ಆ್ಯಪ್ನಗರ

ತಾಜ್‌ಮಹಲ್ ಬದಲು 2,000 ಯುನಿವರ್ಸಿಟಿ ಕಟ್ಟಿದ್ದರೆ ಮುಸ್ಲಿಮರು ವಿದ್ಯಾವಂತರಾಗುತ್ತಿದ್ದರು: ಅಜಂ ಖಾನ್

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಗಮನ ಸೆಳೆಯುವ ಸಮಾಜವಾದಿ ನಾಯಕ ಮತ್ತೀಗ ತಾಜ್ ಮಹಲ್ ಬದಲು ವಿಶ್ವವಿದ್ಯಾಲಯ ಕಟ್ಟಿಸಬೇಕಿತ್ತು ಎಂದಿದ್ದಾರೆ.

TIMESOFINDIA.COM 2 Aug 2019, 1:07 pm
ಹೊಸದಿಲ್ಲಿ: ತಾಜ್ ಮಹಲ್ ಬದಲು ವಿಶ್ವವಿದ್ಯಾಲಯಗಳನ್ನು ಕಟ್ಟಿಸಿದ್ದರೆ ಮುಸ್ಲಿಂ ಸಮುದಾಯ ಜಗತ್ತಿನ ಹೆಚ್ಚು ವಿದ್ಯಾವಂತ ಸಮುದಾಯವಾಗಿರುತ್ತಿತ್ತು ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಹೇಳಿದ್ದಾರೆ.
Vijaya Karnataka Web Taj Mahal


ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಅವರು, ಮೊಘಲ್ ದೊರೆಗಳು ಒಂದು ತಾಜ್ ಮಹಲ್ ಬದಲು ವಿಶ್ವವಿದ್ಯಾಲಯ, ಶೈಕ್ಷಣಿಕ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ಕೊಡಬಹುದಿತ್ತು. ಒಂದು ತಾಜ್ ಮಹಲ್ ಬದಲು 2,000 ವಿಶ್ವವಿದ್ಯಾಲಯಗಳನ್ನು ಕಟ್ಟಬಹುದಿತ್ತು. ಭಾರತವು ಶಿಕ್ಷಣದ ಜಾಗತಿಕ ಕೇಂದ್ರವಾಗುತ್ತಿತ್ತು ಮತ್ತು ಮುಸ್ಲಿಂ ಸಮುದಾಯ ವಿಶ್ವದ ಅತ್ಯಂತ ವಿದ್ಯಾವಂತ ಸಮುದಾಯವಾಗಿರುತ್ತಿತ್ತು ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಹೇಳಿಕೊಂಡಿದ್ದಾರೆ.

ತಾಜ್ ಮಹಲ್‌ಗೆ ಸಂಬಂಧಿಸಿದಂತೆ ವಿವಾದ ಎದ್ದಾಗಲೆಲ್ಲ ಅಜಂ ಖಾನ್ ಸದಾ ಪ್ರತಿಕ್ರಿಯಿಸುತ್ತಾರೆ ಎಂಬುದು ಇಲ್ಲಿ ಗಮನಾರ್ಹ. ತಾಜ್ ಮಹಲ್ ಕೆಡವಲು ನಾನು ಸಿದ್ಧ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದರ ಮುಂದಾಳತ್ವ ವಹಿಸಲಿ ಎಂದು ಕಳೆದ ವರ್ಷ ಅವರು ಸವಾಲು ಹಾಕಿದ್ದರು.

ತಾಜ್ ಮಹಲ್ ಶಿವ ಮಂದಿರವಾಗಿತ್ತು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿರುವ ಮಾತುಗಳನ್ನು ಉಲ್ಲೇಖಿಸಿದ್ದ ಅವರು, ಶಿವ ಮಂದಿರವಾಗಿದ್ದರೆ, ಅದನ್ನು ಖಂಡಿತ ಕೆಡವಲೇಬೇಕು. ಈ ಕೆಲಸಕ್ಕಾಗಿ ಭಾರತೀಯ ಜನತಾ ಪಕ್ಷದ ಜತೆ ಕೈ ಜೋಡಿಸಲು ನಾನು ತಯಾರಿದ್ದೇನೆ. ತಾಜ್ ಮಹಲ್ ಶಿವ ದೇವಾಲಯವಾಗಿತ್ತು ಎಂದು ಯೋಗಿ ನನಗೆ ಹೇಳಿದ್ದಾರೆ. ಅದು ಸತ್ಯವಾಗಿದ್ದರೆ ನಾವದನ್ನು ಕೆಡವಿ ಹಾಕಲೇಬೇಕು. ಕಟ್ಟಡಕ್ಕೆ ಮೊದಲ ಕೊಡಲಿ ಏಟು ಯೋಗಿ ಹಾಕಲಿ, ಬಳಿಕ ನಾನು ಹಾಕುತ್ತೇನೆ. ವಿಶ್ವ ಪ್ರಸಿದ್ಧ ಸ್ಮಾರಕವನ್ನು ಕೆಡವಲು ನನ್ನ ಜತೆ 10- 20 ಸಾವಿರ ಮುಸ್ಲಿಮರನ್ನೂ ಕರೆದುಕೊಂಡು ಬರುತ್ತೇನೆ,' ಎಂದು ಅಜಂ ಖಾನ್ ವ್ಯಂಗ್ಯವಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ