ಆ್ಯಪ್ನಗರ

ಜಮ್ಮು ಏರ್‌ಪೋರ್ಟ್‌ನಲ್ಲಿ ಆತಂಕ ಸೃಷ್ಟಿಸಿದ ಬ್ಯಾಗ್‌

ಜಮ್ಮುವಿನ ಬಸ್‌ ನಿಲ್ದಾಣದಲ್ಲಿ ಹಿಜ್ಬುಲ್‌ ಉಗ್ರ ಯಾಸಿರ್‌ ಭಟ್‌ನಿಂದ ಗ್ರೆನೇಡ್‌ ದಾಳಿ ನಡೆದ ಮರುದಿನವೇ ಈ ಬ್ಯಾಗ್‌ ಪತ್ತೆಯಾಗಿರುವುದು ಮತ್ತೊಂದು ದಾಳಿಗೆ ಉಗ್ರರು ಸಂಚು ಹೂಡಿದ್ದರೇ ಎಂಬ ಅನುಮಾನ ಕಾಡುತ್ತಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Vijaya Karnataka 9 Mar 2019, 5:00 am
ಜಮ್ಮು: ಜಮ್ಮು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅನುಮಾನಸ್ಪದ ಬ್ಯಾಗ್‌ ಪತ್ತೆಯಾಗಿದ್ದು, ಇದರಿಂದ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬ್ಯಾಗ್‌ಅನ್ನು ಜಾಲಾಡಿದಾಗ ಅದರಲ್ಲಿ ಸುಧಾರಿತ ಸೊಧೀಟಕ ಸಾಧನ ಸ್ಫೋಟಿಸಲು ಬಳಸುವ ಪವರ್‌ ಸಕ್ರ್ಯೂಟ್‌ನಂತಹ ವಸ್ತು ಇರುವುದು ಕಂಡುಬಂದಿದೆ. ಜಮ್ಮುವಿನ ಬಸ್‌ ನಿಲ್ದಾಣದಲ್ಲಿ ಹಿಜ್ಬುಲ್‌ ಉಗ್ರ ಯಾಸಿರ್‌ ಭಟ್‌ನಿಂದ ಗ್ರೆನೇಡ್‌ ದಾಳಿ ನಡೆದ ಮರುದಿನವೇ ಈ ಬ್ಯಾಗ್‌ ಪತ್ತೆಯಾಗಿರುವುದು ಮತ್ತೊಂದು ದಾಳಿಗೆ ಉಗ್ರರು ಸಂಚು ಹೂಡಿದ್ದರೇ ಎಂಬ ಅನುಮಾನ ಕಾಡುತ್ತಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್‌ ನಿಷ್ಕ್ರಿಯ ದಳದವರು ಸ್ಥಳಕ್ಕೆ ಆಗಮಿಸಿ ಬ್ಯಾಗ್‌ನಲ್ಲಿರುವುದು ಬಾಂಬ್‌ ಅಲ್ಲ ಎಂದು ಖಚಿತಪಡಿಸಿದ ಬಳಿಕ ಪ್ರಯಾಣಿಕರ ಆತಂಕ ತಿಳಿಯಾಯಿತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಘಟನೆಯಿಂದ ವಿಮಾನಗಳ ಹಾರಾಟ ಸೇವೆ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Vijaya Karnataka Web unidentified bag in jammu airport
ಜಮ್ಮು ಏರ್‌ಪೋರ್ಟ್‌ನಲ್ಲಿ ಆತಂಕ ಸೃಷ್ಟಿಸಿದ ಬ್ಯಾಗ್‌


ಈ ಮಧ್ಯೆ ಜಮ್ಮು ಬಸ್‌ ನಿಲ್ದಾಣದ ಮೇಲಿನ ಗ್ರೆನೇಡ್‌ ದಾಳಿಯ ಆರೋಪಿ ಉಗ್ರ ಯಾಸಿರ್‌ ಭಟ್‌, ಈ ಕೃತ್ಯ ಎಸಗಲು ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆ ಹಣ ನೀಡಿತ್ತು ಎಂಬ ಸಂಗತಿಯನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ದಾಳಿಯಲ್ಲಿ ಮೃತಪಟ್ಟ 17 ವರ್ಷದ ತರುಣ ಉತ್ತರಾಖಂಡ್‌ ನಿವಾಸಿ ಮೊಹಮ್ಮದ್‌ ಶಾರೀಕ್‌ ಕುಟುಂಬಕ್ಕೆ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ