ಆ್ಯಪ್ನಗರ

ದೆಹಲಿಯಲ್ಲಿ ಇಬ್ಬರು ಜೈಷ್‌ ಉಗ್ರರ ಬಂಧನ, ಭಾರಿ ಅನಾಹುತ ತಪ್ಪಿಸಿದ ಪೊಲೀಸರು!

ಬಾರಾಮುಲ್ಲಾ ಜಿಲ್ಲೆಯ ಅಬ್ದುಲ್‌ ಲತೀಫ್‌ ಮಿರ್‌ (22) ಮತ್ತು ಕುಪ್ವಾರಾ ಜಿಲ್ಲೆಯ ಅಶ್ರಫ್‌ ಖತಾನ (20) ಬಂಧಿತರು. ಇಬ್ಬರೂ ಜೈಷ್‌ ಮುಖಂಡರೊಂದಿಗೆ ನಿಕಟ ಸಂಪರ್ಕ ಸಾಧಿಸಿದ್ದು, ಅವರ ಸೂಚನೆ ಮೇರೆಗೆ ದಿಲ್ಲಿಗೆ ಬಂದು ತಂಗಿದ್ದರು ಎನ್ನಲಾಗಿದೆ. ಶಂಕಿತ ಉಗ್ರರಿಂದ ಸೆಮಿ ಆಟೊಮ್ಯಾಟಿಕ್‌ ಪಿಸ್ತೂಲ್‌ಗಳು, 10 ಸುತ್ತು ಗುಂಡು ಸಿಕ್ಕಿವೆ.

Vijaya Karnataka Web 18 Nov 2020, 7:44 am
ಹೊಸದಿಲ್ಲಿ: ನಗರದ ಆಗ್ನೇಯ ಭಾಗದ ಸರಾಯಿ ಕಾಲೆ ಪ್ರದೇಶದಲ್ಲಿ ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆ ಜೈಷೆ ಮೊಹಮ್ಮದ್‌ (ಜೆಇಎಂ) ಜತೆಗೆ ನಂಟು ಹೊಂದಿರುವ ಶಂಕೆ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ದಿಲ್ಲಿ ಪೊಲೀಸರ ವಿಶೇಷ ದಳ ಈ ಕಾರ್ಯಾಚರಣೆ ನಡೆಸಿದ್ದು,ಬಂಧಿತರಿಬ್ಬರೂ ಕೂಡ ಜಮ್ಮು-ಕಾಶ್ಮೀರದ ಮೂಲ ನಿವಾಸಿಗಳು ಎಂದು ತಿಳಿದುಬಂದಿದೆ.
Vijaya Karnataka Web terror


ಬಾರಾಮುಲ್ಲಾ ಜಿಲ್ಲೆಯ ಅಬ್ದುಲ್‌ ಲತೀಫ್‌ ಮಿರ್‌ (22) ಮತ್ತು ಕುಪ್ವಾರಾ ಜಿಲ್ಲೆಯ ಅಶ್ರಫ್‌ ಖತಾನ (20) ಬಂಧಿತರು. ಇಬ್ಬರೂ ಜೈಷ್‌ ಮುಖಂಡರೊಂದಿಗೆ ನಿಕಟ ಸಂಪರ್ಕ ಸಾಧಿಸಿದ್ದು, ಅವರ ಸೂಚನೆ ಮೇರೆಗೆ ದಿಲ್ಲಿಗೆ ಬಂದು ತಂಗಿದ್ದರು ಎನ್ನಲಾಗಿದೆ. ಶಂಕಿತ ಉಗ್ರರಿಂದ ಸೆಮಿ ಆಟೊಮ್ಯಾಟಿಕ್‌ ಪಿಸ್ತೂಲ್‌ಗಳು, 10 ಸುತ್ತು ಗುಂಡು ಸಿಕ್ಕಿವೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಸಂಜೀವ್‌ ಕುಮಾರ್‌ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಉತ್ತರಪ್ರದೇಶ ಮೂಲದ ಐಸಿಸ್‌ ಉಗ್ರ ಅಬು ಯೂಸುಫ್‌ ಖಾನ್‌ನನ್ನು ದಿಲ್ಲಿಯ ಕರೋಲ್‌ಬಾಗ್‌ ಮತ್ತು ಧೌಲಾ ಕುವಾಂ ಮಾರ್ಗದ ರಸ್ತೆಯಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದರು. ಆತನ ಬಳಿ 15 ಕೆ.ಜಿ. ಸ್ಫೋಟಕ ಸಾಮಗ್ರಿ, ಎರಡು ಪ್ರೆಷರ್‌ ಕುಕ್ಕರ್‌ ಮತ್ತು ಪಿಸ್ತೂಲ್‌ ವಶಕ್ಕೆ ಪಡೆಯಲಾಗಿತ್ತು. ಬಂಧನ ವೇಳೆ ಪೊಲೀಸರು ಮತ್ತು ಉಗ್ರನ ನಡುವೆ ಗುಂಡಿನ ಚಕಮಕಿ ಕೂಡ ನಡೆದಿತ್ತು.
ಬಿಹಾರದಲ್ಲಿ ಬದಲಾವಣೆ ಪರ್ವ: ಗೃಹ ಖಾತೆ ಉಳಿಸಿಕೊಂಡ ನಿತೀಶ್‌, ಇಬ್ಬರು ಡಿಸಿಎಂಗಳಿಗೆ ಬಲಿಷ್ಠ ಖಾತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ