ಆ್ಯಪ್ನಗರ

ದಿಗ್ವಿಜಯ್‌ ಸೋತಿದ್ದಕ್ಕೆ ವೈರಾಗ್ಯಾನಂದ ಆತ್ಮಾಹುತಿ!

''ಭಾನುವಾರ ಮಧ್ಯಾಹ್ನ 2.11ಕ್ಕೆ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳಲಿದ್ದೇನೆ. ಅದಕ್ಕೆ ಅನುಮತಿ ಕೊಡಬೇಕು,'' ಎಂದು ಸ್ವಾಮಿ ವೈರಾಗ್ಯಾನಂದ ಅವರು ಭೋಪಾಲ್‌ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.

Agencies 16 Jun 2019, 5:00 am
ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ ಕ್ಷೇತ್ರದಲ್ಲಿ ದಿಗ್ವಿಜಯ್‌ ಸಿಂಗ್‌ ಸೋತರೆ 'ಸಮಾಧಿ' ಹೊಂದುವುದಾಗಿ ಹೇಳಿಕೆ ನೀಡಿದ್ದ ಸ್ವಾಮಿ ವೈರಾಗ್ಯಾನಂದ ಈಗ ಟ್ರೋಲಿಗರ ಕಾಟ ತಡೆಯಲಾಗದೆ ಆತ್ಮಾಹುತಿಗೆ ಮುಂದಾಗಿದ್ದಾರೆ!
Vijaya Karnataka Web trolled after digvijaya singhs defeat seer seeks go ahead for immolation
ದಿಗ್ವಿಜಯ್‌ ಸೋತಿದ್ದಕ್ಕೆ ವೈರಾಗ್ಯಾನಂದ ಆತ್ಮಾಹುತಿ!


''ಭಾನುವಾರ ಮಧ್ಯಾಹ್ನ 2.11ಕ್ಕೆ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳಲಿದ್ದೇನೆ. ಅದಕ್ಕೆ ಅನುಮತಿ ಕೊಡಬೇಕು,'' ಎಂದು ಸ್ವಾಮಿ ವೈರಾಗ್ಯಾನಂದ ಅವರು ಭೋಪಾಲ್‌ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದಕ್ಕೆ ಅನುಮತಿ ನಿರಾಕರಿಸಲಾಗಿದೆ. ಗುರುವಾರವೇ ವಕೀಲರ ಮೂಲಕ ಅರ್ಜಿ ಸಲ್ಲಿಸಿರುವ ಅವರು, ''ದಿಗ್ವಿಜಯ್‌ ಸಿಂಗ್‌ ಅವರ ಜಯಕ್ಕಾಗಿ ಹೋಮ ಮಾಡಿದ ಹೊತ್ತಿನಲ್ಲಿ, ಒಂದೊಮ್ಮೆ ಅವರು ಸೋತರೆ ಹವನ ಕುಂಡದ ಪವಿತ್ರ ಅಗ್ನಿಯಲ್ಲಿ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಸಂಕಲ್ಪ ಮಾಡಿದ್ದೆ,'' ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದÜ ದಿಗ್ವಿಜಯ್‌ ಸಿಂಗ್‌ ಅವರು ಬಿಜೆಪಿಯ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರ ಎದುರು ಸೋಲು ಕಂಡ ಬೆನ್ನಿಗೇ ಸಾಮಾಜಿಕ ಜಾಲತಾಣದಲ್ಲಿ 'ಯಾವಾಗ ಆತ್ಮಾಹುತಿ' ಎಂದು ವೈರಾಗ್ಯಾನಂದ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲು ಆರಂಭಿಸಲಾಗಿತ್ತು.
ಅವಕಾಶ ನೀಡಲಾಗದು: ಡಿಸಿ
ಈ ನಡುವೆ, ಭೋಪಾಲ್‌ ಜಿಲ್ಲಾಧಿಕಾರಿ ತರುಣ್‌ ಕುಮಾರ್‌ ಪಿತೋಡ್‌ ಅವರು ರಾಜ್ಯದ ಪೊಲೀಸ ಮಹಾನಿರ್ದೇಶಕರಿಗೆ ಪತ್ರ ಬರೆದು ಈ ರೀತಿ ಆತ್ಮಾಹುತಿಗೆ ಅವಕಾಶ ನೀಡಲಾಗದು. ಕೂಡಲೇ ಅರ್ಜಿದಾರರ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಯಾರು ಈಗ ವೈರಾಗ್ಯಾನಂದ?
ಸಾಧುಗಳ ನಿರಂಜನಿ ಅಖಾಡಕ್ಕೆ ಸೇರಿದವರು ಈ ಸ್ವಾಮಿ ವೈರಾಗ್ಯಾನಂದ. ದಿಗ್ವಿಜಯ್‌ ಸಿಂಗ್‌ ಪರ ಕಂಕಣ ಕಟ್ಟಿ ನಿಂತ ಈ ಸಾಧು, ಪ್ರಜ್ಞಾ ಸಿಂಗ್‌ ಸೋಲಿಗಾಗಿ 20000 ಸಾಧುಗಳನ್ನು ಬಳಸಿ ಮೆಣಸಿನ ಕಾಯಿ ಹೋಮ ನಡೆಸಿದ್ದರು. ಜಗತ್ತಿನ ಕಲ್ಯಾಣಕ್ಕಾಗಿ ಯಾಗ ಮಾಡಬೇಕಾದ ಸಾಧುಗಳು ಒಬ್ಬ ವ್ಯಕ್ತಿಯ ಬೆನ್ನು ಬಿದ್ದಿರುವುದು ನಿರಂಜನಿ ಅಖಾಡದ ಮುಖ್ಯಸ್ಥರನ್ನು ಕೆರಳಿಸಿತ್ತು. ಬಳಿಕ ವೈರಾಗ್ಯಾನಂದರನ್ನು ಮಹಾಮಂಡಲೇಶ್ವರ ಪೀಠದಿಂದ ತೆಗೆದುಹಾಕಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ