ಆ್ಯಪ್ನಗರ

​ನಗ್ರೋತಾ ಎನ್‌ಕೌಂಟರ್‌: ಪಾಕ್‌ ಗಡಿಯಲ್ಲಿ ಸುರಂಗ ಪತ್ತೆ | ಉಗ್ರರು ಇಲ್ಲಿಂದಲೇ ಒಳನುಸುಳಿರುವ ಶಂಕೆ

ಗುರುವಾರ ನಡೆದ ನಗ್ರೋತಾ ಎನ್‌ಕೌಂಟರ್‌ನಲ್ಲಿ ಭಾರತೀಯ ಯೋಧರ ಗುಂಡಿಗೆ ಬಲಿಯಾದ ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ನಾಲ್ವರು ಉಗ್ರರು ನುಸುಳಿ ಬಂದಿದ್ದರು ಎನ್ನಲಾದ ಸುರಂಗ ಪತ್ತೆಯಾಗಿದೆ. ಸಾಂಬಾ ಅಂತಾರಾಷ್ಟ್ರೀಯ ಗಡಿ ಸಮೀಪ ಶೋಧ ಕಾರ್ಯ ಇನ್ನಷ್ಟು ತ್ವರಿತಗೊಂಡಿದೆ

Agencies 22 Nov 2020, 10:45 pm
ಜಮ್ಮು: ಭಾರತೀಯ ಯೋಧರ ಗುಂಡಿಗೆ ಬಲಿಯಾದ ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ನಾಲ್ವರು ಉಗ್ರರು ನುಸುಳಿ ಬಂದಿದ್ದ ಸಾಂಬಾ ಅಂತಾರಾಷ್ಟ್ರೀಯ ಗಡಿ ಸಮೀಪ ಶೋಧ ಕಾರ್ಯ ಇನ್ನಷ್ಟು ತ್ವರಿತಗೊಂಡಿದೆ. ಈ ಭಾಗದಲ್ಲಿ ಸುರಂಗ ಮಾರ್ಗ ಪತ್ತೆಯಾಗಿದ್ದು, ಇದನ್ನು ಬಳಸಿಯೇ ಉಗ್ರರು ನುಸುಳಿ ಬಂದಿರಬಹುದು ಎಂದು ಶಂಕಿಸಲಾಗಿದೆ.
Vijaya Karnataka Web tunnel suspected to be used by terrorists found in j k samba report
​ನಗ್ರೋತಾ ಎನ್‌ಕೌಂಟರ್‌: ಪಾಕ್‌ ಗಡಿಯಲ್ಲಿ ಸುರಂಗ ಪತ್ತೆ | ಉಗ್ರರು ಇಲ್ಲಿಂದಲೇ ಒಳನುಸುಳಿರುವ ಶಂಕೆ


ತೀವ್ರ ಕಟ್ಟೆಚ್ಚರದ ನಡುವೆಯೂ ಜೈಷೆ ಉಗ್ರರು ಗಡಿ ದಾಟಿ ಬಂದಿದ್ದರು. ಕಾಶ್ಮೀರಕ್ಕೆ ತೆರಳುವ ಲಾರಿ ಹತ್ತಿ ಹೋಗುತ್ತಿದ್ದಾಗ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಾನ್‌ ಟೋಲ್‌ ಫ್ಲಾಜಾ ಬಳಿ ತಡೆಯಲಾಗಿತ್ತು. ಆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಪಾತಕಿಗಳು ಹತರಾಗಿದ್ದರು. ನವೆಂಬರ್‌ 28ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ವ್ಯಾಪಕ ವಿಧ್ವಂಸಕ ಕೃತ್ಯ ಎಸಗುವ ಸಂಚಿನೊಂದಿಗೆ ಈ ಉಗ್ರರು ಬಂದಿದ್ದರು ಎಂದು ಭದ್ರತಾ ಮೂಲಗಳು ಸ್ಪಷ್ಟಪಡಿಸಿವೆ.

ಈ ಉಗ್ರರು ನುಸುಳಿ ಬಂದ ಪ್ರದೇಶಗಳಲ್ಲಿ ಶುಕ್ರವಾರದಿಂದಲೂ ಸೇನೆ ಬಿರುಸಿನ ಕಾರ್ಯಾಚರಣೆ ನಡೆಸಿದೆ. ಭಾನುವಾರವೂ ಸುರಂಗ ಶೋಧ ಕಾರ್ಯಾಚರಣೆ ನಡೆಯಿತು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ನಗ್ರೋತಾ ಸಂಚು‌: ಉಗ್ರರಿಗೆ ಪಾಕ್‌ ಸೇನೆ ನೆರವು..! ಮತ್ತೊಂದು 26/11 ಮಾದರಿ ದಾಳಿ ವಿಫಲ

ನದಿ ಮಾರ್ಗ
ಗಡಿಯಲ್ಲಿ ಇರುವ ನೋನಾಥ್‌ ನಾಲಾಗುಂಟ ಉಗ್ರರು ನಡೆದು ಬಂದಿರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಕಾಲ್ನಡಿಗೆಯ ಕಚ್ಚಾ ರಸ್ತೆಗಳು ಪತ್ತೆಯಾಗಿವೆ. ಸುಮಾರು ಮೂರು ಗಂಟೆ ಉಗ್ರರು ನಡೆದು ಸುರಂಗದ ಮೂಲಕ ಭಾರತದ ಗಡಿ ಪ್ರವೇಶಿಸಿ, ಬಳಿಕ ಲಾರಿಯಲ್ಲಿ ಪ್ರಯಾಣ ಬೆಳೆಸಿರಬಹುದು ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಉಗ್ರರಿಗೆ ಪಾಕ್‌ ಸೇನಾ ನೆಲೆಗಳಲ್ಲಿಯೇ ಆಶ್ರಯ ನೀಡಿ, ತರಬೇತಿ ನೀಡಿದ್ದನ್ನೂ ಸೇನೆ ಪತ್ತೆ ಮಾಡಿದೆ.

ದೇಶಕ್ಕೆ ದೊಡ್ಡ ಹಾನಿ ಮಾಡುವ ಪ್ರಯತ್ನ ವಿಫಲ: ನಗ್ರೋತಾ ಸಂಚು ಖಂಡಿಸಿದ ಪ್ರಧಾನಿ!

ಆತ್ಮಾಹುತಿ ದಾಳಿಕೋರರುನಗ್ರೊತಾ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಉಗ್ರರು ಆತ್ಮಾಹುತಿ ದಾಳಿಕೋರರೇ ಇರಬಹುದು. ಮರಣೋತ್ತರ ಪರೀಕ್ಷೆ ವೇಳೆ ಪತ್ತೆಯಾದ ಕೆಲವು ಲಕ್ಷಣಗಳಿಂದ ಅವರು ಜಿಹಾದಿಗಳೇ ಇರಬಹುದೆಂಬ ನಿರ್ಧಾರಕ್ಕೆ ಬರಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ