ಆ್ಯಪ್ನಗರ

ಜಯಾ ಕ್ಷೇತ್ರದಲ್ಲಿ ದಿನಕರನ್‌ಗೆ ದಾಖಲೆಯ ಜಯ: ಇಪಿಎಸ್‌-ಒಪಿಎಸ್‌ಗೆ ಮುಖಭಂಗ

40 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಜಯ

TNN 24 Dec 2017, 6:12 pm
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನಿಂದ ತೆರವುಗೊಂಡಿದ್ದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಶಿಕಲಾ ನಟರಾಜನ್ ಬಣದ ಸ್ವತಂತ್ರ ಅಭ್ಯರ್ಥಿ ಟಿಟಿವಿ ದಿನಕರನ್ ಭರ್ಜರಿ ಜಯ ಗಳಿಸಿದ್ದಾರೆ.
Vijaya Karnataka Web ttv dhinakaran wins rk nagar bypoll with a huge margin
ಜಯಾ ಕ್ಷೇತ್ರದಲ್ಲಿ ದಿನಕರನ್‌ಗೆ ದಾಖಲೆಯ ಜಯ: ಇಪಿಎಸ್‌-ಒಪಿಎಸ್‌ಗೆ ಮುಖಭಂಗ


ಒಟ್ಟು 1,76,890 ಮತಗಳಲ್ಲಿ ದಿನಕರನ್ 89,013 ಮತಗಳನ್ನು ಗಳಿಸಿದರು. ಎಐಎಡಿಎಂಕೆಯ ಮಧುಸೂಧನ್‌ 48,306 ಮತಗಳನ್ನು ಪಡೆದಿದ್ದು, ದಿನಕರನ್‌ ಸುಮಾರು 40 ಸಾವಿರ ಮತಗಳ ಅಂತರದಲ್ಲಿ ದಾಖಲೆಯ ಜಯ ಸಾಧಿಸಿದ್ದಾರೆ.

ಮರೀನಾ ಬೀಚ್ ಬಳಿಯಿರುವ ರಾಣಿ ಮೇರಿ ಕಾಲೇಜಿನಲ್ಲಿ ಉಪ ಚುನಾವಣೆಯ ಮತ ಎಣಿಕೆ ಕಾರ್ಯಮುಗಿದಿದ್ದು, ದಿನಕರನ್‌ ಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಡಿ.21ರಂದು ಉಪಚುನಾವಣೆ ನಡೆದು ಶೇ.73.45ರಷ್ಟು ಮತದಾನವಾಗಿತ್ತು.

ದಿನಕರನ್‌ ಅವರ ಈ ಜಯ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಬಣಕ್ಕೆ ತೀವ್ರ ಮುಖಭಂಗವಾಗಿದೆ. ಪ್ರಮುಖ ಪ್ರತಿಪಕ್ಷ ಡಿಎಂಕೆಗೆ ಕೂಡ ಈ ಚುನಾವಣೆ ಫಲಿತಾಂಶ ಭಾರಿ ಹೊಡೆತ ನೀಡಿದೆ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ