ಆ್ಯಪ್ನಗರ

'ಶ್ರಮಿಕ್'‌ ರೈಲಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಕಾರ್ಮಿಕರು ದುರ್ಮರಣ

​​ಪುಣೆಯ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 34 ವರ್ಷದ ಉತ್ತರ ಪ್ರದೇಶದ ವಲಸೆ ಕಾರ್ಮಿಕ ಅಖಿಲೇಶ್‌ ಕುಮಾರ್‌ ರಾಣಾ ಮತ್ತು ತಮಿಳುನಾಡಿನ ಕಟಪಾಡಿಯಿಂದ ಬಿಹಾರದ ಔರಂಗಾಬಾದ್‌ಗೆ ರೈಲಿನಲ್ಲಿ ತೆರಳುತ್ತಿದ್ದ 62 ವರ್ಷದ ನಂದಕುಮಾರ್‌ ಪಾಂಡೆ ಅಸುನೀಗಿದ ದುರ್ದೈವಿಗಳಾಗಿದ್ದಾರೆ.

Agencies 12 May 2020, 7:45 pm
ಲಖನೌ: ಕೊರೊನಾ ಲಾಕ್‌ಡೌನ್‌ನಿಂದ ವಿವಿಧೆಡೆ ಸಿಲುಕಿದ್ದ ವಲಸೆ ಕಾರ್ಮಿಕರ ನೆರವಿಗೆಂದು ಆರಂಭಿಸಲಾದ ವಿಶೇಷ ‘ಶ್ರಮಿಕ್‌’ ವಿಶೇಷ ರೈಲುಗಳಲ್ಲಿ ಸಂಚರಿಸುವ ವೇಳೆ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದೆ.
Vijaya Karnataka Web Shramik Train


ಪುಣೆಯ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 34 ವರ್ಷದ ಉತ್ತರ ಪ್ರದೇಶದ ವಲಸೆ ಕಾರ್ಮಿಕ ಅಖಿಲೇಶ್‌ ಕುಮಾರ್‌ ರಾಣಾ ತನ್ನ ಊರಾದ ಗೊಂಡಾ ಜಿಲ್ಲೆಗೆ ಪುಣೆ-ಪ್ರಯಾಗ್‌ರಾಜ್‌ ರೈಲಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಮಜಗಾವಾ ರೈಲ್ವೆ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಕುಸಿದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆಂದು ವೈದ್ಯರು ಘೋಷಿಸಿದರು.

ಇದೇ ರೀತಿ ತಮಿಳುನಾಡಿನ ಕಟಪಾಡಿಯಿಂದ ಬಿಹಾರದ ಔರಂಗಾಬಾದ್‌ಗೆ ರೈಲಿನಲ್ಲಿ ತೆರಳುತ್ತಿದ್ದ 62 ವರ್ಷದ ನಂದಕುಮಾರ್‌ ಪಾಂಡೆ ಅವರು ದಿಢೀರ್‌ ಕುಸಿದು ಹೃದಯಾಘಾತದಿಂದ ಮೃತಪಟ್ಟಿರುವುದು ಮಧ್ಯಪ್ರದೇಶದ ಬೀಟಲ್‌ ಜಿಲ್ಲೆಯ ಆಮ್ಲಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕುಸಿದ ಇವರನ್ನು ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಇದಾಗಲೇ ಅವರು ಮೃತಪಟ್ಟಿದ್ದಾರೆಂದು ಪ್ರಕಟಿಸಿದರು. ಇವರು ಪತ್ನಿ ಮತ್ತು ಪುತ್ರಿ ಸಮೇತ ವಾಪಸಾಗುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗೆಂದು ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿಯೇ ಸಿಲುಕಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ