ಆ್ಯಪ್ನಗರ

‘ನಾವು ಕ್ಲೀನ್‌ ಆಗಿದ್ದೇವೆ’ ; ಸುಶಾಂತ್‌ ಸಿಂಗ್‌ ಕೇಸ್‌ನಲ್ಲಿ ಮಗನನ್ನು ಸಮರ್ಥಿಸಿಕೊಂಡ ಉದ್ಧವ್ ಠಾಕ್ರೆ

ಕಂಗಾನಾಗೆ ಮುಂಬೈ ಪಿಓಕೆ ಥರಾ ಕಾಣುವುದಾದರೆ ಇದು ಪ್ರಧಾನಿ ಮೋದಿಗೆ ಮಾಡಿದ ಅವಮಾನವೂ ಆಗಿದೆ. ಪಿಓಕೆಯನ್ನು ಮತ್ತೆ ವಶಪಡಿಸಿಕೊಳ್ಳುವುದಾಗಿ ಮೋದಿ ಹೇಳಿ ಆರು ವರ್ಷಗಳಾಗಿದೆ, ಆದರೆ ಇನ್ನೂ ಆಗಿಲ್ಲ. ಹೀಗಾಗಿ ಇದು ಮೋದಿ ವೈಫಲ್ಯವೂ ಹೌದು ಎಂದು ಮಹಾರಾ‍ಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಟೀಕಿಸಿದ್ದಾರೆ

Vijaya Karnataka Web 26 Oct 2020, 7:53 am
ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾ‍ಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಭಾನುವಾರ ಮಾತನಾಡಿರುವ ಠಾಕ್ರೆ, ಕಂಗನಾ ರಣಾವತ್‌ನಂತಹವರು ಈ ಪ್ರಕರಣದಲ್ಲಿ ಮುಂಬೈ, ಮುಂಬೈ ಪೊಲೀಸ್ ಮತ್ತು ನನ್ನ ಮಗನ ಕುರಿತು ಅಪಪ್ರಚಾರ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web uddhav thackeray


ಗೋಮಾಂಸಕ್ಕೆ ಇಲ್ಲಿ ನೋ.. ಗೋವಾದಲ್ಲಿ ಯೆಸ್‌..! ಇದು ನಿಮ್ಮ ಹಿಂದುತ್ವವೇ..?: ಉದ್ಧವ್‌ ಠಾಕ್ರೆ ವಾಗ್ದಾಳಿ

ಶಿವಸೇನೆ ಆಯೋಜಿಸಿದ್ದ ದಸರಾ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧವೂ ಕಿಡಿಕಾರಿದ್ದಾರೆ. ’ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೀವು ಈಗ ಬಿಹಾರದ ಮಗ ಎಂದು ಹೇಳುತ್ತಿದ್ದೀರಿ. ಅದು ಆಗಿರಲೂ ಬಹುದು. ಆದರೆ ಆ ಕಾರಣದಿಂದ ನೀವು ಮಹಾರಾಷ್ಟ್ರದ ಪುತ್ರರನ್ನು ಕೆಟ್ಟದಾಗಿ ಚಿತ್ರಿಸಿದ್ದೀರಿ.ನನ್ನ ಮಗ ಆದಿತ್ಯ ಠಾಕ್ರೆಯನ್ನು ಕೂಡ ನಿಂದಿಸಿದ್ದೀರಿ. ಆತನನ್ನು ಈ ಪ್ರಕರಣದಲ್ಲಿ ಎಳೆದು ತರುವ ಯತ್ನ ಮಾಡ್ತಿದ್ದೀರಿ. ನೀವು ಏನೆಲ್ಲಾ ಹೇಳ್ತಿರೋ, ಅದೆಲ್ಲ ನಿಮ್ಮಲ್ಲೇ ಇರಲಿ. ಯಾಕಂದ್ರೆ ನಾವು ಕ್ಲೀನ್‌ ಆಗಿದ್ದೇವೆ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗೇ 2-3 ಕಾಂಗ್ರೆಸ್ ಪಕ್ಷಗಳು ಸೃಷ್ಟಿಯಾಗಿವೆ..! ಮಧ್ಯಪ್ರದೇಶ ಸಿಎಂ ವ್ಯಂಗ್ಯ

ಆತ್ಮಹತ್ಯೆ ಮಾಡಿಕೊಂಡಿರುವ ಸುಶಾಂತ್ ಸಿಂಗ್ ಮತ್ತು ಆತನ ಗೆಳತಿ ರಿಯಾ ಚಕ್ರವರ್ತಿ ವಿಚಾರವಾಗಿ ಆದಿತ್ಯ ಠಾಕ್ರೆಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಿರುವವರಿಗೆ ಇದೇ ಮೊದಲ ಬಾರಿ ಸಿಎಂ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಕಂಗನಾ ರಣಾವತ್ ಹೆಸರು ಪ್ರಸ್ತಾಪಿಸಿದೇ ಆಕೆಯ ವಿರುದ್ಧ ಕಿಡಿಕಾರಿರುವ ಉದ್ಧವ್ ಠಾಕ್ರೆ, ಕೆಲವರು ನ್ಯಾಯಕ್ಕಾಗಿ ಅಳುತ್ತಿರುವವರು ಮುಂಬೈ ಪೊಲೀಸರನ್ನು ನಿಷ್ಪ್ರಯೋಜಕರು ಎಂದು ದೂರಿದರು. ಅಲ್ಲದೇ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಥರ ಕಾಣ್ತಿದೆ.ಇಲ್ಲಿ ಎಲ್ಲೆಂದರಲ್ಲಿ ಡ್ರಗ್ಸ್‌ ಅಡಿಕ್ಟ್‌ಗಳು ಕಾಣ ಸಿಗ್ತಾರೆ ಎಂದು ಹೀಯಾಳಿಸಿದ್ರು. ಆದರೆ ಅವರಿಗೆ ಗೊತ್ತಿಲ್ಲ ಗಾಂಜಾ ನಿಮ್ಮ ರಾಜ್ಯದಲ್ಲಿ ಇರೋದು. ನಮ್ಮ ಮನೆಯಲ್ಲಿ ನಾವು ತುಳಸಿಗಿಡ ಬೆಳೆಯುತ್ತೇವೆ ಎಂದು ಕಂಗನಾ ವಿರುದ್ಧ ಹೆಸರು ಹೇಳದೆ ಕಿಡಿಕಾರಿದರು.

ಆರೋಗ್ಯ ಸಲಹೆಗಾಗಿ ಕಾಲೇಜುಗಳಲ್ಲಿ ‘ಮೆಂಟರ್‌’ ವ್ಯವಸ್ಥೆ ಜಾರಿಗೊಳಿಸುವುದು ಈ ಕಾಲದ ಅಗತ್ಯ: ಎಂ ಆರ್ ದೊರೆಸ್ವಾಮಿ

ಇನ್ನು ಮುಂಬೈ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿರುವ ಉದ್ಧವ್ ಠಾಕ್ರೆ, ಅಜ್ಮಲ್ ಕಸಬ್‌ನಂತ ಉಗ್ರನೊಬ್ಬನನ್ನು ಜೀವಂತವಾಗಿ ಸೆರೆಹಿಡಿದ ಏಕೈಕ ಪೊಲೀಸರು ನಮ್ಮ ಮುಂಬೈ ಪೊಲೀಸರು. ಹೀಗಾಗಿ ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವಿಚಾರವಾಗಿ ಮೋದಿ ವಿರುದ್ಧವೂ ವ್ಯಂಗ್ಯವಾಡಿರುವ ಠಾಕ್ರೆ, ಕಂಗಾನಾಗೆ ಮುಂಬೈ ಪಿಓಕೆ ಥರಾ ಕಾಣುವುದಾದರೆ ಇದು ಪ್ರಧಾನಿ ಮೋದಿಗೆ ಮಾಡಿದ ಅವಮಾನವೂ ಆಗಿದೆ. ಪಿಓಕೆಯನ್ನು ಮತ್ತೆ ವಶಪಡಿಸಿಕೊಳ್ಳುವುದಾಗಿ ಮೋದಿ ಹೇಳಿ ಆರು ವರ್ಷಗಳಾಗಿದೆ, ಆದರೆ ಇನ್ನೂ ಆಗಿಲ್ಲ. ಹೀಗಾಗಿ ಇದು ಮೋದಿ ವೈಫಲ್ಯವೂ ಹೌದು ಎಂದು ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ