ಆ್ಯಪ್ನಗರ

#Metoo: ಎಂ.ಜೆ. ಅಕ್ಬರ್‌ ಮೇಲೆ ಮತ್ತೆರಡು ಮಿ ಟೂ ಬಾಣ!

ಪತ್ರಿಕೆಯೊಂದರಲ್ಲಿ ಅಕ್ಬರ್‌ ಜತೆ ಕೆಲಸ ಮಾಡಿದ್ದ ತುಷಿತಾ ಪಟೇಲ್‌ ಎಂಬುವವರು ತಮ್ಮ ಜತೆ ಅಕ್ಬರ್‌ ಅವರ ನಡವಳಿಕೆಯ ಹಲವು ಪ್ರಸಂಗಗಳನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇವರು ಮಾತ್ರವಲ್ಲದೆ ಇತರ 16 ಮಂದಿ ಮಹಿಳೆಯರು ಕೂಡ ಅಕ್ಬರ್ ವಿರುದ್ಧ ಆರೋಪ ಹೊರಿಸಿದ್ದು, ಇದರೊಂದಿಗೆ ಒಟ್ಟು ಸಂಖ್ಯೆ 18ಕ್ಕೆ ಏರಿದೆ.

Vijaya Karnataka Web 16 Oct 2018, 10:29 pm
ಹೊಸದಿಲ್ಲಿ: 'ಮಿ ಟೂ' ಬಿರುಗಾಳಿಗೆ ಸಿಲುಕಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವ ಎಂ.ಜೆ. ಅಕ್ಬರ್‌ ವಿರುದ್ಧ ಮತ್ತಿಬ್ಬರು ಮಹಿಳೆಯರು ಮಂಗಳವಾರ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
Vijaya Karnataka Web m j akbar


ಪತ್ರಿಕೆಯೊಂದರಲ್ಲಿ ಅಕ್ಬರ್‌ ಜತೆ ಕೆಲಸ ಮಾಡಿದ್ದ ತುಷಿತಾ ಪಟೇಲ್‌ ಎಂಬುವವರು ತಮ್ಮ ಜತೆ ಅಕ್ಬರ್‌ ಅವರ ನಡವಳಿಕೆಯ ಹಲವು ಪ್ರಸಂಗಗಳನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇವರು ಮಾತ್ರವಲ್ಲದೆ ಇತರ 16 ಮಂದಿ ಮಹಿಳೆಯರು ಕೂಡ ಅಕ್ಬರ್ ವಿರುದ್ಧ ಆರೋಪ ಹೊರಿಸಿದ್ದು, ಇದರೊಂದಿಗೆ ಒಟ್ಟು ಸಂಖ್ಯೆ 18ಕ್ಕೆ ಏರಿದೆ.

1992ರಲ್ಲಿ ಕೊಲ್ಕೊತ್ತಾದಲ್ಲಿದ್ದಾಗ ಅಕ್ಬರ್‌ ಅವರು ಪದೇಪದೆ ಕರೆ ಮಾಡಿ ನನ್ನನ್ನು ಹೋಟೆಲ್‌ಗೆ ಕರೆಯುತ್ತಿದ್ದರು. ಆಗ 22 ವರ್ಷ ವಯಸ್ಸಿನವಳಾಗಿದ್ದ ನನ್ನ ಜತೆ ಕೆಟ್ಟದಾಗಿ ನಡೆದುಕೊಂಡಿದ್ದರು. ಒಮ್ಮೆ ಅಂಡರ್‌ವೇರ್‌ ಧರಿಸಿಯೇ ಬಾಗಿಲು ತೆರೆದದ್ದು ನೋಡಿ ಆಘಾತಗೊಂಡಿದ್ದೆ. ಹೀಗೆ ಯುವತಿಯೊಬ್ಬರ ಮುಂದೆ ಅರೆಬರೆ ಬಟ್ಟೆ ಧರಿಸಿ ನಿಲ್ಲುವುದು ನಿಮ್ಮ ನೈತಿಕತೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಬಲವಂತವಾಗಿ ಅಕ್ಬರ್‌ ತಮಗೆ ಚುಂಬಿಸಿದ್ದಾಗಿಯೂ ಮಹಿಳೆ ಆರೋಪಿಸಿದ್ದಾರೆ.

ಸ್ವಾತಿ ಗೌತಮ್‌ ಆಪಾದನೆ:
ಮತ್ತೊಂದೆಡೆ ಸ್ವಾತಿ ಗೌತಮ್‌ ಎಂಬ ಉದ್ಯಮಿಯೂ ತಮಗೆ ಹೋಟೆಲೊಂದರಲ್ಲಿ ಅಕ್ಬರ್‌ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ.

ಯಶರಾಜ್‌ ಫಿಲಂನಿಂದ ಕ್ರಮ: ಚಿತ್ರ ನಿರ್ಮಾಣ ಸಂಸ್ಥೆ ಯಶ್‌ರಾಜ್‌ ಫಿಲಮ್ಸ್‌, ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಕಂಪನಿಯ ಕ್ರಿಯೇಟಿವ್‌ ಹೆಡ್‌ ಮತ್ತು ಬ್ಯುಸಿನೆಸ್‌ ಹೆಡ್‌ ಆಶಿಶ್‌ ಪಾಟಿಲ್‌ ಅವರನ್ನು ಕೆಲಸದಿಂದ ವಜಾ ಮಾಡಿದೆ.

ಜತಿನ್‌ ದಾಸ್‌ ವಿರುದ್ಧ ಆರೋಪ: ಖ್ಯಾತ ವರ್ಣಚಿತ್ರ ಕಲಾವಿದ ಜತಿನ್‌ ದಾಸ್‌ ಅವರ ವಿರುದ್ಧ ಮಹಿಳಾ ಉದ್ಯಮಿಯೊಬ್ಬರು 'ಮಿ ಟೂ' ಆರೋಪ ಮಾಡಿದ್ದಾರೆ. ಆದರೆ, ದಾಸ್‌ ಆರೋಪಗಳನ್ನು ನಿರಾಕರಿಸಿದ್ದಾರೆ. ಪದ್ಮಭೂಷಣ ಪುರಸ್ಕೃತರಾಗಿರುವ ದಾಸ್‌, ಖ್ಯಾತ ನಟಿ ನಂದಿತಾ ದಾಸ್‌ ಅವರ ತಂದೆ.

ಬಿಜೆಪಿ ನಾಯಕರಿಂದ ಮಕ್ಕಳನ್ನು ರಕ್ಷಿಸಿ

ಬಿಜೆಪಿ ಸಚಿವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌, 'ಬೇಟಿ ಬಚಾವೋ, ಬೇಟಿ ಪಢಾವೋ' ಧ್ಯೇಯವಾಕ್ಯವನ್ನು ಬಿಜೆಪಿ ನಾಯಕರಿಗೆ ನಂಟು ಮಾಡಿ ಹೇಳಿಕೆ ನೀಡಿದ್ದಾರೆ. 'ಬೇಟಿ ಪಢಾವೋ, ಬಿಜೆಪಿ ನೇತಾವೋಂಸೆ, ಮಂತ್ರಿಯೋಂಸೆ, ಎಂಎಲ್‌ಎಸೆ ಬೇಟಿ ಬಚಾವೋ' (ಮಗಳಿಗೆ ಶಿಕ್ಷ ಣ ನೀಡಿ, ಬಿಜೆಪಿ ನಾಯಕರಿಂದ, ಮಂತ್ರಿಗಳಿಂದ, ಶಾಸಕರಿಂದ ಮಗಳನ್ನು ರಕ್ಷಿಸಿ) ಎಂಬುದಾಗಿ ಬದಲಾಯಿಸಬೇಕಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ