ಆ್ಯಪ್ನಗರ

ಉ.ಪ್ರದಲ್ಲಿ ಜೈಷೆ ಸಂಘಟನೆಯ ಇಬ್ಬರು ಉಗ್ರರು ಬಂಧನ

ಪೊಲೀಸ್ ಮತ್ತು ಎಟಿಎಸ್‌ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿದ ಉತ್ತರ ಪ್ರದೇಶ ಪೊಲೀಸ್‌ ವರಿಷ್ಠಾಧಿಕಾರಿ, ಬಂಧಿತರಿಬ್ಬರೂ ಕಾಶ್ಮೀರ ಮೂಲದವರು. ಬಂಧಿತರಿಂದ ಎರಡು ಬಂದೂಕು, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Vijaya Karnataka Web 22 Feb 2019, 5:41 pm
ಲಖನೌ: ಪುಲ್ವಾಮಾ ದಾಳಿಯ ನಂತರ ಉಗ್ರ ನಿಗ್ರಹ ಕಾರ್ಯಾಚರಣೆ ಹೆಚ್ಚು ನಡೆಸಲಾಗುತ್ತಿದೆ.
Vijaya Karnataka Web ಪೊಲೀಸ್‌  ವರಿಷ್ಠಾಧಿಕಾರಿ
ಪೊಲೀಸ್‌ ವರಿಷ್ಠಾಧಿಕಾರಿ


ಉತ್ತರ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಜೈಷೆ ಮೊಹಮದ್‌ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸರು ಮತ್ತು ಭಯೋತ್ಪಾದನೆ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರರಾದ ಶಾ ನವಾಜ್‌, ಅಕೀಬ್‌ ಅಹಮದ್ ಮಲಿಕ್‌ನನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಸಹರಣ್‌ಪುರ ಜಿಲ್ಲೆಯ ಕಂಕಾ ಪೊಲೀಸ್‌ ಠಾಣೆ ಸಮೀಪದಲ್ಲಿರುವ ಕಟ್ಟಡವೊಂದರಲ್ಲಿ ತಂಗಿದ್ದ ಶಾ ನವಾಜ್‌ ಅಹಮದ್‌ ತೆಲಿ ಮತ್ತು ಅಕೀಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಉಗ್ರರು


ತೆಲಿ ಪುಲ್ವಾಮಾ ಜಿಲ್ಲೆಯವನು, ಅಕೀಬ್‌ ಕುಲ್ಗಾಮ್‌ ಜಿಲ್ಲೆಯವನು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಜೈಷೆ ಸಂಘಟನೆಯ ಸಕ್ರಿಯ ಕಾರ್ಯಕರ್ತರು. ಗ್ರನೇಡ್‌ ದಾಳಿಯಲ್ಲಿ ಪರಿಣತಿ ಪಡೆದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಮತ್ತು ಎಟಿಎಸ್‌ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿದ ಉತ್ತರ ಪ್ರದೇಶ ಪೊಲೀಸ್‌ ವರಿಷ್ಠಾಧಿಕಾರಿ, ಬಂಧಿತರಿಬ್ಬರೂ ಕಾಶ್ಮೀರ ಮೂಲದವರು ಎಂದರು.



ಬಂಧಿತರಿಂದ ಎರಡು ಬಂದೂಕು, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರೂ ಹಣ ಸಂಗ್ರಹಣೆಗಾಗಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು, ಯಾರಿಂದ ಹಣ ಪಡೆಯಲಾಗುತ್ತಿತ್ತು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ