Please enable javascript.ತಂದೆಯ ಲಿವ್ ಇನ್ ಸಂಬಂಧದಿಂದ ಆಕ್ರೋಶ: ಮಹಿಳೆ ಮತ್ತು ಅಜ್ಜನನ್ನು ಕೊಂದ ಮಕ್ಕಳು - two brothers upset with father relationship stabs woman and grandfather to death - Vijay Karnataka

ತಂದೆಯ ಲಿವ್ ಇನ್ ಸಂಬಂಧದಿಂದ ಆಕ್ರೋಶ: ಮಹಿಳೆ ಮತ್ತು ಅಜ್ಜನನ್ನು ಕೊಂದ ಮಕ್ಕಳು

Authored byಅಮಿತ್ ಎಂ.ಎಸ್ | Vijaya Karnataka Web 19 Oct 2023, 5:52 pm
Subscribe

Kanpur Twin Murder: 30 ವರ್ಷದ ಮಹಿಳೆ ಜತೆ ಲಿವ್ ಇನ್ ಸಂಬಂಧದಲ್ಲಿದ್ದ ತಂದೆಯ ವಿರುದ್ಧ ಆಕ್ರೋಶಗೊಂಡಿದ್ದ ಸಹೋದರರಿಬ್ಬರು, ಆ ಮಹಿಳೆ ಹಾಗೂ ಅಜ್ಜನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ತಂದೆಯ ಮೇಲೆಯೂ ಮಕ್ಕಳು ದಾಳಿ ನಡೆಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಹೈಲೈಟ್ಸ್‌:

  • ಉತ್ತರ ಪ್ರದೇಶದ ಕಾನ್ಪುರದ ಅಮ್ರೋಧಾ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದ ಕೃತ್ಯ
  • ತಂದೆಯ ಲಿವ್ ಇನ್ ಸಂಬಂಧದ ವಿರುದ್ಧ ಆಕ್ರೋಶಗೊಂಡ ಸಹೋದರರಿಬ್ಬರಿಂದ ದಾಳಿ
  • 30 ವರ್ಷದ ಮಹಿಳೆ, 83 ವರ್ಷದ ಅಜ್ಜನನ್ನು ಕೊಂದು, ತಂದೆಯನ್ನು ಗಾಯಗೊಳಿಸಿದವರ ಬಂಧನ

UP Kanpur Murder Case
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ 83 ವರ್ಷದ ಅಜ್ಜನನ್ನು ಹಾಗೂ ತಮ್ಮ ತಂದೆಯ ಲಿವ್ ಇನ್ ಸಂಗಾತಿಯನ್ನು ಇಬ್ಬರು ಮಕ್ಕಳು ಸೇರಿ ಕೊಂದ ಘಟನೆ ಗುರುವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್ ಪ್ರಕಾಶ್ ದ್ವಿವೇದಿ (83) ಮತ್ತು ಅವರ ಮಗ ವಿಮಲ್ ಅವರ ಲಿವ್ ಇನ್ ಸಂಗಾತಿ ಖುಷ್ಬು (30) ಅವರನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿದೆ. 63 ವರ್ಷದ ವಿಮಲ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಮ್ರೋಧಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
Uttar Pradesh: ಆಕ್ಷೇಪಾರ್ಹ ಸ್ಥಿತಿಯಲ್ಲಿ ತನ್ನನ್ನು ನೋಡಿದ ಪುಟ್ಟ ತಂಗಿಯರನ್ನು ಬರ್ಬರವಾಗಿ ಕೊಂದ ಅಕ್ಕ

30 ವರ್ಷದ ಖುಷ್ಬು ಜತೆ 63ರ ವಿಮಲ್ ಲಿವ್ ಇನ್ ಸಂಬಂಧ ಹೊಂದಿರುವ ವಿಚಾರದಲ್ಲಿ ಕುಟುಂಬದ ಒಳಗೆ ಮನಸ್ತಾಪ ಹಾಗೂ ಜಗಳಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಆರೋಪಿಗಳಾದ 42 ವರ್ಷದ ಲಲಿತ್ ಮತ್ತು ಆತ ಮಲ ಸಹೋದರ, 18 ವರ್ಷದ ಅಕ್ಷತ್ ಇಬ್ಬರೂ ತಂದೆ ವಿಮಲ್ ಇದ್ದ ಮನೆಗೆ ತೆರಳಿ ಅವರನ್ನು, ರಾಮ್ ಪ್ರಕಾಶ್ ದ್ವಿವೇದಿ ಹಾಗೂ ಖುಷ್ಬು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಬಳಿಕ ರಾಮ್ ಪ್ರಕಾಶ್ ಮತ್ತು ಖುಷ್ಬು ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಬಿಜಿಟಿಎಸ್ ಮೂರ್ತಿ ಮಾಹಿತಿ ನೀಡಿದ್ದಾರೆ.

ಗಲಾಟೆ ನಡುವೆ ವಿಮಲ್ ಅವರು ಮನೆಯಿಂದ ಹೊರಗೆ ಬರಲು ಪ್ರಯತ್ನಿಸಿದ್ದರು. ಇದನ್ನು ದ್ವಿವೇದಿ ಕುಟುಂಬದ ಜತೆ ಈ ಹಿಂದೆ ವಾಸಿಸುತ್ತಿದ್ದ ಮುನ್ನಾ ಎಂಬ ವ್ಯಕ್ತಿ ನೋಡಿದ್ದ. ಕೂಡಲೇ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ವಿಮಲ್ ಅವರ ಸಹೋದರ ಕಮಲ್‌ಗೆ ಮಾಹಿತಿ ನೀಡಿದ್ದ.
ಅನೈತಿಕ ಸಂಬಂಧ, ಒಂದು ಕೊಲೆ ಮುಚ್ಚಿಡಲು ಇನ್ನೆರಡು ಹತ್ಯೆ: 19 ವರ್ಷಗಳ ಬಳಿಕ ನೌಕಾಪಡೆ ಮಾಜಿ ಉದ್ಯೋಗಿ ಅರೆಸ್ಟ್

ವಿಮಲ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಕಾನ್ಪುರದ ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಬಂದ ಕೂಡಲೇ ಪೊಲೀಸರು ಕಾರ್ಯೋನ್ಮುಖರಾದರು. ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹಂತಕರಾದ ಅಕ್ಷತ್ ಮತ್ತು ಲಲಿತ್ ಅವರನ್ನು ಸೆರೆಹಿಡಿಯುವಲ್ಲಿ ಸಫಲರಾದರು ಎಂದು ಮೂರ್ತಿ ಹೇಳಿದ್ದಾರೆ.

ಖುಷ್ಬೂ ಜತೆ ತಂದೆಯ ಸಂಬಂಧದ ಬಗ್ಗೆ ಅವರಿಬ್ಬರಿಗೂ ಬಹಳ ಅಸಮಾಧಾನವಿತ್ತು. ತನಿಖೆ ಸಂದರ್ಭದಲ್ಲಿ ಸಹೋದರರಿಬ್ಬರೂ ರಾಮ್‌ ಪ್ರಕಾಶ್ ಮತ್ತು ಖುಷ್ಬೂ ಅವರನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿ ರಾಜೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಅಮಿತ್ ಎಂ.ಎಸ್
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ