ಆ್ಯಪ್ನಗರ

ಹಣ ಕದಿಯಲು ಬಂದವರು ಬಿರಿಯಾನಿ ತಿಂದು ಹೋದರು

ಹಣ ದೋಚಲು ಹೋಟೆಲ್‌ಗೆ ನುಗ್ಗಿದ ಕಳ್ಳರು ದುಡ್ಡು ಸಿಗದ್ದಕ್ಕೆ ಬಿರಿಯಾನಿ ತಿಂದು ಮರಳಿದ ಸ್ವಾರಸ್ಯಕರ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ತಿಂದು ಮರಳುವಾಗ ಅಲ್ಲಿಂದ ಲ್ಯಾಪ್‌ಟಾಪ್ ಸಹ ಎತ್ತಿಕೊಂಡು ಹೋಗಿದ್ದರಿಂದ ಕಳ್ಳರೀಗ ಜೈಲು ಪಾಲಾಗಿದ್ದಾರೆ.

TIMESOFINDIA.COM 31 Aug 2018, 2:57 pm
[This story originally published in Times Of India on Aug 31, 2018]
Vijaya Karnataka Web Thieves


ಹೊಸದಿಲ್ಲಿ:
ಹಣ ದೋಚಲು ಹೋಟೆಲ್‌ಗೆ ನುಗ್ಗಿದ ಕಳ್ಳರು ದುಡ್ಡು ಸಿಗದ್ದಕ್ಕೆ ಬಿರಿಯಾನಿ ತಿಂದು ಮರಳಿದ ಸ್ವಾರಸ್ಯಕರ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ತಿಂದು ಮರಳುವಾಗ ಅಲ್ಲಿಂದ ಲ್ಯಾಪ್‌ಟಾಪ್ ಸಹ ಎತ್ತಿಕೊಂಡು ಹೋಗಿದ್ದರಿಂದ ಕಳ್ಳರೀಗ ಜೈಲು ಪಾಲಾಗಿದ್ದಾರೆ.

ಬಿರಿಯಾನಿ ಪ್ರಿಯ ಗೆಳೆಯರು


ಕಿಲಾಡಿ ಗೆಳೆಯರಾದ ಚೋಟು ಮತ್ತು ರಾಜು ಆಗಾಗ ಸರಿತಾ ವಿಹಾರ್‌ G- ಬ್ಲಾಕ್‌ನಲ್ಲಿರುವ ದೀಜ್ ಹೋಟೆಲ್‌ಗೆ ಬಿರಿಯಾನಿ ತಿನ್ನಲು ಬರುತ್ತಿದ್ದರು. ಪ್ರತಿ ಬಾರಿ ಬಂದು ಬಿರಿಯಾನಿ ಸವಿಯುತಿದ್ದಾಗ ಸಹ ಅವರ ಕಣ್ಣು ಕ್ಯಾಶ್ ಕೌಂಟರ್ ಮೇಲೆಯೇ ಕಣ್ಣಿರುತ್ತಿತ್ತು. ಅದನ್ನು ಯಾವಾಗ ದೋಚುವುದು ಎಂದವರು ಹೊಂಚು ಹಾಕುತ್ತಿದ್ದರು.

ಹಣ ಸಿಗದಿದ್ದಾಗ ಬಿರಿಯಾನಿ ತಿನ್ನಲು ಕುಳಿತರು

ಮಂಗಳವಾರದ ರಾತ್ರಿ ಮಾಸ್ಕ್ ಹಾಕಿಕೊಂಡು ಹೋಟೆಲ್‌ಗೆ ನುಗ್ಗಿಯೇ ಬಿಟ್ಟರು. ಆದರೆ ಎಷ್ಟು ತಡಕಾಡಿದರೂ ಅವರಿಗೆ ಹಣ ಸಿಗಲೇ ಇಲ್ಲ. ಬಂದಿದ್ದು ವ್ಯರ್ಥವಾಯಿತೆಂದು ಬೇಸತ್ತ ಇಬ್ಬರಿಗೆ ಬಿರಿಯಾನಿ ನೆನಪು ಬಂತು. ಪಾತ್ರೆಯಲ್ಲಿ ಅಳಿದುಳಿದಿದ್ದ ಬಿರಯಾನಿ ಹಾಕಿಕೊಂಡು ರೈತ ಮತ್ತು ಗ್ರೇವಿ ಜತೆ ಹೊಟ್ಟೆ ಬಿರಿಯುವಂತೆ ತಿಂದು ಅಲ್ಲಿಂದ ಮರಳುವಾಗ ಕೌಂಟರ್‌ನಲ್ಲಿದ್ದ ಲ್ಯಾಪ್‌ಟಾಪ್ ಕಾಣಿಸಿದೆ. ಅದನ್ನೆತ್ತಿಕೊಂಡಿದ್ದೇ ತಮಗೆ ಮುಳುವಾಗಲಿದೆ ಎಂಬ ಕಲ್ಪನೆ ಮಾತ್ರ ಅವರಿಗಿರಲಿಲ್ಲ.

ಸಿಸಿಟಿವಿಯಲ್ಲಿ ಅವರ ಕೃತ್ಯಗಳೆಲ್ಲವೂ ಸೆರೆಯಾಗಿತ್ತು. ಆದರೆ ಮುಖ ಮುಚ್ಚಿದ್ದರಿಂದ ಗುರುತು ಪತ್ತೆಯಾಗುವುದು ಕಷ್ಟವಾಗಿತ್ತು. ಆದರೆ ಕದ್ದ ಲ್ಯಾಪ್‌ಟಾಪ್ ಅವರು ಸುಲಭವಾಗಿ ಪೊಲೀಸರ ಬಲೆಗೆ ಬೀಳಲು ಕಾರಣವಾಯಿತು.

ಬುಧವಾರ ದಿನ ತಾವು ಕದ್ದ ಲ್ಯಾಪ್‌ಟಾಪ್‌ನ್ನು ಸರಿತಾ ನಗರ ಪಾರ್ಕ್ ಬಳಿ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರು ಅ ವರನ್ನು ಬಂಧಿಸಿದ್ದಾರೆ. ಬಿರಿಯಾನಿ ತಿನ್ನಲು ಹೋಗಿ ಜೈಲಲ್ಲಿ ಒಣ ರೊಟ್ಟಿ ಮುರಿಯುವುದು ಅವರಿಗೀಗ ಅನಿವಾರ್ಯವಾದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ