ಆ್ಯಪ್ನಗರ

200 ರೂಪಾಯಿಗಾಗಿ ಯುವಕನನ್ನು ಕೊಂದ ಬಾಲಕರು

ಮಕ್ಕಳಲ್ಲಿ ಅಪರಾಧ ಪ್ರವೃತ್ತಿ ಹೆಚ್ಚಾಗುತ್ತಿದ್ದು ಪೋಷಕರು ತಮ್ಮ ಮಕ್ಕಳ ನಡೆಯ ಬಗ್ಗೆ ಗಮನವಿಡುವ ಅಗತ್ಯ ಹೆಚ್ಚಿದೆ.

TIMESOFINDIA.COM 30 Jun 2019, 4:59 pm
ಹೊಸದಿಲ್ಲಿ: ತಮ್ಮಿಂದ ಪಡೆದುಕೊಂಡಿದ್ದ 200 ರೂಪಾಯಿಯನ್ನು ಮರಳಿ ನೀಡದ್ದಕ್ಕೆ ಕೋಪಗೊಂಡ ಇಬ್ಬರು ಬಾಲಕರು 17 ವರ್ಷದ ಯುವಕನನ್ನು ಹತ್ಯೆಗೈದ ಬೆಚ್ಚಿ ಬೀಳಿಸುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ನಿತಿನ್ ಮಿಶ್ರಾ ಮೃತ ದುರ್ದೈವಿಯಾಗಿದ್ದಾನೆ.
Vijaya Karnataka Web Crime


ನೈಲಾನ್ ಹಗ್ಗವನ್ನು ಆತನ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿದ ಬಾಲಕರು, ಬಳಿಕ ಮುಖದ ಮೇಲೆ ದೊಡ್ಡ ಕಲ್ಲನ್ನೆತ್ತಿ ಜಜ್ಜಿದ್ದಾರೆ. ಬಳಿಕ ಆನಂದ ವಿಹಾರದ ಬಳಿಯಿದ್ದ ಕಸ ಡಂಪ್ ಮಾಡುವ ಸ್ಥಳದಲ್ಲಿ ಎಸೆದಿದ್ದಾರೆ.

ಬುಧವಾರದಿಂದ ಮಿಶ್ರ ನಾಪತ್ತೆಯಾಗಿದ್ದ. ಗುರುವಾರ ರಾತ್ರಿಯವರೆಗೆ ಆತನಿಗಾಗ ಹುಡುಕಿ, ಶುಕ್ರವಾರ ಮುಂಜಾನೆ ಕುಟುಂಬ ಸದಸ್ಯರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಚಿಂದಿ ಆಯುವವರು ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಆತ ಧರಿಸಿದ್ದ ಬಟ್ಟೆಯ ಆಧಾರದ ಮೇಲೆ ಗುರುತು ಪತ್ತೆಯಾಯಿತು.

ತನಿಖೆ ನಡೆಸಿದ ಪೊಲೀಸರಿಗೆ ಆತ ಕೊನೆಯದಾಗಿ 2 ಮಕ್ಕಳ ಜತೆ ಕಾಣಿಸಿಕೊಂಡಿದ್ದ ಮಾಹಿತಿ ಸಂಗ್ರಹಿಸಿ, ಅವರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.

ಆತ 200 ರೂಪಾಯಿ ಸಾಲ ಪಡೆದಿದ್ದ. ಮರಳಿಸಲು ಒಪ್ಪದಿದ್ದಾಗ ಜಗಳವಾಯಿತು. ಕೋಪದ ಭರದಲ್ಲಿ ಕೊಂದು ಹಾಕಿದೆವು ಎಂದು ಬಾಲಕರು ಒಪ್ಪಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ