ಆ್ಯಪ್ನಗರ

ಇಬ್ಬರು ಹಿಜ್ಬುಲ್‌ ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಮುಂದುವರಿದ ಉಗ್ರರ ಬೇಟೆ.

Vijaya Karnataka 30 Nov 2018, 5:00 am
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ಬೇಟೆ ಮುಂದುವರಿದಿದೆ. ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ಕಮಾಂಡರ್‌ ರಿಯಾಜ್‌ ನೈಕೂ ನಿಕಟವರ್ತಿಗಳಾಗಿದ್ದ ಇಬ್ಬರು ಉಗ್ರರನ್ನು ಗುರುವಾರ ಹತ್ಯೆಗೈಯ್ಯಲಾಗಿದೆ.
Vijaya Karnataka Web BNG-2911-2-2-BODO

ಪುಲ್ವಾಮಾ ಜಿಲ್ಲೆಯ ಆವಂತಿಪೊರಾದಲ್ಲಿ ಶೋಧ ಕಾರ್ಯನ ನಡೆಯುತ್ತಿದ್ದ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನಮಳೆಗರೆದರು. ಪ್ರತಿಯಾಗಿ ಯೋಧರೂ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರೂ ಉಗ್ರರು ಮೃತಪಟ್ಟರು. ಹತರಾದವರನ್ನು ಅದ್ನಾನ್‌ ಅಹಮದ್‌ ಲೋನ್‌ ಅಲಿಯಾಸ್‌ ಉಖಾಬ್‌ ಹಾಗೂ ಆದಿಲ್‌ ಬಿಲಾಲ್‌ ಭಟ್‌ ಅಲಿಯಾಸ್‌ ಉಮೇರ್‌ ಹಲ್‌ ಉಜ್ಬಿ ಎಂದು ಗುರುತಿಸಲಾಗಿದೆ.
2015ರಿಂದಲೂ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಲೋನ್‌, ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ಪುಲ್ವಾಮಾ ಜಿಲ್ಲೆಯ ಕಮಾಂಡರ್‌ ಆಗಿದ್ದ. ಈತ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ಸ್ವಲ್ಪದರಲ್ಲೇ ಬಚಾವಾಗಿದ್ದ. ಭಟ್‌ 2017ರಲ್ಲಿ ಆವಂತಿಪೊರಾದಲ್ಲಿ ನಡೆದ ಮುಖ್ಯಪೇದೆ ಆಶಿಕ್‌ ಹುಸೇನ್‌ ಹತ್ಯೆಯಲ್ಲಿ ಭಾಗಿಯಾಗಿದ್ದ. ಅಲ್ಲದೇ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಇತಿಹಾಸ ಹೊಂದಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ