ಸಂಸತ್ ಅಂಗೀಕಾರ ಮುದ್ರೆ


'ತ್ರಿವಳಿ ತಲಾಖ್ ವಿಧೇಯಕವನ್ನು ಸಂಸತ್ ಅಂಗೀಕರಿಸಿರುವುದು ಐತಿಹಾಸಿಕ ಘಟನೆ. ಮಹಿಳಾ ಸಬಲೀಕರಣದ ವಿಚಾರದಲ್ಲಿ ಇದೊಂದು ಅತ್ಯಂತ ದೂರಗಾಮಿ ಪರಿಣಾಮ ಬೀರುವ ಘಟನೆಯಾಗಿದೆ. ಇದು 2019ರ ಭಾರತ. ಸಾಮಾಜಿಕ ಪಿಡಿಗುಗಳನ್ನು ಹತ್ತಿಕ್ಕಲು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕಟಿಬದ್ಧರಾಗಿರುವುದು ಹೆಮ್ಮೆಯ ಸಂಗತಿ' ಎಂದು ಪ್ರಸಾದ್ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ