ಆ್ಯಪ್ನಗರ

ತಾಲಿಬಾನಿ ಕೃತ್ಯಕ್ಕೆ ಸಮ: ತಬ್ಲೀಗ್ ಸಭೆ ಖಂಡಿಸಿದ ಮುಕ್ತಾರ್ ಅಬ್ಬಾಸ್ ನಖ್ವಿ!

ಲಾಕ್‌ಡೌನ್ ಸಮಯದಲ್ಲಿ ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಖಂಡಿಸಿದ್ದಾರೆ. ತಬ್ಲೀಗ್ ಜಮಾತ್ ನಡೆ ತಾಲಿಬಾನಿಭಯೋತ್ಪಾದಕರ ಪಾಪ ಕೃತ್ಯಕ್ಕೆ ಸಮ ಎಂದು ನಖ್ವಿ ಹರಿಹಾಯ್ದಿದ್ದಾರೆ.

Vijaya Karnataka Web 1 Apr 2020, 3:05 pm
ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ಸಾರ್ವಜನಿಕವಾಗಿ ಗುಂಪಿ ಸೇರಿ ಕೊರೊನಾ ವೈರಸ್ ಹರಡಲು ಕಾರಣವಾಗಿರುವ ಆರೋಪ ಹೊತ್ತಿರುವ ತಬ್ಲೀಗ್ ಜಮಾತ್ ವಿರುದ್ಧ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಕಿಡಿಕಾರಿದ್ದಾರೆ.
Vijaya Karnataka Web Mukhtar Abbas Naqvi ptii
ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ಚಿ ತಾಲಿಬಾನಿಗಳ ಪಾಪ ಕೃತ್ಯಕ್ಕೆ ಹೋಲಿಸಿದ್ದಾರೆ.


ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯನ್ನು ತಾಲಿಬಾನಿಗಳ ಭಯೋತ್ಪಾದನಾ ಚಟುವಟಿಕೆಗಳಿಗೆ ಹೋಲಿಸಿರುವ ನಖ್ವಿ, ಈ ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹರಿಹಾಯ್ದಿದ್ದಾರೆ.

ತಬ್ಲಿಘಿ ಜಮಾತ್ ಸಭೆ: ಬೇಜವಾಬ್ದಾರಿ ನಡೆ ಎಂದು ಕಿಡಿಕಾರಿದ ಕೇಜ್ರಿ!

ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆದೇಶವಿದ್ದರೂ, ಧಾರ್ಮಿಕ ಸಭೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಸಾವಿರಾರು ಜನ ಒಂದೆಡೆ ಸೇರಿರುವುದು ತಾಲಿಬಾನಿಗಳ ಪಾಪ ಕೃತ್ಯಕ್ಕೆ ಸಮ ಎಂದು ನಖ್ವಿ ಗಂಭೀರ ಆರೋಪ ಮಾಡಿದ್ದಾರೆ.


ಇಡೀ ದೇಶ ಒಗ್ಗಟ್ಟಾಗಿ ಮರಕ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದರೆ, ಧಾರ್ಮಿಕ ಸಭೆ ಹೆಸರಲ್ಲಿ ವಬೈರಾಣು ಹರಡುವಿಕೆಗೆ ಕಾರಣವಾಗಿರುವವರು ಅಪರಾಧ ಮಾಡಿದ್ದಾರೆ ಎಂದು ನಖ್ವಿ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಎಲ್ಲಾ ಆದೇಶಗಳನ್ನು ಪಾಲಿಸುವಂತೆ ಹಲವು ಮುಸ್ಲಿಂ ಧಾರ್ಮಿಕ ಮುಖಂಡರು ಮನವಿ ಮಾಡಿರುವ ವಿಡಿಯೋವೊಂದನ್ನು ನಖ್ವಿ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ