ಆ್ಯಪ್ನಗರ

ರಾಜಕೀಯ ನಿವೃತ್ತಿ ಹೊಂದಲು ಸಚಿವ ಗಿರಿರಾಜ್‌ ಸಿಂಗ್‌ ಇಂಗಿತ

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ರಾಜಕೀಯ ನಿವೃತ್ತಿ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ...

Vijaya Karnataka 25 Sep 2019, 7:43 am
ಮುಜಫ್ಫರ್‌ಪುರ: ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ರಾಜಕೀಯ ನಿವೃತ್ತಿ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೋದಿ ಸರಕಾರದ ಹಾಲಿ ಅವಧಿ ಮುಕ್ತಾಯದೊಂದಿಗೆ ಸಕ್ರಿಯ ರಾಜಕೀಯದಿಂದ ತಾವು ದೂರು ಸರಿಯುವುದಾಗಿ ತಿಳಿಸಿದ್ದಾರೆ.
Vijaya Karnataka Web Giriraj


ಭಾರತೀಯ ಮುಸ್ಲಿಮರೆಲ್ಲಾ ರಾಮನ ವಾರಸುದಾರರು : ಗಿರಿರಾಜ್ ಸಿಂಗ್

''ಮುಂದಿನ ವರ್ಷ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಬಹುಮತ ಸಾಧಿಸಿದರೆ ಮುಖ್ಯಮಂತ್ರಿ ಪಟ್ಟಕ್ಕೆ ಬಿರುಸಿನ ರೇಸ್‌ ನಡೆಯುವ ನಿರೀಕ್ಷೆ ಇದೆ. ಈ ರೇಸ್‌ನಲ್ಲಿ ತಮ್ಮದು ಮುಂಚೂಣಿ ಹೆಸರಾಗಿರಬಹುದೇ,'' ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ''ಖಂಡಿತ ಇಲ್ಲ. ನನ್ನ ರಾಜಕೀಯ ಜೀವನವೇ ಕೊನೆಯ ಘಟ್ಟದಲ್ಲಿದೆ. ಏನನ್ನೂ ನಿರೀಕ್ಷಿಸದೇ ರಾಜಕೀಯ ಪ್ರವೇಶಿಸಿದ ನಾನು ಸಂಸದ, ಸಚಿವನಾಗಿ ಸಾರ್ಥಕ ಸೇವೆ ಸಲ್ಲಿಸಿದ್ದೇನೆ. ಇದೇ ನನಗೆ ತೃಪ್ತಿ ತಂದಿದೆ. ಈಗಿನ ಮೋದಿ ಸರಕಾರದ ಅವಧಿ ಕೊನೆಗೊಂಡ ತರುವಾಯ ನಾನು ರಾಜಕೀಯ ನಿವೃತ್ತಿ ಹೊಂದಲು ಬಯಸಿದ್ದೇನೆ,'' ಎಂದು ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ