ಆ್ಯಪ್ನಗರ

ಸಣ್ಣಪುಟ್ಟ ಅಸಮಾಧಾನವಿತ್ತು, ಎಲ್ಲವೂ ಸರಿ ಹೋಗಿದೆ ಎಂದ ಬಿಜೆಪಿ ನಾಯಕರು

ಪಕ್ಷದ ಶಾಸಕರಾದ ನಾರಾಯಣ್‌ ತ್ರಿಪಾಠಿ ಮತ್ತು ಶರದ್‌ ಕೋಲ್‌ ಬುಧವಾರ ಕಾಂಗ್ರೆಸ್‌ ಪರ ಮತದಾನ ಮಾಡಿದ ಬಳಿಕ, ವರಿಷ್ಠರ ಬುಲಾವ್‌ ಮೇರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಕೇಶ್‌ ಸಿಂಗ್‌ ದಿಲ್ಲಿಗೆ ತೆರಳಿ ವಿವರಣೆ ನೀಡಿದ್ದರು.

PTI 26 Jul 2019, 5:00 am
ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆಯಲ್ಲಿ ವಿಧೇಯಕವೊಂದರ ಅನುಮೋದನೆ ವೇಳೆ ಕಾಂಗ್ರೆಸ್‌ ನೇತೃತ್ವದ ಸರಕಾರದ ಪರವಾಗಿ ಬಿಜೆಪಿಯ ಇಬ್ಬರು ಶಾಸಕರು ಮತ ಚಲಾಯಿಸಿದ ಬೆನ್ನ ಹಿಂದೆಯೇ, ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web kamal-nath


ಪಕ್ಷದ ಶಾಸಕರಾದ ನಾರಾಯಣ್‌ ತ್ರಿಪಾಠಿ ಮತ್ತು ಶರದ್‌ ಕೋಲ್‌ ಬುಧವಾರ ಕಾಂಗ್ರೆಸ್‌ ಪರ ಮತದಾನ ಮಾಡಿದ ಬಳಿಕ, ವರಿಷ್ಠರ ಬುಲಾವ್‌ ಮೇರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಕೇಶ್‌ ಸಿಂಗ್‌ ದಿಲ್ಲಿಗೆ ತೆರಳಿ ವಿವರಣೆ ನೀಡಿದ್ದರು. ಗುರುವಾರ ರಾಜ್ಯಕ್ಕೆ ಮರಳಿದ ಅವರು ಸುದ್ದಿಗಾರರ ಜತೆ ಮಾತನಾಡಿ, ''ಪಕ್ಷದಲ್ಲಿ ಒಗ್ಗಟ್ಟಿದೆ. ಕಾಂಗ್ರೆಸ್‌ ಪರ ಒಲವು ತೋರಿದ ತ್ರಿಪಾಠಿ ಮತ್ತು ಕೋಲ್‌ ಅವರ ಜತೆ ಮಾತುಕತೆ ನಡೆಸಿದ್ದೇವೆ. ಸಣ್ಣಪುಟ್ಟ ಕಾರಣಕ್ಕೆ ಅಸಮಾಧಾನಗೊಂಡಿದ್ದ ಅವರು ಪಕ್ಷದ ಆಣತಿ ಮೀರಿ ಸರಕಾರದ ಪರ ಮತ ಚಲಾಯಿಸಿದರು. ಈಗ ಅವರ ಮನ ಒಲಿಸಲಾಗಿದೆ. ಎಲ್ಲವೂ ಸುಖಾಂತ್ಯಗೊಳ್ಳಲಿದೆ,'' ಎಂದು ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು. \
ವಿವಿಧ ರಾಜ್ಯಗಳಲ್ಲಿ ಶಾಸಕರು ಕಾಂಗ್ರೆಸ್‌ನಿಂದ ಬಿಜೆಪಿಗೆ ಲಗ್ಗೆ ಹಾಕುತ್ತಿರುವಾಗ, ಮಧ್ಯಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧ ಬೆಳವಣಿಗೆ ಘಟಿಸಿರುವುದು ದಿಲ್ಲಿ ವರಿಷ್ಠರಿಗೆ ಮುಜುಗರ ಉಂಟು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ