ಆ್ಯಪ್ನಗರ

ಕಾಂಗ್ರೆಸ್ ನಾಯಕನ ಕಚೇರಿ ಧ್ವಂಸ: ಸಿಬ್ಬಂದಿಗೆ ಬಾಯಿಗೆ ಬಂದಂತೆ ಬೈದ ಆಗಂತುಕರು!

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಅಧೀರ್ ರಂಜನ್ ಚೌಧರಿ ಅವರ ಕಚೇರಿಗೆ ನುಗ್ಗಿ ಧಾಂಧಲೆ ನಡೆಸಿರುವ ಆಗಂತುಕರು, ಕಚೇರಿಯನ್ನು ಧ್ವಂಸ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಘಟನೆ ನಡೆದಾಗ ಅಧೀರ್ ರಂಜನ್ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ.

Vijaya Karnataka Web 4 Mar 2020, 10:27 am
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಅಧೀರ್ ರಂಜನ್ ಚೌಧರಿ ಅವರ ಕಚೇರಿಗೆ ನುಗ್ಗಿ ಧಾಂಧಲೆ ನಡೆಸಿರುವ ಆಗಂತುಕರು, ಕಚೇರಿಯನ್ನು ಧ್ವಂಸ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
Vijaya Karnataka Web Adhir Ranjan Chowdhury
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರ ಕಚೇರಿ ಮೇಲೆ ದಾಳಿ ಮಾಡಿರುವ ಆಗುಂತಕರು, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.


ನಿನ್ನೆ(ಮಾ.03) ಸಾಯಂಕಾಲ ಸುಮಾರು 5:30ಕ್ಕೆ ಏಕಾಏಕಿ ಅಧೀರ್ ರಂಜನ್ ಕಚೇರಿಗೆ ನುಗ್ಗಿದ ನಾಲ್ವರು ಆಗಂತುಕರು, ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಕಚೇರಿ ಧ್ವಂಸ ಮಾಡಿದ್ದಾರೆ.

ಘಟನೆ ನಡೆದಾಗ ಅಧೀರ್ ರಂಜನ್ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದ್ದು, ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆಗಂತುಕರು ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಕಾಲ್ಕಿತ್ತಿದ್ದಾರೆ.

ಗಾಂಧಿ-ನೆಹರು ಕುಟುಂಬದ ಬ್ರಾಂಡ್‌ ಕಾಂಗ್ರೆಸ್‌ಗೆ ಅನಿವಾರ್ಯ ಎಂದ ಚೌಧುರಿ

ಅಧೀರ್ ರಂಜನ್ ಅವರಿಗೆ ಕರೆ ಮಾಡಿ ಕಚೇರಿಗೆ ಬರುವಂತೆ ಹೇಳುವಂತೆ ಸಿಬ್ಬಂದಿಯನ್ನು ಒತ್ತಾಯಿಸಿದ ಆಗಂತುಕರು, ಇದಕ್ಕೆ ಒಪ್ಪದಾದಾಗ ಅವಾಚ್ಯ ಪದಗಳನ್ನು ಬಳಿಸಿ ನಿಂದಿಸಿದ್ದಾರೆ. ಅಲ್ಲದೇ ಹಲ್ಲೆಗೂ ಮುಂದಾಗಿದ್ದಾರೆ ಎನ್ನಲಾಗಿದೆ.


ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಅಧೀರ್ ರಂಜನ್ ಆಪ್ತ ಸಹಾಯಕ ಪ್ರದೀಪ್ತೊ ರಾಜ್‌ಪಂಡಿತ್, ಅಧೀರ್ ರಂಜನ್ ಕಚೇರಿಯಲ್ಲಿ ಇಲ್ಲ ಎಂದು ತಿಳಿದ ಮೇಲೆ ಆಗಂತುಕರು ತಮ್ಮನ್ನು ಅಚಾಚ್ಯಚಾಗಿ ನಿಂದಿಸಿ ಕಚೇರಿ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲಲೀಸರು, ಪ್ರದೀಪ್ತೊ ನೀಡಿರುವ ದೂರಿನ ಆಧಾರದ ಮೇಲೆ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ