ಹೊಸದಿಲ್ಲಿ: ಸಮಾನ ನಾಗರಿಕ ಸಂಹಿತೆ ರಚಿಸುವ ಪ್ರಸ್ತಾಪವನ್ನು ಹೊಸದಾಗಿ ಸ್ಥಾಪನೆಯಾಗಲಿರುವ 22ನೇ ಕಾನೂನು ಆಯೋಗದ ಮುಂದೆ ಇರಿಸಲಾಗುವುದು ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್ಗೆ ಸೋಮವಾರ ಮಾಹಿತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ಡಿ. ಪಟೇಲ್ ಮತ್ತು ನ್ಯಾ. ಸಿ. ಹರಿ ಶಂಕರ್ ಅವರನ್ನೊಳಗೊಂಡ ಪೀಠಕ್ಕೆ ಕಾನೂನು ಆಯೋಗದ ಪರವಾಗಿ ಸರಕಾರಿ ವಕೀಲ ಅಜಯ್ ದಿಗುಪಾಲ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ''ಸರಕಾರದ ಶಿಫಾರಸಿನ ಮೇರೆಗೆ 21ನೇ ಕಾನೂನು ಆಯೋಗವು ಸಮಾನ ನಾಗರಿಕ ಸಂಹಿತೆ ವಿಚಾರವನ್ನು ಪರಿಗಣಿಸಿ, ಈ ಸಂಬಂಧ ಸಂಬಂಧಪಟ್ಟ ಸಂಘ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು. 21ನೇ ಕಾನೂನು ಆಯೋಗದ ಅವಧಿಯು ಕಳೆದ ವರ್ಷ ಆಗಸ್ಟ್ಗೇ ಅಂತ್ಯಗೊಂಡಿದ್ದು, 22ನೇ ಕಾನೂನು ಆಯೋಗವನ್ನು ಇನ್ನೂ ರಚಿಸಬೇಕಿದೆ. ಅದು ರಚನೆಯಾದರೆ ಸಮಾನ ನಾಗರೀಕ ಸಂಹಿತೆ ಪ್ರಸ್ತಾಪವನ್ನು ಅದರ ಮುಂದಿಡಲಾಗುವುದು,'' ಎಂದು ವಕೀಲರು ಹೇಳಿದರು.
ಕಾನೂನು ಆಯೋಗದ ಮುಂದೆ ನಾಗರಿಕ ಸಂಹಿತೆ ಪ್ರಸ್ತಾಪ
ಮುಖ್ಯ ನ್ಯಾಯಮೂರ್ತಿ ಎನ್.ಡಿ. ಪಟೇಲ್ ಮತ್ತು ನ್ಯಾ. ಸಿ. ಹರಿಶಂಕರ್ ಅವರನ್ನೊಳಗೊಂಡ ಪೀಠಕ್ಕೆ ಕಾನೂನು ಆಯೋಗದ ಪರವಾಗಿ ಸರಕಾರಿ ವಕೀಲ ಅಜಯ್ ದಿಗುಪಾಲ್ ಅವರು ಈ ಮಾಹಿತಿ ನೀಡಿದ್ದಾರೆ.
PTI 9 Jul 2019, 5:00 am