ಆ್ಯಪ್ನಗರ

ಟಿಆರ್‌ಪಿ ಹಗರಣ: ಸುಪ್ರೀಂನಿಂದ ರಿಪಬ್ಲಿಕ್‌ ಟಿವಿ ಅರ್ಜಿ ವಜಾ..! ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ

ದೇಶದ ಮಾಧ್ಯಮ ಇತಿಹಾಸದಲ್ಲಿ ವಿವಾದ ಸೃಷ್ಟಿಸಿರುವ ಟಿಆರ್‌ಪಿ ಹಗರಣದ ಕುರಿತು ಮುಂಬಯಿ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನಮ್ಮನ್ನು ಸಂಪರ್ಕಿಸುವ ಮೊದಲು ಬಾಂಬೆ ಹೈಕೋರ್ಟ್‌ನ್ನು ಸಂಪರ್ಕಿಸಿ ಎಂದು ಪೀಠ ವಾಹಿನಿಗೆ ಸೂಚಿಸಿದೆ.

Agencies 15 Oct 2020, 4:13 pm
ಹೊಸದಿಲ್ಲಿ: ಟಿಆರ್‌ಪಿ ಹಗರಣದ ಕುರಿತು ಮುಂಬಯಿ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ನಮ್ಮನ್ನು ಸಂಪರ್ಕಿಸುವ ಮೊದಲು ಬಾಂಬೆ ಹೈಕೋರ್ಟ್‌ನ್ನು ಮೊದಲು ಸಂಪರ್ಕಿಸಿ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ ವಾಹಿನಿಗೆ ಸೂಚಿಸಿದೆ.
Vijaya Karnataka Web trp scam sc declines to hear republic tv plea against mumbai police probe
ಟಿಆರ್‌ಪಿ ಹಗರಣ: ಸುಪ್ರೀಂನಿಂದ ರಿಪಬ್ಲಿಕ್‌ ಟಿವಿ ಅರ್ಜಿ ವಜಾ..! ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ


ಇನ್ನು, ನಿಮ್ಮ ಕಚೇರಿ ಮುಂಬೈನ ವರ್ಲಿಯಲ್ಲಿದೆ. ವರ್ಲಿಯಿಂದ ಫ್ಲೋರಾ ಫೌಂಟೇನ್ ಬಹಳ ಹತ್ತಿರದಲ್ಲಿದೆ. ಫ್ಲೋರಾ ಫೌಂಟೇನ್‌ನಲ್ಲಿ ಬಾಂಬೆ ಹೈಕೋರ್ಟ್‌ ಇದೆ. ಹಾಗಾಗಿ, ನೀವು ಮೊದಲು ನಮ್ಮ ಹೈಕೋರ್ಟ್‌ನ್ನು ಸಂಪರ್ಕಿಸಿ. ಜೊತೆಗೆ ಹೈಕೋರ್ಟ್‌ಗಳಲ್ಲಿ ನಂಬಿಕೆ ಇರಿಸಿ ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದ್ದಾರೆ.

ರಿಪಬ್ಲಿಕ್‌ ಟಿವಿ ಅರ್ಜಿ ವಿಚಾರಣೆ ಮಾಡಲು ನಿರಾಕರಿಸಿದರೂ ಮುಂಬಯಿ ಪೊಲೀಸ್ ಅಧಿಕಾರಿಗಳ ವರ್ತನೆಯನ್ನು ಸುಪ್ರೀಂ ಕೋರ್ಟ್‌ ಖಂಡಿಸಿದೆ. ಈ ದಿನಗಳಲ್ಲಿ ಪೊಲೀಸ್ ಆಯುಕ್ತರು ಮಾದ್ಯಮಗಳಿಗೆ ಸಂದರ್ಶನ ನೀಡುವುದನ್ನು ಶುರುಮಾಡಿಕೊಂಡಿದ್ದಾರೆ. ಅದು ಕಳವಳಕಾರಿಯಾದ ಅಂಶ ಎಂದು ನ್ಯಾ.ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಟಿಆರ್‌ಪಿ ಹಗರಣ: ನಾಲ್ವರು ಆರೋಪಿಗಳು ಪೊಲೀಸ್‌ ಕಸ್ಟಡಿಗೆ, ರಿಪಬ್ಲಿಕ್‌ ಟಿವಿ ಸಿಎಫ್‌ಒಗೆ ಸಮನ್ಸ್‌

ರಿಪಬ್ಲಿಕ್‌ ಟಿವಿ ಚಾನಲ್‌ ವಕೀಲ ಹರೀಶ್ ಸಾಳ್ವೆ ಅರ್ಜಿಯನ್ನು ಹಿಂಪಡೆದು, ಬಾಂಬೆ ಹೈಕೋರ್ಟ್‌ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಟಿಆರ್‌ಪಿ ಹಗರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಮುಂದಿನ ಮೂರು ತಿಂಗಳು ಕಾಲ ಸುದ್ದಿವಾಹಿನಿಗಳ ಟಿಆರ್‌ಪಿಯನ್ನು ಪ್ರಕಟಿಸದಿರಲು ಬಾರ್ಕ್‌ ನಿರ್ಧರಿಸಿದೆ.

ಟಿಆರ್‌ಪಿ ವಿವಾದ: ಸುದ್ದಿ ವಾಹಿನಿಗಳ ರೇಟಿಂಗ್ಸ್‌ ಸ್ಥಗಿತಗೊಳಿಸಿದ ‘ಬಾರ್ಕ್‌’

ಕಳೆದ ವಾರ ಮುಂಬಯಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಸುದ್ದಿಗೋಷ್ಠಿ ನಡೆಸಿ, ರಿಪಬ್ಲಿಕ್‌ ಟಿವಿ ಹಾಗೂ ಎರಡು ಮರಾಠಿ ವಾಹಿನಿಗಳಾದ ಬಾಕ್ಸ್‌ ಸಿನಿಮಾ ಮತ್ತು ಫಕ್ತ ಮರಾಠಿ ಚಾನೆಲ್‌ಗಳು ಜಾಹೀರಾತುಗಳು ಮತ್ತು ಆದಾಯಕ್ಕೆ ಟಿಆರ್‌ಪಿಯನ್ನು ಬದಲಾಯಿಸುತ್ತೇವೆ ಎಂದು ಹೇಳಿದ್ದರು.

ಅರ್ನಬ್‌ ಗೋಸ್ವಾಮಿ ವಿರುದ್ಧ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುಶಾಂತ್‌ ಸ್ನೇಹಿತ ಸಂದೀಪ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ