ಆ್ಯಪ್ನಗರ

ಪ.ಬಂಗಾಳದಲ್ಲಿ ಅಂಫಾನ್ ಅವಾಂತರ: ನಷ್ಟ ಮೌಲ್ಯಮಾಪನಕ್ಕೆ ಕೇಂದ್ರ ಗೃಹ ಇಲಾಖೆ ತಂಡ!

ಅಂಫಾನ್ ಚಂಡಮಾರುತದ ಪರಿಣಾಮವಾಗಿ ಸಂಭವಿಸಿರುವ ನಷ್ಟದ ಕುರಿತು ಮೌಲ್ಯಮಾಪನ ಮಾಡಲು ಶೀಘ್ರವೇ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ಕೇಂದ್ರ ತಂಡ ರವಾನೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

Vijaya Karnataka Web 21 May 2020, 8:01 pm
ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಅಂಫಾನ್ ಸೂಪರ್ ಚಂಡಮಾರುತ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದು, ನಷ್ಟದ ಮೌಲ್ಯಮಾಪನಕ್ಕಾಗಿ ಶೀಘ್ರದಲ್ಲೇ ಎರಡೂ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆಯ ತಂಡ ರವಾನೆಯಾಗಲಿದೆ.
Vijaya Karnataka Web amphan
ಸಂಗ್ರಹ ಚಿತ್ರ


ಈ ಕುರಿತು ಮಾಹತಿ ನೀಡಿರುವ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಅಂಫಾನ್ ಚಂಡಮಾರುತದ ಪರಿಣಾಮವಾಗಿ ಸಂಭವಿಸಿರುವ ನಷ್ಟದ ಕುರಿತು ಮೌಲ್ಯಮಾಪನ ಮಾಡಲು ಶೀಘ್ರವೇ ಎರಡೂ ರಾಜ್ಯಗಳಿಗೆ ಕೇಂದ್ರ ತಂಡ ರವಾನೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಅಂಫಾನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಇದುವರೆಗೂ ಸುಮಾರು 72 ಜನರು ಬಲಿಯಾಗಿದ್ದು, ನಮ್ಮ ಜೀವಮಾನದಲ್ಲೇ ಇಂತಹ ಭೀಕರ ಚಂಡಮಾರುತವನ್ನು ಹಿಂದೆಂದೂ ಕಂಡಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಆಂಫಾನ್‌ಗೆ ಪಶ್ಚಿಮ ಬಂಗಾಳದಲ್ಲಿ 72 ಬಲಿ; ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿಗೆ ದೀದಿ ಆಹ್ವಾನ

ಒಡಿಶಾದಲ್ಲೂ ಭಾರೀ ಅವಾಂತರವನ್ನೇ ಸೃಷ್ಟಿಸಿರುವ ಅಂಫಾನ್ ಚಂಡಮಾರುತ ಭಾರೀ ನಷ್ಟಕ್ಕೆ ಕಾರಣವಾಗಿದೆ. ಅಂಫಾನ್ ಚಂಡಮಾರುತದಿಂದಾಗಿ ಉಂಟಾಗಿರುವ ನಷ್ಟವನ್ನು ಲೆಕ್ಕ ಹಾಕುವುದರಲ್ಲಿ ಒಡಿಶಾ ಸರ್ಕಾರ ನಿರತವಾಗಿದೆ.

ಅಂಫಾನ್ ಚಂಡಮಾರುತದ ವಿಕೋಪಕ್ಕೆ ಗುರಿಯಾಗಿರುವ ಪಶ್ಚಿಮ ಬಂಗಾಳ ಹಾಗೂ ಒಡಿಶಾದೊಂದಿಗೆ ಇಡೀ ದೇಶ ಗಟ್ಟಿಯಾಗಿ ನಿಂತಿದೆ ಎಂದು ಪ್ರಧಾನಿ ಮೋದಿ ಇಂದು ಬೆಳಗ್ಗೆಯೇ ಘೋಷಿಸಿದ್ದರು.

'ಈ ಸವಾಲಿನ ಸಮಯದಲ್ಲಿ ಪಶ್ಚಿಮ ಬಂಗಾಳದ ಜೊತೆ ಇಡೀ ರಾಷ್ಟ್ರ ನಿಲ್ಲುತ್ತದೆ': ಪ್ರಧಾನಿ ಮೋದಿ

ಅದರಂತೆ ಎರಡೂ ರಾಜ್ಯಗಳಲ್ಲಿ ಉಂಟಾಗಿರುವ ನಷ್ಟದ ಮೌಲ್ಯಮಾಪನಕ್ಕಾಗಿ ಶೀಘ್ರದಲ್ಲೇ ಕೇಂದ್ರ ಗೃಹ ಸಚಿವಾಲಯದ ತಂಡ ರವಾನೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ