ಆ್ಯಪ್ನಗರ

ಒನ್ ನೇಶನ್ ಒನ್ ಮಾರ್ಕೆಟ್‌ನತ್ತ ಭಾರತದ ಹೆಜ್ಜೆ: ಅಗತ್ಯ ಸರಕು ಕಾಯ್ದೆಗೆ ತಿದ್ದುಪಡಿ!

ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಪ್ರಮುಖವಾಗಿ ದೇಶದ ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಅಗತ್ಯ ಸರಕು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

Vijaya Karnataka Web 3 Jun 2020, 5:43 pm
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಒನ್ ನೇಶನ್, ಒನ್ ಮಾರ್ಕೆಟ್(ಒಂದು ದೇಶ, ಒಂದು ಮಾರುಕಟ್ಟೆ)ಗೆ ಅಧಿಕೃತಚಾಲನೆ ದೊರೆತಿದೆ.
Vijaya Karnataka Web Punjab market
ಸಾಂದರ್ಭಿಕ ಚಿತ್ರ


ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂಧ್ರ ಸಚಿವ ಸಂಪುಟ ಸಭೆಯಲ್ಲಿ ದೇಶದ ರೈತ ಸಮುದಾಯಕ್ಕೆ ನೆರವಾಗಬಲ್ಲ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಪ್ರಮುಖವಾಗಿ ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸರ್ಕಾರ ಇದನ್ನು ಐತಿಹಾಸಿಕ ತೀರ್ಮಾನ ಎಂದು ಬಣ್ಣಿಸಿದೆ. ರೈತರ ಉತ್ಪನ್ನಗಳ ಮಾರಾಟದ ಮೇಲಿನ ನಿಯಂತ್ರಣವನ್ನು ಈ ಕಾನೂನು ತೊಡೆದು ಹಾಕಲಿದ್ದು, ರೈತ ಸಮುದಾಯಕ್ಕೆ ಇದರಿಂದ ಭಾರೀ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಅಲ್ಲದೇ ಕೃಷಿ ಉತ್ಪನ್ನಗಳಿಗೆ ತಡೆಮುಕ್ತ ಅಂತಾರಾಜ್ಯ ಹಾಗೂ ಅಂತರ್ ರಾಜ್ಯ ವ್ಯಾಪಾರವನ್ನು ಉತ್ತೇಜಿಸುವ ಸುಗ್ರೀವಾಜ್ಞೆಯನ್ನು ಕೂಡ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.

ಇದರಿಂದ ರೈತರಿಗೆ ನೇರವಾಗಿ ಸಗಟು ವ್ಯಾಪಾರಿಗಳು, ದೊಡ್ಡ ಚಿಲ್ಲರೆ ವ್ಯಾಪಾರಿಗಳು ಹಾಗೂ ರಫ್ತುದಾರರೊಂದಿಗೆ ನೇರವಾಗಿ ವ್ಯವಹರಿಸಲು ಅನುಕೂಲವಾಗಲಿದೆ.

ಮೋದಿ ಕ್ಯಾಬಿನೆಟ್ ಸಭೆಯಲ್ಲಿ ಅನ್‌ಲಾಕ್ ಯೋಜನೆಗೆ ಗ್ರೀನ್ ಸಿಗ್ನಲ್: ಪ್ರಮುಖ ನಿರ್ಣಯಗಳು!

ಕೇಂದ್ರ ಸಚಿವ ಸಂಪುಟದ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ದೇಶದ ರೈತ ಸಮುದಾಯದ ನೆರವಿಗಾಗಿ ಇಂದು ಹಲವು ಐತಿಹಾಸಿಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.



ಇಂದಿನ ಸಚಿವ ಸಂಪುಟದ ನಿರ್ಣಯದಂತೆ ತರಕಾರಿ, ಎಣ್ಣೆ, ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಅಗತ್ಯ ಸರಕುಗಳ ಕಾಯ್ದೆಯಡಿ ತೆಗೆದು ಹಾಕಲಾಗಿದ್ದು, ಇನ್ನು ಮುಂದೆ ರೈತರು ತಮ್ಮ ಉತ್ಪನ್ನಗಳನ್ನು ತಾವು ಬಯಸಿದವರಿಗೆ ಮಾರಾಟ ಮಾಡಬಹುದಾಗಿದೆ.

ಆದರೆ ನೈಸರ್ಗಿಕ ವಿಕೋಪ, ಯುದ್ಧ, ಬೆಲೆ ಏರಿಕೆಯಂತಹ ತುರ್ತು ಸಂದರ್ಭದಲ್ಲಿ ಈ ಕಾಯ್ದೆಯನ್ನು ತಾತ್ಕಾಲಿಕವಾಗಿ ಬದಲಿಸಿ ಮತ್ತೆ ಸರ್ಕಾರದ ನಿಯಂತ್ರಣವನ್ನು ಹೇರಲಾಗುವುದು ಎಂದು ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ