ಆ್ಯಪ್ನಗರ

ಅಮರಾವತಿಯಲ್ಲಿ ಸೃಷ್ಟಿಯಾಗಲಿದೆ ತಿರುಮಲ ವೆಂಕಟೇಶ್ವರ ದೇವಸ್ಥಾನದ ಪ್ರತಿರೂಪ

ತಿರುಮಲ ತಿರುತಿ ದೇವಸ್ಥಾನಂ ಸಮಿತಿ (ಟಿಟಿಡಿ) ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ತಿರುಪತಿ ದೇವಸ್ಥಾನದ ಪ್ರತಿರೂಪವನ್ನು ನಿರ್ಮಿಸಲಿದೆ.

Vijaya Karnataka Web 24 Aug 2018, 3:06 pm
[ಮೂಲ ಸುದ್ದಿ: ತೆಲುಗು ಸಮಯಂ, 24, ಆಗಸ್ಟ್‌ 2018 ]
Vijaya Karnataka Web temple


ಅಮರಾವತಿ: ತಿರುಮಲ ತಿರುತಿ ದೇವಸ್ಥಾನಂ ಸಮಿತಿ(ಟಿಟಿಡಿ) ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ತಿರುಪತಿ ದೇವಸ್ಥಾನದ ಪ್ರತಿರೂಪವನ್ನು ನಿರ್ಮಿಸಲಿದೆ.

ಕೃಷ್ಣಾ ನದಿ ತಟದಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನದಂತಿರುವ ದೇವಾಲಯವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, 25 ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಿಸಲು ಉದ್ಧೇಶಿಸಲಾಗಿದೆ.

ಸಂಪೂರ್ಣ ಕಲ್ಲಿನಿಂದ ದೇವಾಲಯ ನಿರ್ಮಿಸಲು ಉದ್ಧೇಶಿಸಲಾಗಿದ್ದು, ಈ ಸಂಬಂಧ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ದೇವಾಲಯದ ವಿನ್ಯಾಸಕ್ಕೆ ಒಪ್ಪಿಗೆ ಪಡೆಯಲಾಗಿದೆ.

2 ವರ್ಷದಲ್ಲಿ ದೇವಾಲಯದ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಉದ್ಧೇಶಿಸಲಾಗಿದೆ. ಒಳಭಾಗ ಹಾಗೂ ಹೊರಭಾಗದ ವಿನ್ಯಾಸದಲ್ಲಿ ಪ್ರಾಚೀನ ಕಾಲದ ವಾಸ್ತುಶಿಲ್ಪಗಳನ್ನು ಅಳವಡಿಸಲು ಚಂದ್ರಬಾಬು ನಾಯ್ಡು ಸಲಹೆ ನೀಡಿದ್ದಾರೆ.

ಅಗಮ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ದೇವಾಲಯ ನಿರ್ಮಿಸಲಾಗುತ್ತದೆ. ಪಲ್ಲವ, ಚೋಳ, ಚಾಲುಕ್ಯ ಹಾಗೂ ವಿಜಯನಗರ ಶೈಲಿಯ ವಿನ್ಯಾಸವನ್ನು ದೇವಾಲಯದ ವಿನ್ಯಾಸದಲ್ಲಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಲಾಸನಾಥ ಹಾಗೂ ಪೆರುಮಾಲ್‌ನ ವೈಕುಂಠ ದೇವಸ್ಥಾನಗಳನ್ನು ಪಲ್ಲವರ ವಾಸ್ತುಶಿಲ್ಪದ ಪ್ರಕಾರ ಕಟ್ಟಲಾಗಿದೆ. ತಿರುಚಿನಾಪಳ್ಳಿಯಲ್ಲಿರುವ ತಂಜಾವೂರ್‌ ಹಾಗೂ ಗಂಗೈಕೊಂಡ ಚೋಳಪುರಂನಲ್ಲಿ ಚೋಳರ ಕಾಲದ ವಾಸ್ತುಶಿಲ್ಪ ಕಾಣಬಹುದು. ಬಾದಾಮಿಯಲ್ಲಿ ಚಾಲುಕ್ಯರ ವಾಸ್ತುಶಿಲ್ಪ, ಐಹೊಳೆ ಹಾಗೂ ವಿಜಯನಗರದ ಹಂಪಿ ದೇವಾಲಯಗಳು ಕೃಷ್ಣದೇವರಾಯನ ಕಾಲದ ವಾಸ್ತುಶಿಲ್ಪಗಳು ಪ್ರಸಿದ್ಧವಾಗಿವೆ. ಈ ಎಲ್ಲ ವಿನ್ಯಾಸಗಳ ಮಾದರಿಯನ್ನು ಹೊಸ ತಿರುಮಲ ದೇವಸ್ಥಾನದಲ್ಲಿ ಅಳವಡಿಸಲು ಉದ್ಧೇಶಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ