ಆ್ಯಪ್ನಗರ

ಇಸ್ರತ್‌ ಜಹಾನ್‌ ಮೇಲೆ ಹಲ್ಲೆ

''ಶಾಲೆಯಿಂದ ಮಗನನ್ನು ಮನೆಗೆ ಕರೆ ತರುವ ಮಾರ್ಗ ಮಧ್ಯ ಅಡ್ಡಗಟ್ಟಿದ ಪುಂಡರ ಗುಂಪು, ಹನುಮಾನ್‌ ಚಾಲಿಸಾಕ್ಕೆ ಹಾಜರಾಗಿದ್ದು ಯಾಕೆ ಎಂದು ಪ್ರಶ್ನಿಸಿ ಕಿರಿಕಿರಿ ಮಾಡಿದರು.

PTI 19 Jul 2019, 5:00 am
ಕೋಲ್ಕೊತಾ: 'ಹನುಮಾನ್‌ ಚಾಲಿಸಾ' ಪಠಣ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಕಾರಣ ತಮ್ಮ ಮೇಲೆ ಕೆಲವು ಪಟ್ಟಭದ್ರರಿಂದ ಹಲ್ಲೆ ನಡೆದಿದ್ದು, ಜೀವ ಬೆದರಿಕೆ ಎದುರಾಗಿದೆ ಎಂದು ತ್ರಿವಳಿ ತಲಾಕ್‌ ವಿರುದ್ಧದ ಹೋರಾಟಗಾರ್ತಿ ಇಸ್ರತ್‌ ಜಹಾನ್‌ ಹೇಳಿದ್ದಾರೆ. ''ಶಾಲೆಯಿಂದ ಮಗನನ್ನು ಮನೆಗೆ ಕರೆ ತರುವ ಮಾರ್ಗ ಮಧ್ಯ ಅಡ್ಡಗಟ್ಟಿದ ಪುಂಡರ ಗುಂಪು, ಹನುಮಾನ್‌ ಚಾಲಿಸಾಕ್ಕೆ ಹಾಜರಾಗಿದ್ದು ಯಾಕೆ ಎಂದು ಪ್ರಶ್ನಿಸಿ ಕಿರಿಕಿರಿ ಮಾಡಿದರು. ನಂತರ ಎಳೆದಾಡಿ, ಜೀವ ಬೆದರಿಕೆ ಹಾಕಿದರು'' ಎಂದಿದ್ದಾರೆ. ಪೊಲೀಸ್‌ ಭದ್ರತೆ ಒದಗಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ತ್ರಿವಳಿ ತಲಾಕ್‌ ಪದ್ಧತಿ ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದವರ ಪೈಕಿ ಪ್ರಮುಖರಾಗಿದ್ದ ಇಸ್ರತ್‌ ಜಹಾನ್‌, ತಾವುಜಾತ್ಯತೀತ ನಿಲುವಿನ ವ್ಯಕ್ತಿಯಾಗಿದ್ದು, ಗೊಡ್ಡು ಧಾರ್ಮಿಕ ಕಟ್ಟಳೆಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.
Vijaya Karnataka Web ishrat

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ